Saturday, January 8, 2011

ನನ್ನ ಸ್ವರಚಿತ ಕಿರು ಕವನಗಳು

ಚೈತ್ರ
ವನ ಸಿರಿಯ ಸಿಂಗರಿಸಿ ವಸಂತ ಬಂದ
ಮರಗಿಡಕೆ ಚೈತ್ರದ ಚಿಗುರನ್ನು ತಂದ
ಪ್ರಕೃತಿಗೆ ಹಸಿರುಡುಗೆ ತೊಡಿಸುತ್ತಾ ನಿಂದ
ಬಗೆ ಬಗೆಯ ಹೂವರಳಿ ಬಾನಲ್ಲಿ ಹರಡಿಹುದು
ಬಣ್ಣದ ಚಿತ್ತಾರ ಅಲ್ಲಲ್ಲಿ ಮೂಡಿಹುದು
ಮಾಮರದ ಮರೆಯಲ್ಲಿ ಕೋಗಿಲೆಯು ಕುಳಿತಿಹುದು
ಚಿಗರನ್ನು ಸವಿಯುತ್ತ ಕೂಹು ಕೂಹು ಹಾಢಿಹುದು
ಹೊಂಗೆಯ ಮರವು ತಂಗಾಳಿ ಬೀಸಿತ್ತು
ಮಧುರ ಸಾರವನರಿಸಿ ದುಂಬಿಯು ಬಂದಿತ್ತು
ಹೊಸ ವರುಷ ಹೊಸ ಹರುಷ ಹೊಸ ಬಯಕೆ ತುಂಬಿರಲು
ಜೀವನಕೆ ಹೊಸ ಬಗೆಯ ಉತ್ಸಾಹ ಬಂದಿಹುದು
ಬೇವಿನ ಕಹಿ ನೆನಪು ಬಾಳೆಲ್ಲ ತುಂಬಿರಲು
ಹೊಸ ವರುಷ ಸಿಹಿಯಾದ ಸವಿಜೇನು ತಂದಿಹುದು


:- ಅರಹಳ್ಳಿ ಕಾವೆಂ ಶ್ರೀನಿವಾಸಮೂರ್ತಿ
ಬೆಂಗಳೂರು


ಒಲೆಯ ಮೇಲೆ ಹಾಲು
ಕುಣಿಯುತಿತ್ತು ಕಾಲು
ಅದನ ನೋಡಿ ಪುಟ್ಟ ಕಂದ
ಸುರಿಸುತ್ತಿತ್ತು ಜೊಲ್ಲು


ತೊಟ್ಟಿಲಲ್ಲಿ ಪುಟ್ಟ ಕಂದ ನನ್ನ ತಂಗಿ ಚೆರಿ
ಅವಳ ಹಾಡೀ ಹೊಗಳುತಿತ್ತು ಜಾಣ ಗಿಳಿ ಮರಿ
ಚಿಕ್ಕಿ ನೋಡೀ ಚಕ್ಕನೆ ಕಣ್ಣ ಬಿಟ್ಟಿತು
ಪಕ್ಕದಲ್ಲಿ ಅಕ್ಕ ನೋಡಿ ನಕ್ಕು ನಲಿಯುತು

ಮಿಸ್ಸ್ ಅಂದ್ರೆ ಮಿಸ್ಸ್ ಅನುರಾದ ಮಿಸ್ಸ್
ನಮ್ಮ ಸ್ಕೂಲಿಗೆಲ್ಲ ಬಾಳ ಫೇಮಸ್ಸು
:- ಅರಹಳ್ಳಿ ಕಾ.ವೆಂ ಶ್ರೀನಿವಾಸಮೂರ್ತಿ
ಬೆಂಗಳೂರು




ನನ್ನರಸಿ
ನನ್ನರಸಿ ನನ್ನರಿಸಿ
ನಾ ಬಂದೆ ನಿನ್ನರಿಸಿ
ಹಸಿರುಡುಗೆ ಸಿಂಗರಿಸಿ
ಬಿಸಿ ಕಾಪಿ ಕಲಬೆರೆಸಿ
ನೀ ಬಂದೆ ನನ್ನವರಿಸಿ
ಸುಂದರ ಕನಸನು ನಾ ಬಯಸಿ
ಒಂಟೀ ಜೀವನ ಬದಿಗಿರಿಸಿ
ಕೈ ಇಡಿದೆ ನಾ ನಿನ್ನವರಿಸಿ
:- ಅರಹಳ್ಳಿ ಕಾ.ವೆಂ ಶ್ರೀನಿವಾಸಮೂರ್ತಿ
ಬೆಂಗಳೂರು

Friday, December 24, 2010

ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್

ಡಬ್ಬಿಂಗ್ ಗೆ ನನ್ನ ವಿರೊದ
ಮಾನ್ಯರೆ ಕನ್ನದ ಅಭಿಮಾನಿಗಳೆ ಇದೊಂದು ಅವೈಜ್ನಾನಿಕ, ಯಾವ ಪುರುಷಾರ್ಥಕ್ಕೆ ಅಂತ ಗೊತ್ತಾಗುತ್ತಿಲ್ಲ ಕನ್ನಡೇತರರಿಗೆ ಕನ್ನಡಿಯಲು ಅವಕಾಶ ನೀಡಲಾಗದಂತ ಸನ್ನಿವೇಶ, ಕನ್ನಡ ಭಾಷೆಗೆ ಇದರಿಮ್ದ ಬಹು ದೊಡ್ಡ ಪೆಟ್ಟಾಗಲಿದೆ, ಪಕ್ಕದ ತಮಿಳುನಾಡು, ಆಂದ್ರ ಪ್ರದೇಶ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಬಹುತೇಕ ಅನ್ಯಭಾಷೆಯ ಸಿನಿಮಾಗಳನ್ನು ತಮ್ಮ ತಮ್ಮ ಭಾಷೆಗೆ ಡಬ್ ಮಾಡಿ ಅಲ್ಲಿನ ಜನಕ್ಕೆ ತೋರಿಸಿಕೊಡುತ್ತಿದ್ದಾರೆ ಇದರಿಂದ ಅವರ ಭಾಷೆಗೆ ಯಾವುದೇ ತೊಂದರೆಯಾಗಿಲ್ಲ ಜೊತೆಗೆ ಭಾಷ ಸಾಹಿತ್ಯಕ್ಕು ಕುತ್ತು ಬಂದಿಲ್ಲ ಅಂದ ಹಾಗೆ ನಮ್ಮ ಕನ್ನಡ ಭಾಷೆಗೆ ಇದರಿಂದ ಆಗುವ ಅನಾಹುತವಾದರು ಏನು? ಒಬ್ಬ ಕನ್ನಡೇತರರಿಗೆ ಕನ್ನಡ ಕಲಿಸುವುದು ತಪ್ಪಾ? ಅಥವಾ ಕನ್ನಡ ಕಲಿಯಲು ಅವಕಾಶ ಮಾಡಿಕೊಡುವುದು ತಪ್ಪಾ? ಬಂಧುಗಳೆ ನನ್ನ ಒಂದು ಅನುಭವ ಹೀಗಿದೆ ಕೆಲವು ದಿನಗಳ ಹಿಂದೆ ತಮಿಳುನಾಡಿನ ಒಂದು ಪ್ರದೇಶದಲ್ಲಿ ನಮ್ಮ ಕನ್ನಡದ ಕಣ್ಮಣಿ ಡಾ ರಾಜ್ ರವರ ಅಭಿಮಾನಿಯೊಬ್ಬರಿಗೆ ಕನ್ನಡವೇ ಗೊತ್ತಿಲ್ಲ ಆದರೆ ಅವರು ಡಾ ರಾಜ್ ರವರ ಅಪ್ಪಟ ಅಭಿಮಾನಿ ಪ್ರಶ್ನಿಸಿದಾಗ ಕಂಡು ಬಂದಿದ್ದು ನನ್ನ ಮೆಚ್ಚಿನ ಹೀರೊ ಸಿನಿಮಾ ತಮಿಳಿನಲ್ಲಿ ನೋಡಿದ್ದೇನೆ ಅವರು ತಮಿಳು ಮಾತಾಡುತ್ತಾರೆ ಅವರ ಕನ್ನಡ ಸಿನಿಮಾ ನಾನು ನೋಡಿಲ್ಲ ನನಗೆ ಅದು ಗೊತಿಲ್ಲ ಅಂತ, ಇದೇ ತರ ನನ್ನ ಸ್ನೇಹಿತರಿಬ್ಬರು ಅಪ್ಪಟ ಕನ್ನಡವರಾಗಿದ್ದು ತೆಲುಗಿನ ಚಿರಂಜೀವಿ ಅಭಿಮಾನಿಗಳು ಅವರ ಸಿನಿಮಾದ ಸಂಭಾಷಣೆಗೆ ಮಾರು ಹೋದ ಅವರಿಬ್ಬರು ಕನ್ನಡ ಭಾಷೆ ಬಿಟ್ಟು ತೆಲುಗಿನಲ್ಲೆ ಮಾತಾಡಲು ನಿರ್ಧರಿಸಿದ್ದಷ್ಟೆ ಅಲ್ಲದೆ ಬೇರೆವರಿಗೂ ಹೇಳ ಹೊರಟಿದ್ದರು, ಬಂಧುಗಳೆ ಸಿನಿಮಾ ಜನಸಾಮಾನ್ಯರ ಅತಿ ಮೆಚ್ಚಿನ ಮಾದ್ಯಮ ಜನ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ರೂಡಿ ತಮ್ಮ ಮೆಚ್ಚಿನ ನಾಯಕ ನಾಯಕಿಯರನ್ನು ಹಿಂಬಾಲಿಸುವುದು ಅವರವರ ಇಚ್ಚೆ, ಬಂದುಗಳೆ ಬೇರೆ ಬೇರೆ ಭಾಷೆಯವರು ತಮ್ಮ ನೆಚ್ಚಿನ ನಾಯಕ ನಾಯಕಿಯರ ಸಿನಿಮಾ ಯಾವುದೇ ಭಾಷೆಯಲ್ಲಿದ್ದರು ಅದನ್ನು ಅವರವರ ಭಾಷೆಗೆ ಡಬ್ ಮಾಡಿ ನೋಡುತ್ತಾರೆ ಅದರೆ ನಮ್ಮಲ್ಲಿ ನಮ್ಮ ಸಂಸ್ಕೃತಿಕೆ ದಕ್ಕೆಯಾಗುದೆಂಬ ಪೊಳ್ಳು ನಂಬಿಕೆಯಿಂದ ನಮಗೆ ನಾವೇ ವಂಚನೆಯಸಗುತಿದ್ದೆವೆ ಅಷ್ಟೆ ಅಲ್ಲ ನಮ್ಮ ಕನ್ನಡ ಭಾಷೆಯನ್ನು ಅವಸಾನದೆಡೆಗೆ ನಾವೇ ತಳ್ಳುತ್ತಿದ್ದೆವೇ.
ಬಂಧುಗಳೆ ಪ್ರಸಿದ್ದ ನಟರ ಸಿನಿಮಾಗಳು ಉದಾ: ರಜಿನಿಕಾಂತ್ ರವರ ಸಾಕಷ್ಟು ಸಿನಿಮಾಗಳು ತೆಲುಗು, ಮಲೆಯಾಳಂ, ಹಿಂದಿ ಭಾಷೆಗಳಿಗೆ ಡಬ್ ಆಗಿತ್ತಿವೆ, ತೆಲುಗಿನ ಕೆಲವು ಪ್ರಮುಖ ನಟ ನಟಿಯರ ಸಿನಿಮಾಗಳು ಸಹ ತಮಿಳು ಮಲೆಯಾಳಂ ಮತ್ತು ಹಿಂದಿ ಭಾಷೆಗೆ ಡಬ್ಬ ಅಗಿತ್ತಿವೆ ಅಷ್ಟೆ ಅಲ್ಲದೆ ನಮ್ಮ ಕನ್ನಡ ಸುಮಾರು ಚಿತ್ರಗಳು ಕೂಡ ತೆಲುಗು ಮತ್ತು ತಮಿಳಿಗೆ ಡಬ್ ಅಗಿದ್ದಲ್ಲೆ ಅದನ್ನು ನಮ್ಮದ ರಾಜ್ಯದಲ್ಲು ಪ್ರದರ್ಶಿಸುತ್ತಿದ್ದಾರೆ ಇದರಿಂದ ನಮ್ಮ ಭಾಷೆಯ ಮೇಲೆ ಅಗುವ ದುಶ್ಪರಿಣಾಮಗಳಿಗೆ ಬಗ್ಗೆ ಯಾಕೆ ಬುದ್ದಿವಂತರು,ಸಾಹಿತಿಗಳು, ಕನ್ನಡಾಭಿಮಾನಿಗಳು ತಲೆ ಕೆಡಸಿಕೊಳ್ಳುತ್ತಿಲ್ಲ? ಡಬ್ ಮಾಡುವದರಿಂದ ನಮ್ಮ ಭಾಷೆ ಮತ್ತು ಸಂಸ್ಕೃತಿಗೆ ದಕ್ಕೆ ಅನ್ನುವುದಾದರೆ ತಮಿಳು, ತೆಲುಗು, ಮಲೆಯಾಳಂ ಭಾಷೆಗಳಿಗೆ ಅದ ನಷ್ಟವೇನು? ಅವರ ಸಾಹಿತ್ಯ, ಸಂಸ್ಕೃತಿಗೆ ಆದ ದಕ್ಕೆಯೇನು?
ತೆಲುಗು ಸಿನಿಮಾದಲ್ಲಿನ ಪ್ರಸಿದ್ದ ತಾರೆ ಕನ್ನಡತಿ ದಿವಂಗತ ನತದೃಷ್ತ ತಾರೆ ಸೌಂದರ್ಯ ಅವರ ಸಿನಿಮಾ ಯಾವುದೆ ಭಾಷೆ ಸಿನಿಮಾ ಅದರು ಅದು ತೆಲುಗಿಗೆ ಡಬ್ ಆಗುತ್ತೆ, ತಮಿಳಿನ ಸೂಪರ್ ಸ್ಟಾರ್ ಕನ್ನಡದ ರಜಿನಿಕಾಂತ ರ ಯಾವುದೆ ಭಾಷೆಯ ಸಿನಿಮಾ ಆದರು ಅದು ತಮಿಳಿಗೆ ಡಬ್ ಅಗುತ್ತದೆ ಅದಕ್ಕೆ ಅವರು ಹೇಳುವುದು ನಮ್ಮ ನೆಚ್ಚಿನ ನಟ ನಮ್ಮ ರಾಜ್ಯದ ನಟ, ಆವರಿಗೆ ಅವರು ಸೂಚಿಸುವ ಗೌರವ, ಅವರ ಮೇಲೆನ ಪ್ರೀತಿ ಅಭಿಮಾನ, ಬಂದುಗಳೆ ಇವರಿಬ್ಬರು ನಮ್ಮ ಕನ್ನಡ ನೆಲದ ಕಣ್ಮಣಿಗಳು ಅಪ್ಪಟ ಕನ್ನಡ ಕುಡಿಗಳು ಆದರೆ ನಾವು ಅವರನ್ನು ನಮ್ಮವರಂತೆ ಎಂದು ನೋಡಲಿಲ್ಲ ಅವರ ಸಿನಿಮಾಗಳನ್ನು ಅನ್ಯಭಾಷೆಯಲ್ಲಿ ನೋಡಿ ಸಂತೋಷಪಟ್ಟಿದ್ದೇವಿ ಯಾಕೆ? ಅಚ್ಚ ಕನ್ನಡದ ಅವರಿಗೆ ನಮ್ಮ ಕನ್ನಡ ಭಾಷೆಯಲ್ಲೇಕೆ ಅವಕಾಶ ಕೊಡಲಾಗಲಿಲ್ಲ ಕನಿಷ್ಟ ಅವರ ಸಿನಿಮಾಗಳನ್ನು ಡಬ್ ಮಾಡಿ ನೋಡಲು ಅಗಿತ್ತಲ್ಲ ಇದಕ್ಕೆ ಅಡ್ಡ ಬಂದಿದ್ದು ನಮ್ಮ ಸಂಸ್ಕೃತಿಕೆ ದಕ್ಕೆಯಾಗಿತ್ರೆ ಎಂಬ ಅವೈಜ್ನಾನಿಕ ಅಂಶ.

Friday, October 1, 2010

ಕನ್ನಡಿಗ

ಎದ್ದು ನಿಲ್ಲು ಕಂದನೆ
ಕನ್ನಡದ ಕಂದನೆ

ಸಿರಿಗನ್ನಡ ಉಳಿಸಲು
ಭಾಷೆ ಬೆಳಸಿ ಬೆಳಗಲು

ನಾಡು ನುಡಿಯ ನೋಡು
ತಾಯಿ ಸೇವೆ ಮಾಡು

ಭಾಷೆ ಬೇದ ಅಳಿಸು
ಕನ್ನಡತನ ಉಳಿಸು

ಕುವೆಂಪು ಬೇಂದ್ರೆ ನಾಡು
ನರಸಿಂಹ ಸ್ವಾಮಿ ಹಾಡು

ನಮ್ಮ ಹೆಮ್ಮೆ ನಾಡು
ಕರುನಾಡ ಕನ್ನಡ ನಾಡು

Thursday, September 30, 2010

ಮುನ್ನುಡಿ

ನಮಸ್ಕಾರ ಓದುಗ ಮಿತ್ರರಿಗೆ


ಕರುನಾಡ ಸಿರಿಗನ್ನಡ ಸಂಪದಕ್ಕೆ ಸ್ವಾಗತ ಸುಸ್ವಾಗತ,


ಅತ್ಮೀಯಾ ಕನ್ನಡ ಸಹೋದರ ಸಹೋದರಿಯರೇ ನನ್ನ ಹೊಸ ಕರುನಾಡ ಸಿರಿಗನ್ನಡ ಸಂಪದ ಬ್ಲಾಗ್ ಲೋಕಕ್ಕೆ ನಿಮಗೆಲ್ಲರಿಗೂ ಅತ್ಮೀಯಾ ಸ್ವಾಗತ,

ಇದು ಕನ್ನಡ ನಾಡಿನ ಜಲ ಭಾಷೆಗಳ ವಿಸ್ತೃತ ಮತ್ತು ಸಂಕ್ಷಿಪ್ತ ಮತ್ತು ಸವಿವರಗಳ ಸಮಗ್ರ ಮಾಹಿತಿಯ ಸುಂದರ ಲೋಕದ ಅಂತರ್ಜಾಲ