Sunday, August 28, 2011

ಭ್ರಷ್ಟಾಚಾರಿ ವಿರೋದಿ ಅಣ್ಣಾ ಮತ್ತು ಹೆಗಡೆ


1947 ಆಗಸ್ಟ 15 ಮಧ್ಯ ರಾತ್ರಿ ಅಖಂಡ ಭಾರತಕ್ಕೆ ಪರಕೀಯರ ಆಳ್ಬಿಕೆಯಿಂದ ಸ್ವತಂತ್ರ ಪಡೆದ ದಿನ, ಪರಕೀಯರ ದಬ್ಬಾಳಿಕೆಯಿಂದ ಬೇಸತ್ತ ಭಾರತ ಸ್ವತಂತ್ರ ಭಾರತವಾಯಿತು, ಅಲ್ಲಿಯ ತನಕ ಭಾರತದ ಮೇಲೆ ಪರಕೀಯರ ಆಕ್ರಮಣ ನಿರಂತರವಾಗಿ ನಡೆಯುತಿತ್ತು, ಭಾರತದ ಅತ್ಯಮೂಲ್ಯ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯಲು ಬಂದ ವಿದೇಶಿಯರು ನಿದಾನವಾಗಿ ಇಲ್ಲೆ ನೆಲೆಯೂರಿ ನಮ್ಮನ್ನೇ ತುಳಿದು ನಮ್ಮ ಮೇಲೆ ಅಧಿಕಾರ ಚಲಾಯಿಸಿದ್ದರು ಇದಕ್ಕೆ ಇದ್ದ ಒಂದೇ ಒಂದು ಕಾರಣ ನಮ್ಮಲ್ಲಿನ ಒಗ್ಗಟ್ಟಿನ ಕೊರತೆ, ಪ್ರಾಂತ್ಯ ಪ್ರಾಂತ್ಯಗಳ ಮೇಲಿನ ಅಸಾಮಾಧಾನ ತಮ್ಮ ತಮ್ಮಲ್ಲೇ ಕಚ್ಚಾಟದ ಪ್ರತಿಫಲವೇ ಪರಕೀಯರ ಆಳ್ವಿಕೆ .
1857 ದೇಶಭಕ್ತಿಯ ಪರಮಾಧಿಯ ಕಾಲ ವಿದೇಶಿಗರ ಆಳ್ವಿಕೆಯ ವಿರುದ್ಧ ಸಿಡೆದೆದ್ದ ಭಾರತ ಪುತ್ರರು ನಿರಂಂತರವಾಗಿ ಹೋರಾಡಿ ಕೊನೆಗೆ 1947 ರ ಆಗಸ್ಟ್ 15 ರ ಮಧ್ಯ ರಾತ್ರಿ ಸ್ವತಂತ್ರ ತಂದು ಕೊಟ್ಟರು ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ನಾಂದಿ ಹಾಡಿದರು, ಅಖಂಡ ದೇಶದೆಲ್ಲಡೆ ವಂದೇ ಮಾತರಂ, ಜೈ ಭಾರತ್ ಮಾತಾ ಕೀ ಮೊಳಗಿತು, ಅಂದಿನಿಂದ ಭಾರತ ವಿಶ್ವದೆಲ್ಲಡೆ ಶಾಂತಿ ಸಂದೇಶವನ್ನು ಮತ್ತೊಮ್ಮೆ ಸಾರಿತು, ಪ್ರಪಂಚಕ್ಕೆ ಅಹಿಂಸಾ ತತ್ವ ಹೇಳಿಕೊಟ್ಟ ಮೊಟ್ಟ ಮೊದಲ ರಾಷ್ಟ್ರವಾಯಿತು, ಅಹಿಂಸಾವಾದಿ ಮೋಹನ್ ದಾಸ್ ಕರಮಚಂದ್ ಗಾಂಧಿ ಭಾರತದ ಪಿತಾಮಹನಾಗಿ ಮಹಾತ್ಮ ರಾದರು.
65 ವರ್ಷಗಳಲ್ಲಿನ ಭಾರತದ ಸಾಧನೆ ಹಲವಾರು ಕ್ಷೇತ್ರಗಳ ಯಶಸ್ವಿ ಸಾಧಿಸಿದ್ದರು ಭ್ರಷ್ಟಾಚಾರದಲ್ಲಿ ಅತ್ಯದ್ಭುತ ಸಾದನೆ ಮಾಡಿದೆ ಎನ್ನುವುದು ಅತ್ಯಂತ ದುಃಖದ ವಿಚಾರ, ಸಾಂಪ್ರದಾಯಕ ಸಮಾಜದಲ್ಲಿನ ನಾಚಿಕೆ ವಿಷಯ, ಹಂತ ಹಂತವಾಗಿ ಭ್ರಷ್ಟಾಚಾರ ಹೆಮ್ಮರವಾಗಿ, ಪೆಡಂಭೂತವಾಗಿ ಪ್ರಜಾಪ್ರಭುತ್ವದಲ್ಲ್ಲಿ ತನ್ನ ಸ್ಥಾನವನ್ನು ಪಡೆಯಿತು, ನಮನ್ನಾಳುವ ಪ್ರಜಾಪ್ರಭುತ್ವದ ಪ್ರತಿನಿಧಿಗಳಿಂದ ಅಡಳಿತ ನಡೆಸುವ ಅಧಿಕಾರಿಗಳವರಗೆ ಸ್ವೇಚ್ಛಾರವಾಗಿ ಭ್ರಷ್ಟಾಚಾರ ರುದ್ರ ನರ್ತನ ಮಾಡಿತ್ತು,
ಭಾರತದಂತಹ ಸಂಪದ್ಭರಿತ ರಾಷ್ಟ್ರದಲ್ಲಿ ಭ್ರಷ್ಟಾಚಾರ ಅತ್ಯಂತ ಕೆಟ್ಟದಾದ ನಾಗರೀಕ ಸಮಾಜ ಬಂಧುಗಳು ನಾಚಿಕೆ ಪಡುವಂತಹ ಹೇಯ ಪದ್ದತಿಯೇ ಸರಿ, ನಮನ್ನಾಳುವ ಪ್ರತಿನಿಧಿಗಳು ತಮ್ಮ ಬುದ್ಧಿವಂತಿಕೆಯಿಂದ ಆಗಾಗ ಇದರ ಬಗ್ಗೆ ಮಾರುದ್ದದ ಭಾಷಣಗಳನ್ನು ಸಾರ್ವಜನಿಕವಾಗಿ ನೀಡಿ ತಮ್ಮ ಬುದ್ದಿವಂತಿಕೆ ಮೆರೆದರೆ ವಿನಃ ಇದರ ವಿರುದ್ದ ಪ್ರಾಮಾಣಿಕ ಹೋರಾಟ ಮಾಡಲಿಲ್ಲ
ಬಂಧುಗಳೇ ಪ್ರಕೃತಿಯ ನೈಸರ್ಗಿಕ ಸಹಜ ನಿಯಮವೊಂದಿದೆ ಯಾವುದೆ ವಸ್ತುವಾಗಲಿ, ಕ್ರಿಯೆಯಾಗಲಿ, ಪದ್ಧತಿಯಾಗಲಿ ಸೃಷ್ಠಿಯಾದ ಮೇಲೆ ನಾಶವೂ ಅಗಬೇಕು ಇದು ವೈಜ್ನಾನಿಕ ಸಿದ್ಧಾಂತವೂ ಹೌದು, ಅಂತೆಯೇ ನಮ್ಮ ಭ್ರಷ್ಟಾಚಾರವೂ ನಾವಾಗಿಯೇ ಸೃಷ್ಠಿಸಿದ್ದು ನಮ್ಮಿಂದಲೇ ನಾಶವಾಗಬೇಕು ಇದಕ್ಕೆ ಸಾಕಷ್ಟು ಅವಕಾಶಗಳು ನೀಡಿಲಾಯಿತು, ಸುಧಾರಣೆ ಮಾತ್ರ ಶೂನ್ಯ, ಕೆಲವೂ ಇಲಾಖೆಗಳಿಗೆ ಭ್ರಷ್ಟಾಚಾರದ ಪರಮಾಧಿಕಾರದ ಇಲಾಖೆ ಅಂತ ಪಟ್ಟವನ್ನು ಸಹ ಕಟ್ಟಲಾಯಿತು, ಆದರೆ ನಾಚಿಗೇಡಿನ ಅಧಿಕಾರಿಶಾಹಿ ವರ್ಗ ಇದ್ಯಾವುದನ್ನೂ ಲೆಕ್ಕಿಸದೆ ತನ್ನ ಪಾಡಿಗೆ ಸಾರ್ವಜನಿಕವಾಗಿ ಭ್ರಷ್ಟಾಚಾರವನ್ನು ನಿರಂತರವಾಗಿ ನಡೆಸುಕೊಂಡು ಬರುತಿತ್ತು, ನೀಡಲಾದ ಅವಕಾಶಗಳೆಲ್ಲವೂ ಮುಗಿಯುತ್ತಾ ಬಂತು
ಬಂಧುಗಳೆ ಮಹಾಭಾರತದ ಒಂದು ಪ್ರಸಂಗ : ಮಹಾಭಾರತದ ಸೂತ್ರದಾರನೆನಿಸಿದ ಶ್ರೀಕೃಷ್ಣ ಪರಮಾತ್ಮ ಶಿಶುಪಾಲನಿಗೆ ನೂರು ತಪ್ಪುಗಳನ್ನು ಮನ್ನಿಸುವ ಮತ್ತು ಅದರ ನಂತರದ ತಪ್ಪಿಗೆ ತಕ್ಕ ಶಿಕ್ಷೆ ವಿಧಿಸಿವನೆಂದು ಹೇಳಿದ್ದ ಅದರಂತೆ ಶಿಶುಪಾಲನ ನೂರು ತಪ್ಪುಗಳ ನಂತರ ನೂರ ಒಂದನೇಯ ತಪ್ಪಿಗೆ ಮೃತ್ಯುವೆ ಅವನಿಗೆ ಶಿಕ್ಷೆಯಾಗಿ ಕಾದಿತ್ತು. ಶ್ರೀಕೃಷ್ಣನ ಸೋದರ ಮಾವ ಕಂಸನ ದಬ್ಭ್ಭಾಳಿಕೆ ,ನೀಚ ಕೃತ್ಯಗಳು, ಹಿಂಸಾ ಪ್ರವೃತ್ತಿಯೇ ಅವನನ್ನು ಮೃತ್ಯುವಿನೆಡೆಗೆ ನೂಕಿತು, ನಮಗೆಲ್ಲ ಗೊತ್ತಿರುವಂತೆ ದೇವರು (ಶ್ರೀ ವಿಷ್ಣು ಪರಮಾತ್ಮ) ದುಷ್ಟ ಸಂಹಾರಕ್ಕೆ ಶಿಶ್ಟರ ರಕ್ಷಣೆ ಗೆ ಭೂಮಿ ಮೇಲೆ ದಶಾವತಾರವೆತ್ತಿದ ಅನ್ನುವ ಸಂಗತಿ, ಆಗಾಗ ನಮ್ಮಲ್ಲಿ ಇದಕ್ಕೆ ಒಮ್ಮತವೂ ಇರಲಿಲ್ಲ ಕಾರಣ ಆ ದೇವರು ತನ್ನ ದಶಾವಾತರವನ್ನು ಭೂಮಿ ಮೇಲೆ ಅಂದರೆ ಅದೂ ಭಾರತದಲ್ಲೇ ಯಾಕೆ ಅವತರಿಸಬೇಕು? ನಮ್ಮ ಭರತ ಖಂಡದಲ್ಲಿ ಅಷ್ಟೊಂದು ದುಷ್ಟರಿದ್ದರೇ?, ನಾಗರಿಕ ಬಂದುಗಳೇ ಇತ್ತಿಚಿನ ನಮ್ಮ ಭಾರತ ವ್ಯವಸ್ಥೆ, ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಅನ್ಯಾಯ, ಅನೀತಿ , ಹಿಂಸೆ, ದೌರ್ಜನ್ಯ, ಭ್ರಷ್ಟಾಚಾರ, ಮೋಸ, ಧಗ, ವಂಚನೆ ಇವೆಲ್ಲವನ್ನು ನೋಡುತಿದ್ದರೆ ಆ ದೇವರು ಹತ್ತು ಅವತಾರ ಅವತರಿಸಿ ದುಷ್ಟರನ್ನು ಮಟ್ಟ ಹಾಕಿರಲು ಬಹುದು ಅನ್ನಿಸುತ್ತದೆ,
ಇಂತಹ ಭ್ರಷ್ಟ ವ್ಯಸ್ಥೆಯನ್ನು ನೋಡಲು ಆ ದೇವರನ್ನೆ ಹನ್ನೊಂದನೇ ಅವತಾರದಲ್ಲಿ ಭೂಮಿಗೆ ಇಳಿದು ಬಾ ಅಂತ ಬೇಡಿಕೊಳ್ಳುವ ಕಾಲ ಸನ್ನಿಹಿತವಾಗ್ಗಿತ್ತು ಅಂತ ಕಾಣುತ್ತೆ ಅವನ ಹನ್ನೋಂದನೆ ಅವತಾರ ಅಣ್ಣಾ ಹಜಾರೆ ಎಂದರೆ ತಪ್ಪಾಗಲಾರದು
74 ವರ್ಷದ ವಯೋವೃದ್ಧ, ಕೃಶ ದೇಹ, ಶಾಂತಿಯ ಸಂಕೇತದ ಅಪ್ಪಟ ಭಾರತೀಯ ವೇಷ ಭೂಷಣ, ತಲೆಯ ಮೇಲೆ ಪ್ರಪಂಚಕ್ಕೆ ಶಾಂತಿ, ಅಹಿಂಸಾ ಸಂದೇಶ ನೀಡಿದ ಗಾಂಧಿ ಟೋಪಿ, ಮುಖದ ಮೇಲೆ ಸಾಧನೆ ಗುರಿ ಮುಟ್ಟುವ ಆತ್ಮವಿಶ್ವಾಸದ ಮಂದಹಾಸದ ಮುಗುಳ್ನಗೆಯ ಬಿಡಿಗಾಸಿನ ದಾಸಯ್ಯನ ಒಂದೇ ಒಂದು ಕೂಗು ಭ್ರಷ್ಟ ಪ್ರಜಾಪ್ರಭುತ್ವಕ್ಕೆ ಕರೆಗಂಟೆಯಾಗಿ ಇಡೀ ಭಾರತವನ್ನೆ ತಟ್ಟಿ ಎಬ್ಬಿಸಿತು, ಭ್ರಷ್ಟಾಚಾರ ವಿರೋಧಿಗಳ ಕಿವಿಗಳಲ್ಲಿ ಅಣ್ಣಾರವರ ಕೂಗು ಪ್ರತಿದ್ವನಿಸಿತು ನರ ನಾಡಿಗಳಲ್ಲಿ ಕಂಪಿಸಿದವು, ರಾಷ್ಟ್ರದಾದ್ಯಂತ ಬೆಂಬಲ ವ್ಯಕ್ತವಾಯಿತು ಎಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಿವ ಮಟ್ಟಿಗೆ ರೋಸಿ ಹೋಗಿದ್ದ ಮುಗ್ಧ ಭಾರತೀಯರು ನಾಡಿನಾಧ್ಯಂತ ತಂಡೋಪತಂಡವಾಗಿ ರಾಷ್ಟ್ರರಾಜಧಾನಿಯತ್ತು ಧಾವಿಸಿದರು ಅಣ್ಣಾರ ಭ್ರಷ್ಟಚಾರ ವಿರೋಧಿ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ತಾವು ಅವರ ಜೊತೆ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡರು, 12 ದಿನಗಳ ಪ್ರಜಾಪ್ರತಿನಿಧಿಗಳ ನಾಟಕೀಯ ಬೆಳವಣಿಗೆ ಅಣ್ಣಾರ ಅಛಲ ನಿರ್ಧಾರದ ಮುಂದೆ ಏನು ಮಾಡಲಾಗಲಿಲ್ಲ ಒಂದು ಹಂತದಲ್ಲಿ ಬಲಪ್ರಯೋಗಕ್ಕೂ ಮುಂದಾಗಿದ್ದ ಆಡಳಿತ ಸರ್ಕಾರ ಕೊನೆಗೆ ಅಣ್ಣಾಗೆ ಸೋತು ಶರಣಾಗಿ ಮಸೂದೆ ಮಂಡನೆಯ ನಿರ್ಧಾರ ತಳೆಯಿತು.
ನಾಗರೀಕ ಬಂದುಗಳೇ! ಭಾರತದ ಅತ್ಯಂತ ಭ್ರಷ್ಟಚಾರ ರಾಜ್ಯಗಳಲ್ಲಿ ನಮ್ಮ ಕರುನಾಡು ಕರ್ನಾಟಕದ್ದು ಸಿಂಹಪಾಲು ಎನ್ನುವುದು ಅತ್ಯಂತ ಖೇದಕರ ಸಂಗತಿ, ಕರುಣೆಯುಳ್ಳ ಕನ್ನಡಿಗರು ಶಿಸ್ತು, ಸಮಯಪಾಲನೆ, ಶಾಂತಿ ಸಹನಗೆ ಹೆಸರಾದವರು ಅಂತೇಯೆ ಭ್ರಷ್ಟಾಚಾರದಲ್ಲಿ ತಾವು ಯಾರಿಗೇನು ಕಡಿಮೆಯಿಲ್ಲ ಎಂದು ತಮನ್ನು ತಾವೇ ಬೆನ್ನು ತಟ್ಟಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ರಾಷ್ಟ್ರದ ಕೆಲವೇ ಕೆಲವು ರಾಜ್ಯಗಳಲ್ಲಿರುವ ಲೋಕಾಯುಕ್ತ ಎಂಬ ಪ್ರಬಲ ಭ್ರಷ್ಟಾಚಾರ ಸಂಸ್ಥೆ ಸ್ಥಾಪಿಸಲು ಸಹ ಇದೆ ಕಾರಣ, ಲೋಕಾಯುಕ್ತರಾಗಿ ತಮ್ಮ ಶಿಸ್ತಿಗೆ ಹೆಸರಾದ ಲೋಕಾಯುಕ್ತ ನ್ಯಾಯಮೂರ್ತಿ ಎಂ ಎನ್ ವೆಂಕಟಾಚಲಯ್ಯ ಮೊಟ್ಟ ಮೊದಲ ಭಾರಿಗೆ ಭ್ರಷ್ಟ ಅಧಿಕಾರಿಗಳಿಗೆ ಚುರುಕುಮುಟ್ಟಿಸಿದರೆ ಅವರ ನಂತರ ಬಂದ ಲೋಕಾಯುಕ್ತ ನ್ಯಾಯಮೂರ್ತಿ ಶ್ರೀ ಸಂತೋಷ್ ಹೆಗ್ಗಡೆಯವರು ಪ್ರಜಾಪ್ರತಿನಿಧಿಗಳಾದ ನಗರಸಭೆ, ಪುರಸಭೆ ಸದಸ್ಯರಿಂದ ಶಾಸಕ, ಮಂತ್ರಿಗಳಿಗೂ ತಮ್ಮ ಅಧಿಕಾರದ ಸಿಹಿ ತಿನ್ನಿಸಿದ್ದಷ್ಟೆ ಅಲ್ಲದೆ ರಾಜ್ಯದ ಪ್ರಥಮ ಪ್ರಜಾಪ್ರತಿನಿಧಿ ಮುಖ್ಯಮಂತ್ರಿಗೂ ಸಹ ಭ್ರಷ್ಟಾಚಾರದ ಬಿಸಿ ಮುಟ್ಟಿಸಿ ನ್ಯಾಯಾಲಯದ ಕಟ ಕಟೆಯಲ್ಲಿ ನಿಲ್ಲಿವಂತೆ ಮಾಡಿದರು.
ಸರಳ ಸಜ್ಜನಿಕೆಗೆ ಹೆಸರಾದ ಶ್ರೀ ಸಂತೋಷ್ ಹೆಗ್ಗಡೆಯವರು ಅಣ್ಣಾ ಹಜಾರೆಯವರ ಲೋಕಪಾಲ ಮಸೂದೆ ಹೋರ‍ಾಟದಲ್ಲಿ ಕೈ ಜೋಡಿಸಿದ್ದು ಕರ್ನಾಟಕದ ಭ್ರಷ್ಟಾಚಾರ ವಿರೋದಿಗಳಿಗೆ ಸ್ಪೂರ್ತಿದಾಯಕ 12 ದಿನಗಳ ಕಾಲ ಅಣ್ಣಾ ಹಜಾರೆಯವರಿಗೆ ಬೆಂಬಲವಾಗಿ ಉದ್ಯಾನ ನಗರಿಯ ಪ್ರೀಡಂ ಪಾರ್ಕ್ ನಲ್ಲಿ ನಿರಂತರವಾಗಿ ರಾಜ್ಯದಲ್ಲಿನ ಭ್ರಷ್ಟಚಾರ ವಿರೋಧಿಗಳಿಗೆ ಪ್ರೋತ್ಸಾಹ ನೀಡಿದ ಶ್ರೀ ಸಂತೋಷ್ ಹೆಗ್ಗಡೆಯವರು ನಿಜವಾಗಲು "ಕರ್ನಾಟಕದ ಅಣ್ಣಾ" ಎಂದರೆ ಅತಿಶಯೋಕ್ತಿಯಾಗಲಾರದು. ಶ್ರೀಮಂತಿಕೆಯ ಸುಖದ ಸುಪ್ಪತ್ತಿಗೆಯ ಕುಟುಂಬದಿಂದ ಬಂದ ಶ್ರೀ ಸಂತೋಷ್ ಹೆಗ್ಗಡೆಯವರು ನ್ಯಾಯಮೂರ್ತಿಯಾಗಿ ಅವರು ಕೈಗೊಂಡ ನಿರ್ಧಾರಗಳು, ತೀರ್ಮಾನಗಳು ಪ್ರಶಂಸನೆಗೂ ನಿಲಕದ್ದು ಎಂದರೆ ತಪ್ಪಾಗಲಾರದು, ಭ್ರಷ್ಟ ರಾಜಕೀಯ ವ್ಯವಸ್ಥೆಯಿಂದ ಬೇಸತ್ತ ಮಾನ್ಯ ಶ್ರೀ ಸಂತೋಷ್ ಹೆಗ್ಗಡೆಯವರು ತಮ್ಮ ಅಧಿಕಾರವಿಲ್ಲದ ಲೋಕಾಯುಕ್ತ ನ್ಯಾಯಮೂರ್ತಿ ಸ್ಥಾನಕ್ಕೆ ರಾಜಿನಾಮೆಯನ್ನು ಸಹ ಕೊಟ್ಟಿದ್ದರು, ಭ್ರಷ್ಟ ವ್ಯವಸ್ಥೆಯನ್ನು ಭ್ರಷ್ಟಚಾರವನ್ನು ತಡೆಗಟ್ಟಲು ಈ ಮೇಲೆ ಹೇಳಿದಂತೆ ಆ ದೇವರೆ ತನ್ನ ಹನ್ನೊಂದನೆ ಅವತಾರದ ಪ್ರತಿರೂಪವಾಗಿ ಶ್ರೀ ಸಂತೋಷ್ ಹೆಗ್ಗಡೆಯವರನ್ನು ಕರುನಾಡ ಕರ್ನಾಟಕಕ್ಕೆ ಕೊಟ್ಟಿದ್ದಾರೆ ಎನ್ನಬಹುದು,
ರಾಜ ರೋಷವಾಗಿ ಭ್ರಷ್ಟಚಾರದಲ್ಲಿ ತೊಡಗಿದ್ದವರಿಗೆ ಸಿಂಹಸ್ವಪ್ನವಾಗಿದ್ದ ಶ್ರೀ ಸಂತೋಷ್ ಹೆಗ್ಗಡೆಯವರು ಅತಿರಥ ಮಹಾರಥರೆಂದು ಕರೆಯಬಹುದಾದ ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳನು ನಿರಾಯಾಸವಾಗಿ ಶ್ರೀ ಕೃಷ್ಣನ ಜನ್ಮಸ್ಥಾನದ ದರ್ಶನ ಮಾಡಿಸಿದ್ದಾರೆ, ಲೂಟಿಯಾಗುತಿದ್ದ ರಾಷ್ಟ್ರದ ಸಂಪತ್ತಿನ ರಕ್ಷಿಸಿದ್ದಾರೆ ಲಂಚಾವಾತರವನ್ನು ಕಡಿತಗೊಳಿಸಿದ ಕೀರ್ತಿ ಶ್ರೀ ಸಂತೋಷ್ ಹೆಗ್ಗಡೆಯವರಿಗೆ ಸಲ್ಲುತ್ತದೆ.
ನಾಗರೀಕ ಬಂಧುಗಳೆ ಅತ್ಮೀಯ ಕನ್ನಡ ಕುವರರೆ ಶ್ರೀ ಸಂತೋಷ್ ಹೆಗ್ಗಡೆಯವರು ಈ ಹೋರಾಟಕ್ಕೆ ಬೆಂಬಲವಾಗಿ ನಿಂತು ಈ ಮೂಲಕ ಅಣ್ಣಾ ಹಜಾರೆಯವರ ಪ್ರಭಲ ಲೋಕಪಾಲ ಮಸೂದೆ ಜಾರಿಗ ಬರುವವರೆಗೆ ನಿರಂತರವಾಗಿ ಹೋರಾಡಿ ಭ್ರಷ್ಟರಹಿತ, ಮೋಸರಹಿತ, ವಂಚನೆರಹಿತ, ಭವಿಷ್ಯದ ಭದ್ರ ಭಾರತ ಕಟ್ಟೋಣ

ಜೈ ಹಿಂದ್, ಜೈ ಕರ್ನಾಟಕ

ಕಾ.ವೆಂ. ಶ್ರೀನಿವಾಸಮೂರ್ತಿ
ಕೋಲಾರ

Monday, May 9, 2011

ವಿಜಯ ನಗರ ಸಾಮ್ರಾಜ್ಯ

ವಿಜಯ ನಗರ ಸಾಮ್ರಾಜ್ಯ
ಸ್ಥಾಪನೆ 1336
ಸ್ಥಾಪಿಸಿದವರು : ಹರಿಹರ ಬುಕ್ಕ
1 ಬುಕ್ಕರಾಯನ ಮಗ 2 ಕೆಂಪ್ಪಣ್ಣ ರಾಯನ ಹೆಂಡತಿ ಗಂಗಾದೇವಿ
ಇವಳು ಮಧುರ ವಿಜಯಂ ಅಥವಾ ವೀರ ಕೆಂಪರಾಯನ ಚರಿತೆ ಕೃತಿ ರಚಿಸಿದಳು
1 ನೇಯ ಬುಕ್ಕರಾಯನಿಗೆ ವೇದ ಮಾರ್ಗ ಪ್ರತಿಷ್ಠಾಪಕ ಅಥವಾ ವೇದ ಮಾರ್ಗ ಪ್ರವರ್ತಕ ಎಂಬ ಬಿರುದಿತ್ತು
ತುಂಗಭದ್ರ ನದಿಗೆ ಅಣೆಕಟ್ಟನ್ನು ನಿರ್ಮಿಸಿದ್ದನು
2 ನೇಯ ದೇವರಾಯಾ/ಪ್ರೌಡದೇವರಾಯ: ಇವನ ಬಿರುದು:
ಅಭಿನವ ವೀರ ದೇವರಾಯ, ಗಜಬೆಂಟೆಗಾರ,
ಇವನು ಸಂಗಮ ವಂಶದ ಶ್ರೇಷ್ಠ ಅರಸನು
ಈತನ ದಂಡ ನಾಯಕ : ಲಕ್ಷ್ಮಣ ದಂಡೇಶ
ಇವನು ಸಿಲೋನ್(ಶ್ರೀಲಂಕ)ದ ಮೇಲೆ ದಾಳಿ ಮಾಡಿ ಗೆದ್ದರಿಂದ ಇವನಿಗೆ ದಕ್ಷಿಣ ಸಮುದ್ರಾದಿಪತಿ ಎಂದು ಹೆಸರು
2 ನೇಯ ದೇವರಾಯ ತನ್ನ ಸಿಂಹಾಸನದ ಪಕ್ಕದಲ್ಲಿ ಮುಸ್ಲಿಂ ರ ಪವಿತ್ರ ಗ್ರಂಥ ಖುರಾನ್ ಇಟ್ಟಿದ್ದ
ಆಸ್ಥಾನ ಕವಿಗಳು ಚಾಮರಸ ಮತ್ತು ಕುಮಾರವ್ಯಾಸ(ಗದುಗಿನ ಭಾರತ/ ಕರ್ಣಾಟಕ ಭಾರತ ಕಥಾಮಂಜರಿ)
ಚೀನಾದ ಯಾತ್ರಿಕ ಅಬ್ದುಲ್ ರಜಾಕ್ 1443 ರಲ್ಲಿ ಇವನ ಅಸ್ಥಾನಕ್ಕೆ ಬೇಟಿ ನೀಡಿದ್ದ
ಕೃಷ್ಣದೇವರಾಯ: ವಿಜಯನಗರ ಸಾಮ್ರಾಜ್ಯದ ಪ್ರಸಿದ್ದ ಅರಸ
ಬಹುಮನಿ ಸುಲ್ತಾನ್ ಅರಸ 2 ನೇಯ ಮಹ್ಮದ್ ಶಾ ನನ್ನು ಅವನ ಮಂತ್ರಿಯ ಬಂಧನದಿಂದ ಬಿಡಿಸಿದ್ದಕ್ಕೆ ಇವನಿಗೆ
ರಾಜ ಪ್ರತಿಷ್ಠಾಪನ ಎಂಬ ಬಿರುದು ಇತ್ತು
ಪುತ್ತೂರಿನಲ್ಲಿ ವಿಜಯ ಮಹೇಂದ್ರನನ್ನು ಗೆದ್ದು ವಿಜಯ ಸ್ಥಂಭ ನೆಡಿಸಿದ್ದನು
ಒರಿಸ್ಸಾದ ಅರಸ ಪ್ರತಾಪ ರುದ್ರನ ಮೇಲೆ ದಾಳಿ ಮಾಡಿ ಶಾಂತಿ ಒಪ್ಪಂದದ ಜೊತೆಗೆ ಅವನ ಮಗಳಾದ ಜಗನ್ಮೋಹಿನಿಯನ್ನು ಮಧುವೆಯಾದನು
ಕೃತಿಗಳು
ಅಮುಕ್ತ ಮೌಲ್ಯದಾ ತೆಲುಗು ಭಾಷೆಯಲ್ಲಿ
ವಿಷ್ಣು ಚಿತ್ತಿಯಮು
ಇವನ ಆಸ್ಥಾನದಲ್ಲಿ ಅಷ್ಟದಿಗ್ಗಜ ಕವಿಗಳಿದ್ದರು
ಅಲ್ಲಸಾನಿ ಪೆದ್ದನ್ನ - ಆಂದ್ರ ಕವಿ ಪಿತಾಮಹ
ನಂದಿ ತಿಮ್ಮಣ್ನ
ರಾಮಭದ್ರ
ದುರ್ಜಿಬಿ
ಮಲ್ಲಣ್ಣ
ಸೂರಣ್ಣ
ರಾಜಭೂಷ
ತೆನಾಲು ರಾಮಕೃಷ್ಣ
ಮಹಾ ಕವಿ ತಿಮ್ಮಣ ಇವನ ಕೃತಿ ಪಾರಿಜಾತ ಪಹರಣಮು
ರಾಮರಾಯ/ಅಳಿಯಾ ರಾಮರಾಯ
ತಾಳಿಕೋಟೆ ಕದನ ಅಥವಾ ರಕ್ಕಸತಂಗಡಿ ಕದನ 1565 ಜನವರಿ 23 ರಲ್ಲಿ ನಡೆಯಿತು
ವಿಜಯನಗರದ ಕೊನೆಯ ಅರಸನ : 3 ನೇಯ ರಂಗ ರಾಯ
1646 ರಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾಯಿತು
ವಿಜಯನಗರಕ್ಕೆ ಬೇಟಿ ನೀಡಿದ ಪ್ರವಾಸಿಗರ ಪಟ್ಟಿ
ಕ್ರ ಸಂ ಹೆಸರು ದೇಶ ವರ್ಷ ಅರಸ
ನಿಕಲೋ ಕೊಂತಿ ಇಟಲಿ ದೇಶ 1420 ರಲ್ಲಿ 1ನೇ ದೇವರಾಯ ಅರಸನ

ಅಬ್ದುಲ್ ರಜಾಕ್ ಪರ್ಶಿಯಾ ದೇಶ 1443 ರಲ್ಲಿ 2 ನೇ ದೇವರಾಯ ್ರಸನ
ನಿಕೆಟಿನ್ ರಷ್ಯದ 1470 ರಲ್ಲಿ ವಿರೂಪಾಕ್ಷ ಅರಸನ
ಬಾರ್ಬೋಸ ಪೋರ್ಚುಗಲ್ 1514 – 1516 ರಲ್ಲಿ ಕೃಷ್ಣದೇವರಾಯನ
ಡೋಮಿಂಗೋ ಪಯಾಸ್ ಪೋರ್ಚುಗಲ್ ದೇಶದವ 1520 ರಲ್ಲಿ ಕೃಷ್ಣದೇವರಾಯನ
ನ್ಯೂನಿಜ್ ಪೋರ್ಚುಗಲ್ ದೇಶದವ 1535 ರಲ್ಲಿ ಅಚ್ಚುತ ರಾಯ
ವಿಜಯನಗರ ಸಾಮ್ರಾಜ್ಯ
ವಿಜಯ ನಗರ ಸಾಮ್ರಾಜ್ಯಸಂಗಮ ವಂಶ1.

1 ನೇ ಹರಿಹರ - 1336 – 13562.
1 ನೇ ಬುಕ್ಕ - 1356 – ೧೩೭೭
3. 2ನೇ ಹರಿಹರ - 1377 – ೧೪೦೪
4. 1 ನೇ ವಿರುಪಾಕ್ಷಾ - 1404 – ೧೪೦೫
5.2ನೇ ಬುಕ್ಕ - 1405 – ೧೪೦೬
6. 1 ನೇ ದೇವರಾಯ - 1406 – ೧೪೨೨
7. ರಾಮಚಂದ್ರ - 1422 – ೧೪೨೨
8. ವೀರ ವಿಜಯ - 1422 – ೧೪೨೪
9.2 ನೇ ದೇವರಾಯ ( ಫ್ರೌಢ ದೇವರಾಯ ) – 1424 – ೧೪೪೬
೧೦ ಮಲ್ಲಿಕಾರ್ಜುನ - 1466 – ೧೪೬೫
11. 2 ನೇ ವಿರೂಪಾಕ್ಷ - 1465 ೧೪೮೫
12. ಫ್ರೌಢದೇವರಾಯ - ೧೪೮೫
ಸಾಳ್ವ ವಂಶ
13.ಸಾಳುವ ನರಸಿಂಹ - 1485 – ೧೪೯೧
14 ತಿಮ್ಮ ಭೂಪ - ೧೪೯೧
15. 2 ನೇ ನರಸಿಂಹ - 1491 – ೧೫೦೩ ತುಳುವ ವಂಶ
16. ವೀರ ನರಸಿಂಹ - ೧೫೦೩ – ೧೫೦೫
17.2 ನೇ ನರಸಿಂಹ - 1050 – ೧೫೦೯
18. ಕೃಷ್ಮದೇವರಾಯ - ೧೫೦೯ – ೧೫೨೯
19. ಅಚ್ಚುತ ರಾಯ - 1529 – ೧೫೪೨
20. 1 ನೇ ವೆಂಕಟರಾಯ - ೧೫೪೨
21. ಸದಾಶಿವರಾಯ - 1542 – 1570ಸಂಗಮ ವಂಶ
22. ತಿರುಮಲ ರಾಯ -
23. 1 ನೇ ವೆಂಕಟರಾಯ
24. ಶ್ರೀರಂಗರಾಯ
25. 2 ನೇ ವೆಂಕಟಾದ್ರಿ
26. 2 ನೇ ಶ್ರೀರಂಗ
27. ರಾಮದೇವ ( ಮಂತ್ರಿ ವಿಚ್ಚಮ ನಾಯಕ )
.28. 3 ನೇ ವೆಂಕಟ ರಾಯ
29. 3 ನೇ ರಂಗರಾಯ ( ಸಾಮ್ರಾಜ್ಯ ರಹಿತ )ವಿಜಯನಗರಕ್ಕೆ ಬೇಟಿ ನೀಡಿದ ಪ್ರವಾಸಿಗರ ಪಟ್ಟಿ
30. ನಿಕಲೋ ಕೊಂತಿ ಿಟಲಿ ದೇಶ 1420 ರಲ್ಲಿ 1ನೇ ದೇವರಾಯ ಅರಸನ ಕಾಲದಲ್ಲಿ ಬೇಟಿ ನೀಡಿದ
31. ಅಬ್ದುಲ್ ರಜಾಕ್ ಪರ್ಶಿಯಾ ದೇಶ 1443 ರಲ್ಲಿ 2 ನೇ ದೇವರಾಯ ್ರಸನ ಕಾಲದಲ್ಲಿ ಬೇಟಿಯಾದ
32. ನಿಕೆಟಿನ್ ರಷ್ಯದ ಪ್ರವಾಸಿ 1470 ರಲ್ಲಿ ವಿರೂಪಾಕ್ಷ ಅರಸನ ಕಾಲದಲ್ಲಿ ಬೇಟಿ ನೀಡಿದ
33. ಬಾರ್ಬೋಸ ಪೋರ್ಚುಗಲ್ ದೇಶದವ 1514 – 1516 ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಬೇಟಿ ನೀಡಿದ
34. ಡೋಮಿಂಗೋ ಪಯಾಸ್ ಪೋರ್ಚುಗಲ್ ದೇಶದವ 1520 ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಬೇಟಿ ನೀಡಿದ
35. ನ್ಯೂನಿಜ್ ಪೋರ್ಚುಗಲ್ ದೇಶದವ 1535 ರಲ್ಲಿ ಅಚ್ಚುತ ರಾಯನ ಕಾಲದಲ್ಲಿ ಬೇಟಿಯಾದವಿಜಯನಗರ ಸಾಮ್ರಾಜ್ಯದ ಹುಟ್ಟಿಗೆ
ಹುಟ್ಟಿಗೆ ಕಾರಣವಾದ ಅಂಶ

36. ಹೆದಲಿಯ ಸ್ಲಾನ ಅಲ್ಲಾವುದ್ದೀನ್ ಖಿಲ್ಜಿ ದಕ್ಷಿಣ ಭಾರತದ ರಾಜಕೀಯ ಸಮತೋಲನಕ್ಕೆ ಭಂಗವುಂಟುಮಾಡಿದ್ದು
37. ಕ್ರಿ.ಶ. 1296 ದೆಹಲಿಯ ಸುಲ್ತಾನನಾಗಿ ಅಧಿಕಾರ ಮಹಿಸಿಕೊಂಡ ಮಹಮ್ಮದ್ ಬಿನ್ ತುಘಲಕ್ ದಕ್ಷಿಣ ಭಾರತವನ್ನು ನೇರ ಆಳ್ವಿಕೆಗೆ ಒಳಪಡಿಸಿದ್ದು
38. ಸ್ಥಿರವಾದ ಆಡಳಿತ ಕೊಡುವಲ್ಲಿ ತುಘಲಕ್ ವಿಫಲವಾಗಿದ್ದು
39. ದಕ್ಷಿಣ ಭಾರತದ ಜನತೆಯಲ್ಲಿ ಅಭದ್ರತೆ ವಾತಾವರಣ ಉಂಟಾಗಿದ್ದು .ರಾಜಕೀಯ ಇತಿಹಾಸವಿಜಯ ನಗರವನ್ನಾಳಿದ ವಂಶಗಳು
40. ಸಂಗಮ ವಂಶ 1336 – ೧೪೮೫ - ರಾಜಧಾನಿ ಹಂಪಿ
41. ಸಾಳುವ ವಂಶ ೧೪೮೫ – 1505 ರಾಜಧಾನಿ ಹಂಪಿ
42. ತುಳುವ ವಂಶ 1505 – 1570 ರಾಜಧಾನಿ ಹಂಪಿ , ಪೆನುಗೊಂಡ
43. ಅರವೀಡು ವಂಶ 1570 – 1646 - ರಾಜಧಾನಿ ಪೆನುಗೊಂಡ ,ವೆಲ್ಲೂರು ಹಾಗೂ ಚಂದ್ರಗಿರಿ
44. ವಿಜಯನಗರ ಸಾಮ್ರಾಜ್ಯಕ್ಕೆ ತಳಹದಿಯನ್ನು ಹಾಕಿದವರು - ಸಂಗಮನ ಮಕ್ಕಳಾದ - ಹರಿಹರ ಮತ್ತು ಬುಕ್ಕರು
45. ವಿಜಯನಗರ ಸಾಮ್ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು - ಕ್ರಿ.ಶ.೧೩೩೬
46. ಬಹಮನಿ ಸಾಮ್ರಾಜ್ಯ ಅಸ್ತತ್ವಕ್ಕೆ ಬಂದಿದ್ದು - ಕ್ರಿ.ಶ - 1347 ರಲ್ಲಿ
47. ವಿಜಯನಗರ ಅರಸುರುಗಳಲ್ಲಿ ಅತ್ಯಂತ ಸಮರ್ಥನಾದ ಅರಸ - ಕೃಷ್ಮದೇವರಾಯ
48. ಕೃಷ್ಮದೇವರಾಯನ ನಿಷ್ಠಾವಂತ ಪ್ರಧಾನಿ - ತಿಮ್ಮರಸ
49. " ಯವನ ರಾಜ್ಯ ಪ್ರತಿಷ್ಠಾನ ಚಾರ್ಯ ’ ಎಂಬ ಬಿರುದನ್ನು ಕೃಷ್ಣದೇವರಾಯ ಪಡೆದನು
50. ಕೃಷ್ಣದೇವರಾಯನ ವಿರುದ್ದ ಜಿಹಾದ್ ಯುದ್ದವನ್ನು ಸಾರಿದವನು - ಬೀದರ್ ನ ಬಹಮನಿ ಸುಲ್ತಾನ ಮಹಮ್ಮದ್ ಷಾ ಹಾಗೂ ಇಜಾಪುರಾದ್ ಸುಲ್ತಾನನಾದ .ಯೂಸುಫ್ ಆದಿಲ್ ಷಾ
51. ಈ ಧರ್ಮಯುದ್ದ ನಡೆದ ಪ್ರದೇಶ - ಕೋವಿಲ್ ಕೊಂಡ
52. ವಿಜಯನಗರ ಕೃಷ್ಣದೇವರಾಯನ ವಿರುದ್ದ ಹೋರಾಡಿದ ಉಮ್ಮತ್ತೂರಿನ ಪಾಳೆಗಾರ - ಗಂಗರಾಜ
53. ಗಂಗರಾಜನಿಂದ ವಶಪಡಿಸಿಕೊಂಡ ಪ್ರದೇಶ - ಶ್ರೀರಂಗ ಪಟ್ಟಣ್ಣ ಹಾಗೂ ಶಿವನ ಸಮುದ್ರ
54. ಕೃಷ್ಣದೇವರಾಯನನ್ನ ಎದುರಿಸಿದ ಒರಿಸ್ಸಾದ ದೊರೆ - ಪ್ರತಾಪರುದ್ರ
55. ಪೊರ್ಚುಗೀಸರೊಡನೆ ಉತ್ತಮವಾಗಿ ಸಂಬಂಧ ಹೊಂದಿದ್ದ ವಿಜಯನಗರದ ದೊರೆ - ಕೃಷ್ಣದೇವರಾಯ
56. ಕೃಷ್ಣದೇವರಾಯ ಸಾವನ್ನು ಕಂಡುಕೊಂಡಿದ್ದು - ಕ್ರಿ.ಶ.1529 ರಲ್ಲಿ
57. ತುಂಗಭದ್ರೆ ನದಿಗೆ ಅಡ್ಡಲಾಗಿ ಅಣಿಕಟ್ಟನ್ನು ನಿರ್ಮಿಸಿದ ವಿಜಯನಗರ ್ರಸ - ಕೃಷ್ಣದೇವರಾಯ
58. ಕೃಷ್ಣದೇವರಾಯ ತೋಡಿಸಿದ ಕಾಲುವೆ - ಕೊಡಗಲ್ ಹಾಗೂ ಬಸವಣ್ಣ ಕಾಲುವೆ
59. ಅಮುಕ್ತ ಮೌಲ್ಯದ ಕೃತಿಯ ಕರ್ತೃ - ಕೃಷ್ಣದೇವರಾಯ
60. ಅಮುಕ್ತ ಮೌಲ್ಯದ ಕತಿಯು - ತೆಲುಗು ಭಾಷೆಯಲ್ಲಿದೆ
61. ಅಮುಕ್ತ ಮೌಲ್ಯದ ಇನ್ನೋಂದು ಹೆಸರು - ವಿಷ್ಣುಚಿತ್ತಿಯಮು
62. ಕೃಷ್ಣದೇವರಾಯ ಆಸ್ಥಾನದಲ್ಲಿದ ಕವಿಗಳಿಗೆ - ಅಷ್ಟದಿಗ್ಗಜರು ಎಂದು ಕರೆಯವುರು
63. ಮನುಚರಿತಮು ಕೃತಿಯ ಕರ್ತೃ - ಅಲ್ಲಸಾನಿ ಪೆದ್ದಣ್ಣ
64. ಆಂದ್ರಾಕವಿತಾ ಪಿತಾಮಹಾ - ಎಂಬ ಬಿರುದನ್ನು ಹೊಂದಿದ್ದ ಕವಿ - ಅಲ್ಲಾಸಾನಿ ಪೆದ್ದಣ್ಣ
65. ನಂದಿ ತಿಮ್ಮಣ್ಮ ನ ಕೃತಿ - ಪಾರಿಜಾತಹರಣಮು
66. ಕೃಷ್ಣದೇವರಾಯ ಕಟ್ಟಿಸಿದ ದೇವಾಲಯ - ಹಜಾರ ರಾಮಸ್ವಾಮಿ ಹಾಗೂ ವಿಠಲ ಸ್ವಾಮಿ ದೇವಲಾಯ
67. ಮಹಾನವಮಿ ದಿಬ್ಬ ಅಥವಾ ಸಿಂಹಾಸನ ವೇದಿಕೆ ್ಥಾವ ವಿಜಯಲಯ ನಿರ್ಮಿಸಿದವರು - ಕೃಷ್ಣದೇವರಾಯ
68. ತನ್ನ ತಾಯಿ ನಾಗಲೆಯ ಸ್ಮರಮಾರ್ಥವಾಗಿ ನಿರ್ಮಿಸಿದ ನಗರ - ನಾಗಲಾಪುರ
69. ಕೃಷ್ಣದೇವರಾಯ ನಂತರ ಅಧಿಕಾರಕ್ಕೆ ಬಂದವರು - ಅಚ್ಚುತರಾಯ
70. ಅಚ್ಚುತನ ವಿರೋಧಿ - ಅಳಿಯ ರಾಮರಾಯಅಳಿಯ ರಾಮರಾಯ
71. ಈತನ ಮಂತ್ರಿ - ತಿರುಮಲ
72. ಈತನ ಸೇನಾಧಿಕಾರಿ - ವೆಂಕಟಾದ್ರಿ
73. ತಾಳಿಕೋಟೆ ಯುದ್ದ ಗತಿಸಿದ ವರ್ಷ - ಕ್ರಿ.ಶ 1565 ರಲ್ಲಿ
74. ಯುದ್ದ ನಡೆದಿದ್ದು - ಷಾಹಿ ಮನೆತನ ಹಾಗೂ ವಿಜಯನಗರಕ್ಕೆ
75. ತಾಳಿಕೋಟೆ ಯುದ್ದದಲ್ಲಿ ವಿಜಯ ನಗರದ ಮನೆತನ ಸೋಲಲು ಕಾರಣ ಪ್ರಮುಖ ಕಾರಣ - ಸೈನಿಕ ಕಾರಣ
76. ತಾಳಿಕೋಟೆ ಯುದ್ದದ ನಂತರ ತಿರುಮಲನು ಪಲಾಯನ ಮಾಡಿದ್ದು - ಚಂದ್ರಗಿರಿಗೆ
77. " A forgotten Empire " ಅಥವಾ " ಮರೆತು ಹೋದ ಸಾಮ್ರಾಜ್ಯ " ಕೃತಿಯ ಕರ್ತೃ - Robert ಸೀವೆಲ್
78. ಹಂಪಿಯಲ್ಲಿ ಹುಲಿ ಹಾಗೂ ಇತರ ಕಾಡು ಪ್ರಾಣಿಗಳು ವಾಸಿಸುತ್ತಿದ್ದವು ಎಂಬ ಹೇಳಿಕೆಯನ್ನು ನೀಡಿದವರು - ಿಟಲಿಯ ಪ್ರವಾಸಿ ಫೆಡ್ರಿಕ್
79. ತುಳುವ ವಂಶದ ಆಳ್ವಿಕೆ ಅಂತ್ಯವಾಗಿದ್ದು - ಕ್ರಿ.ಶ. 1570 ರಲ್ಲಿ ಸದಾಶಿವ ರಾಯನನ್ನ ಕೊಲೆ ಮಾಡುವುದರೊಂದಿಗೆ ಅಂತ್ಯ ಕಂಡಿತು
80. ಹಂಪೆಯು ಈ ನದಿಯ ದಂಡೆಯ ಮೇಲಿದೆ - ತುಂಗಾ ಭದ್ರ
81. ವಿಜಯ ನಗರ ಸಾಮ್ರಾಜ್ಯದ ರಾಜಧಾನಿ - ಹಂಪೆ
82. ಈ ರಾಜ್ಯದ ರಾಜ ಲಾಂಛನ - ವರಾಹ
83. ಹರಿಹರ ಹಾಗೂ ಬುಕ್ಕರು ತಂದೆ ಈ ರಾಜನ ಆಸ್ಥಾನದಲ್ಲಿದ್ದರು - ಕಂಪಲಯರಾಜ ್ಥವಾ ಕಂಪಿಲರಾಯ
84. ಕುಮಾರ ರಾಮನ ಕೃತಿಯ ಕರ್ತೃ - ನಂಜುಂಡಸಂಗಮ ವಂಶ
85. ಸಂಗಮ ವಂಶದ ಮೊದಲ ದೊರೆ - ಹರಿಹರ
86. ಇವನ ರಾಜಧಾನಿ - ಆನೆಗೊಂದಿ
87. ಹರಿಹರನ ಬಿರುದುದಗಳು - ಪೂರ್ವ ಪಶ್ಚಿಮ ಸಮುದ್ರಾದೇಶ್ವರ , ಭಾಷೆಗೆ ತಪ್ಪದ ರಾಯರ ಗಂಡ ರಾಜ ಪರಮೇಶ್ವರ , ಅರಿರಾಯ ವಿಭಾಡ , ಹಾಗೂ ವೇದಾಮಾರ್ಗ ಸ್ಥಾಪನ ಚಾರ್ಯ
88. ಮಥುರಾ ವಿಜಯಂ ಅಥವಾ ಕಂಪಣರಾಯ ವಿಜಯಂ ಕೃತಿಯ ಕ್ರತೃ - ಬುಕ್ಕರಾಯನ ಪತ್ನಿ - ಗಂಗಾಂಬಿಕೆ
89. ವೇದಾಮಾರ್ಗ ಪ್ರವರ್ತಕ ಎಂಬ ಬಿರುದನ್ನು ಹೊಂದಿದ್ದ ದೊರೆ - 1 ನೇ ಬುಕ್ಕರಾಯ
90. ಕರ್ನಾಟಕ ವಿದ್ಯಾ ವಿಲಾಸ ಬಿರುದಿನ ಕರ್ತೃ - 2 ನೇ ಹರಿಹರ
91. 1 ನೇ ದೇವರಾಯನ ಆಸ್ಥಾನಕ್ಕೆ ಾಗಮಿಸಿದ್ದ ವಿದೇಶಿ ಯಾತ್ರಿಕ - ನಿಕೋಲೋ ಕೊಂತಿ
92. 2 ನೇ ದೇವರಾಯನ ಮತ್ತೊಂದು ಬಿರುದು - ಗಜಬೇಂಟೆಕಾರ
93. ಈತನ ಆಸ್ಥಾನಕ್ಕೆ ಪರ್ಶಿಯಾದ ರಾಯಭಾರಿ - ಅಬ್ದುಲ್ ರಜಾಕ್
94. ಈತನ ಆಸ್ಥಾನ ಕವಿ - ಕುಮಾರ ವ್ಯಾಸಸಾಳುವ ವಂಶ
95. ಈ ಸಂತತಿಯ ಸ್ಥಾಪಕ - ಸಾಳುವ ನರಸಿಂಹತುಳುವ ವಂಶ
96. ತುಳುವ ವಂಶವನ್ನು ಆರಂಬಿಸಿದವರು - ವೀರನರಸಿಂಹ
97. ಕೃಷ್ಣದೇವರಾಯನ ಕಾಲವನ್ನು ದಕ್ಷಿಣ ಭಾರತದ ಸಾಂಸ್ಕೃತಿಕ ಸಮ್ಮಿಲನ ಕಾಲ ಎಂದು ಕರೆಯಲಾಗಿದೆ
98. ಕೃಷ್ಣದೇವರಾಯನ ಪ್ರಧಾನ ಮಂತ್ರಿ - ಸಾಳ್ವ ತಿಮ್ಮರಸ
99. ದಕ್ಷಿಣ ಸಮುದ್ರಾಪತಿ ಎಂದು ಬಿರುದು ಹೊಂದಿದವರು - ಕೃಷ್ಣದೇವರಾಯನ
100. ಕೃಷ್ಣದೇವರಾಯನ ದಕ್ಷಿಣ ಸಮುದ್ರಾಪತಿ ಎಂಬ ಬಿರುದನ್ನ ಶ್ರೀಲಂಕಾದ ವೀರಬಾಹುವನ್ನ ಸೋಲಿಸಿ ಪಡೆದನುಪ್ರಮುಖ ಕೃತಿಗಳು
101. ಅಮುಕ್ತಮೌಲ್ಯದ ( ತೆಲುಗು ) ಜಾಂಬವತಿ ಕಲ್ಯಾಣ ( ಸಂಸ್ಕೃತ ) - ಇದರ ಕರ್ತೃ - ಕೃಷ್ಣದೇವರಾಯನ
102. ಕರ್ನಾಟಕ ಕೃಷ್ಣರಾಯ ಭಾರತ ಕಥಾ ಮಂಜರಿಯ ಕರ್ತೃ - ತಿಮ್ಮಣ್ಣ ಕವಿಅರವೀಡು ಸಂತತಿ
103. ಈ ಸಂತತಿಯ ಆರಂಬಿಕ ದೊರೆ - ತಿರುಮಲ104. ರಾಜಧಾನಿ - ಪೆನುಗೊಂಡ
105. ವಿಜಯನಗರ ಕೊನೆಯ ಅರಸ - 3 ನೇ ಶ್ರೀರಂಗರಾಯ
106. ವಿಜಯನಗರ ಸಾಮ್ರಾಜ್ಯ ಪತನಗೊಂಡಿದ್ದು - 1681 ರಲ್ಲಿ
107. ಹಕ್ಕ ಬುಕ್ಕರು - ಓರಂಗಲ್ಲಿನ ಪ್ರತಾಪರುದ್ರನ ಆಸ್ಥಾನದಲ್ಲಿದ್ದರು
108. ವಿದ್ಯಾರಣ್ಯರ ಮೊದಲ ಹೆಸರು - ಮಾಧವ ( ಸಾಮ್ರಾಜ್ಯ ಸ್ಥಾಪಿಸಲು ಮಾರ್ಗದರ್ಶಕರು 1386 ಕಲ್ಲಿ ಕಾಲವಾದರು )109. ಹರಿಹರ - ಹೊಯ್ಸಳರ ಮಾಂಡಲಿಕ
110. ಬಹಮನಿ ಸಾಮ್ರಾಜ್ಯದ ಸ್ಥಾಪಕ - ಅಲ್ಲಾವುದ್ದಿನ್ ಹಸನ್ ಬಹಮನ್ ಷಾ
111. ತಾಳಿಕೋಟೆ ಕದನದ ಇನ್ನೋಂದು ಹೆಸರು - ರಕ್ಕಸತಂಗಡಿ 1565 ಜನವರಿ ೨೩
112. ವಿಜಯನಗರ ರಾಜಧಾನಿಯ ಈಗಿನ ಹೆಸರು - ಹಂಪೆ
113. ಗದುಗಿನ ನಾರಾಯಣಪ್ಪ ಎಂದು ಕುಮಾರವ್ಯಾಸನನ್ನ ಕರೆಯಲಾಗಿದೆ
114. ವಿಜಯನಗರ ಸಾಮ್ರಾಜ್ಯಕ್ಕೆ ಬಂದಿದ್ದು ಪೋರ್ಚುಗೀಸ್ ರಾಯಭಾರಿ - ಅಲ್ಬುಕರ್ಕ್
115. " ಹಿಂದೂ ರಾಯ ಸುತ್ತಾಣ " ಎಂಬುದು ವಿಜಯ ನಗರ ಅರಸರ ವಿಶಿಷ್ಟ ಬಿರುದು .
116. ಈ ರಾಜವಂಶದ ಕುಲದೇವರು - ಶ್ರೀವಿರೂಪಾಕ್ಷ
117. ದಕ್ಷಿಮ ಬಾರತವನ್ನಾಳಿತ ಅರಸರಲ್ಲಿಯೂ ಶ್ರೇಷ್ಠ ಅರಸ - ಕೃಷ್ಣದೇವರಾಯ .
118. ಕೃಷ್ಣದೇವರಾಯನಿಗೆ " ಕನ್ನಡ ರಾಜ್ಯ ರಮಾರಮಣ " ಎಂಬ ಬಿರುದಿತ್ತು
119. ವಿಜಯ ನಗರದ ಪ್ರಾಚೀನ ರಾಜಧಾನಿ - ಆನೆಗೊಂಡಿ
120. ವಿಜಯನಗರ ಎಂಬ ಹೆಸರಿನಲ್ಲಿ ಹೊಸ ರಾಜಧಾನಿಯನ್ನು ನಿರ್ಮಿಸಿದ ಕೀರ್ತಿ - ಬುಕ್ಕರಾಯನಿಗೆ ಸಲ್ಲುತ್ತದೆ .
121. ವಿಜಯನಗರ ದೇವಾಲಯಗಳಲ್ಲರುವ ಹೆಬ್ಬಾಗಿಲಿನ ಎತ್ತರವಾದ ಗೋಪುರಗಳನ್ನು - ರಾಯಗೋಪುರ ಎಂದು ಕರೆಯುವರು .
122. ಖುರಾನಿನ ಪ್ರತಿಗಳನ್ನು ತನ್ನ ಆಸ್ಥಾನದ ಎತ್ತರವಾದ ಪೀಠದ ಮೇಲೆ ಇರಿಸಿದ್ದ ಅರಸ - 2ನೇ ದೇವರಾಯ
123. ಹಕ್ಕಬುಕ್ಕರಿಗೆ ಸಾಮ್ರಾಜ್ಯ ಸ್ಥಾಪನೆಗೆ ಅಶೀರ್ವದಿಸಿದ ಗುರುಗಳ ಹೆಸರು - ಕಾಶೀ ವಿಲಾಪ ಕ್ರಿಯಾ ಶಕ್ತಿ ಯತಿಗಳು
124. ವಿಜಯನಗರ ಪ್ರಸ್ತುತ - ಬಳ್ಳಾರಿ ಜಿಲ್ಲೆಯಲ್ಲಿದೆ
125. 2 ನೇ ದೇವರಾಯನ ದಂಡ ನಾಯಕ - ಲಕ್ಕಣ ದಂಡೇಶ
126. ಲಕ್ಕಣ ದಂಡೇಶನ ಕೃತಿ - ಶಿತತ್ವ ಚಿಂತಾಮಣಿ
127. ಕರ್ನಾಟಕ ಭಾರತಿ ಕಥಾಮಂಜರಿಯ ಕರ್ತೃ - ಕುಮಾರವ್ಯಾಸ
128. ಕೃಷ್ಣದೇವರಾಯನ ಮಾತ ಪಿತೃಗಳು - ನರಸನಾಯಕ ಹಾಗೂ ನಾಗಲಾಂಬಿಕೆ
129. ತುಳುವ ವಂಶದ ಕೊನೆಯ ಅರಸ - ಸದಾಶಿವರಾಯ
130. ಅರವೀಡು ಸಂತತಿಯ ಕೊನೆಯ ಅರಸ - 3 ನೇ ಶ್ರೀರಂಗವಿಜಯ ನಗರದ ಆಡಳಿತ
131. ವಿಜಯನಗರದ ಪ್ರಾಂತ್ಯಧಿಕಾರಿಗಳಿಗೆ ಇದ್ದ ಪದನಾಮ - ನಾಯಕರ್
132. ಗ್ರಾಮ ಸಭೆಯ ಆಡಳಿತ - ಆಯಗಾರರು
133. ವಿಜಯನಗರ ಅರಸರು ದೇವಾಲಯಗಳ ನಿರ್ಮಾಣಕ್ಕೆ ಹೆಚ್ಚಾಗಿ " ಬೆಮಚುಕಲ್ಲು " ಬಳಸಿದ್ದಾರೆ
134. ವಿಜಯನಗರ ಸಾಮ್ರಾಜ್ಯದಲ್ಲಿ ವಿವಿಧ ಇಲಾಖೆಯ ಮುಖ್ಯಸ್ಥನನ್ನು - ಸಂಪ್ರತಿ ಎಂದು ಕರೆಯುತ್ತಿದ್ದರು
135. ವಿಜಯ ನಗರ ಸಾಮ್ರಾಜ್ಯದ ನಾಣ್ಯಗಳು - ಹೊನ್ನು , ಪಗೋಡ , ಗದ್ಯಾಣ , ಹಗ , ವೀಸ , ಕಾಸು, ಮತ್ತು ಜೀತಲ್
136. ದಸರಾ - ಇವರ ರಾಷ್ಟೀಯ ಹಬ್ಬಲಾಗಿತ್ತು
137. ವಿಜಯನಗರ ಅರಸರ ಸಾಹಿತ್ಯಕ ಪ್ರಗತಿಯನ್ನು - " classical Age " ಎಂದು ಕರೆಯುವರು
138. ಜೈಮಿನಿ ಭಾರತ ಕೃತಿಯ ಕರ್ತೃ - ಲಕ್ಷ್ಮೀಶ
139. ತೊರವೆ ರಾಮಾಯಣದ ಕರ್ತೃ - ನರಹರಿ
140. ಮೊಹಿನಿ ತರಂಗಿನಿ ಯ ಕರ್ತೃ - ಕನಕದಾಸ
141. ಶೈವರ ಅಜಂತಾ - ಎಂದು ಕರೆಯಲ್ಪಡುವ ದೇವಾಲಯ - ಲೇಪಾಕ್ಷಿ
142. ಕರ್ನಾಟಕ ಸಂಗೀತದ ಪಿತಾಮಹಾ - ಪುರಂದರದಾಸರು
143. ವಿಜಯನಗರದ ಪ್ರಾಂತಿಯ ಆಡಳಿತದ ವಿಬಾಗಗಳು - ಮಂಡಲ ಮತ್ತು ಅಮರ ನಾಯಕ
144. ಮಹಾನಾಡು ಪ್ರಭು - ಜಿಲ್ಲಾಧಿಕಾರಿ
145. ಪಟ್ಟಣದ ಮುಖ್ಯಸ್ಥ - ಪಟ್ಟಣ ಸ್ವಾಮಿ
146. ಆಯಗಾರರು - ಗ್ರಾಮದ ಸೇವಕ
147. ಗ್ರಾಮದ ಮುಖಂಡ - ಗೌಡ ಅಥಾವ ರೆಡ್ಡಿ
148. ತಳಾರಿ - ಪೊಲೀಸ್ ಕಾರ್ಯವನ್ನು ನಿರ್ವಹಿಸುತ್ತಿದ್ದ ವ್ಯಕ್ತಿ
149. ಅಗ್ರಹಾರದ ಆಡಳಿತವನ್ನು ನೋಡಿಕೊಳ್ಳುವವರು - ಮಹಾಜನ ಸಭೆ
150. ರಾಯರೇಖಾ ಪದ್ದತಿ - ಭೂಮಿಯನ್ನ ಅಳತೆ ಮಾಡುವ ಪದ್ದತಿ
151. ಕ್ರಿಸ್ತ ಪುರಾಣ ಕೃತಿಯ ಕರ್ತೃ - ಥಾಮಸ್ ಸ್ಟೀಫನ್
152. ಪುರಂದರ ದಾಸರು ಹುಟ್ಟಿದ್ದು - ಮಹಾರಾಷ್ಟ್ರದ ಪುರಂದರ ಗಡದಲ್ಲಿ 1484 ರಲ್ಲಿ ಜನಿಸಿದರು
153. ಪುರಂದರ ದಾಸರ ತಂದೆ ವರದಪ್ಪ ನಾಯಕ ತಾಯಿ - ಸರಸ್ವತಿ ಬಾಯಿ ಅಥಾವ ಲಕ್ಷ್ಮೀ ಬಾಯಿ
154. ಪುರಂದರ ದಾಸರು ಇವರ ಮೊದಲ ಹೆಸರು - ಶ್ರೀನಿವಾಸ ನಾಯಕ ಅಥಾವ ಕೃಷ್ಣಪ್ಪ ನಾಯಕ
155. ಪುರಂದರ ದಾಸರು ಇವರಿಗೆ ಪುರಂದರ ಎಂದು ಎಂದು ನಾಮಕರಣ ಮಾಡಿದವರು - ವ್ಯಾಸರಾಯರು
156. ಈಸ ಬೇಕು ಇದ್ದು ಜಯಿಸ ಬೇಕು - ಈ ಹೇಳಿಕೆಯನ್ನ ನೀಡಿದವರು - ಪುರಂದರ ದಾಸರು
157. ಪುರಂದರ ದಾಸರು ಅಂಕಿತ - ಪುರಂದರ ವಿಠಲಕನಕದಾಸರು
158. ಕನಕದಾಸರು ಹುಟ್ಟಿದ್ದು - ದಾರವಾಡ ಜಿಲ್ಲೆಯ ಬಾಡಾದಲ್ಲಿ
159. ಮಾತಾ ಪಿತೃಗಳು - ಬಚ್ಚಮ ಮತ್ತು ಬೀರಪ್ಪ
160. ಇವರ ಅಂಕಿತ - ಕಾಗಿನೆಲೆ ಆದಿಕೇಶವ
161. ಪ್ರಸಿದ್ದ ಕೃತಿ - ರಾಮ ದ್ಯಾನ ಚರಿತೆ162. ಸಂಗೀತ ಸಾರಂ ಕೃತಿಯ ಕರ್ತೃ - ವಿದ್ಯಾರಣ್ಯರು
163. ಭಾರತ ಇತಿಹಾಸದಲ್ಲಿ ಕವಯಿತ್ರಿಯೊಬ್ಬಳು ಬರೆದ ಪ್ರಪ್ರಥಮ ಸಂಸ್ಕೃತ ಇತಿಹಾಸ ಕೃತಿ - ಮಥುರಾ ವಿಜಯಂ
164. ವೀರ ಕಂಪಣ್ಣರಾಯ ಚರಿತ ಬರೆದವರು - ಗಂಗಾದೇವಿ
165. ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ನಂದಿ - ಲೇಪಾಕ್ಷಿಯ ಏಕಶೀಲೆಯ ನಂದಿ
166. ಲೇಪಾಕ್ಷಿಯ ವೀರಭದ್ರ ದೇವಾಲಯದ ಕರ್ತೃ - ವಿರೂಪಣ್ಣ
167. ವಿರೂಪಣ್ಣ ಈತ ಕೃಷ್ಣದೇವರಾಯನ - ಕೋಶಾಧಿಕಾರಿ
168. ಮಹಾಮಂಡಳೇಶ್ವರ - ಪ್ರಾಂತ್ಯಾಧಿಕಾರಿ
169. ಒಡೆಹ ಅಥವಾ ನಾಯಕ - ಇವರ ಬಿರುದು
170. ವೇದಾ ಪ್ರಕಾಶ ಕೃತಿಯ ಕರ್ತೃ - ಸಾಯಣ್ಣ

Thursday, April 28, 2011

ಮಾದರಿ ಪ್ರಶ್ನೆಗಳು

1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?


- ಮಲ್ಲಬೈರೆಗೌಡ.


2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?


- ಟಿಪ್ಪು ಸುಲ್ತಾನ್.


3) ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?


- ಚಿತ್ರದುರ್ಗ.


4) "ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?


- ಕೃಷ್ಣದೇವರಾಯ.


5) ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?


- ಪಂಪಾನದಿ.


6) "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?


- ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.


7) ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?


- ಹೈದರಾಲಿ.


8) ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?


- ಶ್ರೀರಂಗ ಪಟ್ಟಣದ ಪಾಲಹಳ್ಳಿ.


9) ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?


- ಕಲಾಸಿಪಾಳ್ಯ.


10) ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?


- ಕೆಂಗಲ್ ಹನುಮಂತಯ್ಯ.


11) ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?


- 7


12) ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?


- "ಸರ್. ಮಿರ್ಜಾ ಇಸ್ಮಾಯಿಲ್"


13) ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?


- ರಾಮಕೃಷ್ಣ ಹೆಗ್ಗಡೆ.


14) "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?


- ದೇವನಹಳ್ಳಿ (ದೇವನದೊಡ್ಡಿ)


15) ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?


- ವಿಜಯನಗರ ಸಾಮ್ರಾಜ್ಯ.


16) ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?


ತಿರುಮಲಯ್ಯ.


17"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು?


- ಶ್ರೀರಂಗ ಪಟ್ಟಣದ ಕೋಟೆ.


18) ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?


- ಶಿವಮೊಗ್ಗ ಜಿಲ್ಲೆಯ ಮತ್ತೂರ್.


19) ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?


- ಶಿರಸಿಯ ಮಾರಿಕಾಂಬ ಜಾತ್ರೆ.


20) ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?


- ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)


21) ರಾಯಚೂರಿನ ಮೊದಲ ಹೆಸರೇನು?


- ಮಾನ್ಯಖೇಟ.


22) ಕನ್ನಡದ ಮೊದಲ ಕೃತಿ ಯಾವುದು?


- ಕವಿರಾಜ ಮಾರ್ಗ


23) ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.


ಹಂಪೆ.


24) ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?


- ಶ್ರಾವಣಬೆಳಗೊಳದ ಗೊಮ್ಮಟೇಶ್ವರ.


25) ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು?


- ಕರ್ನಲ್ ವಸಂತ್.
26) ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?


- ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.


27) ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?


- ಮುಳ್ಳಯ್ಯನ ಗಿರಿ.


28) ಮೈಸೂರು ಅರಮನೆಯ ಹೆಸರೇನು?


- ಅಂಬಾವಿಲಾಸ ಅರಮನೆ.


29) ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?


- ಬಾಬಾ ಬುಡನ್ ಸಾಹೇಬ.


30) "ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?


- ದಾವಣಗೆರೆ.


31) ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?


- ಆಗುಂಬೆ.


32) ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?


ಬೆಂಗಳೂರು ನಗರ ಜಿಲ್ಲೆ.


33) ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?


- ಹಲ್ಮಿಡಿ ಶಾಸನ.


34) ಕರ್ನಾಟಕದ ರಾಜ್ಯ ಪಕ್ಷಿ ಯಾವುದು?


- ನೀಲಕಂಠ ಪಕ್ಷಿ.


35) ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?


- ಕೆ.ಸಿ.ರೆಡ್ಡಿ.


36) ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?


- ಶ್ರೀ ಜಯಚಾಮರಾಜ ಒಡೆಯರು.


37) ಕರ್ನಾಟಕದ ಮೊದಲ ಕವಯತ್ರಿ ಯಾರು?


- ಅಕ್ಕಮಹಾದೇವಿ.


38) ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?


- ವಡ್ಡರಾದನೆ.


39) ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?


- ಮೈಸೂರು ವಿಶ್ವವಿಧ್ಯಾನಿಲಯ.


40) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು?


- "ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ"


41) "ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು?


- ಪುರಂದರ ದಾಸರು.


42) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?


- ರಾಯಚೂರು ಜಿಲ್ಲೆ.


43) ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?


- ರಾಮನಗರ.


44) ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?


- ಮಂಡ್ಯ ಜಿಲ್ಲೆ.


45) ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?


- ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ.
46) ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-


ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ


47) ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು?


- ಗರಗ,


48) ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?


- ಕೊಡಗು.


49) ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?


- ಲಿಂಗನಮಕ್ಕಿ ಅಣೆಕಟ್ಟು.


50) ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು ಯಾರು?


- ಕುವೆಂಪು.
51) ವಿಶ್ವದ ಅತಿ ದೊಡ್ಡ ನಗರ ಯಾವುದು?


ನ್ಯೂಯಾರ್ಕ್ ನಗರ.


52) ಲಿಬರ್ಟಿ ಪ್ರತಿಮೆ ಯಾವದ ದೇಶದಲ್ಲಿದೆ?


- ಅಮೇರಿಕಾ


53) ಭಾರತದ ದಕ್ಷಿಣ ಭಾಗದ ತುತ್ತ ತುದಿ ಯಾವುದು?


- ಇಂದಿರಾ ಪಾಯಿಂಟ್.


54) ಕರ್ನಾಟಕದ ಪಶ್ಚಿಮ ಘಟ್ಟದಲ್ಲಿರುವ ಅಣು ವಿಧ್ಯುತ್ ಸ್ಥಾವರ ಯಾವುದು?


- ಕೈಗಾ ಅಣು ವಿಧ್ಯುತ್ ಸ್ಥಾವರ.


55) ಕರ್ನಾಟಕದ ಯಾವ ಜಿಲ್ಲೆಯಲ್ಲಿ ವಾಯು ವಿಧ್ಯುತ್ ಸ್ತಾವರವಿದೆ?


- ಚಿತ್ರ ದುರ್ಗಾ.


56) ಕರ್ನಾಟಕದಲ್ಲಿ ಗುಹಾಂತರ ದೇವಾಲಯಗಳನ್ನು ಯಾವ ಜಿಲ್ಲೆಯಲ್ಲಿ ಕಾಣಬಹುದು?


- ಬೆಳಗಾಂ.


57) ಮೈಸೂರು ಅರಮನೆಯ ವಿನ್ಯಾಸವನ್ನು ಹೋಲುವ ಕಟ್ಟಡ ಬೆಂಗಳೂರಿನಲ್ಲಿದೆ. ಅ ಕಟ್ಟಡ ಯಾವುದು?


ಲೀಲಾ ಪ್ಯಾಲೇಸ್.


58) "ಷೋ ಮೇಕರ್ ಲೆವಿ ೯" ಧೂಮಕೆತುವನ್ನು ಕಂಡು ಹಿಡಿದವರು ಯಾರು?


- ಷೋ ಮೇಕರ್ ಲೆವಿ ೯


.59) "ತಾಜ್ ಮಹಲ್" ಇರುವ ಸ್ಥಳದಲ್ಲಿ ಮೊದಲು ಒಂದು ದೇವಾಲಯವಿತ್ತು ಆ ದೇವಾಲಯ ಯಾವುದು?


- "ತೇಜೋ ಮಹಾಲಯ"


60) ಕರ್ನಾಟಕದ ಅತಿ ದೊಡ್ಡ ದ್ವೀಪ ಯಾವುದು?


- ಶ್ರೀ ರಂಗ ಪಟ್ಟಣ.


61) ಜಾನಪದ ಸಾಹಿತ್ಯದಲ್ಲಿ ಹೆಚ್ಚಾಗಿ ಬಳಸಿರುವ "ಮರುಗದ ಕೆರೆ" ಕರ್ನಾಟಕದ ಯಾವ ಊರಿನಲ್ಲಿದೆ.


- ಶಿಕಾರಿಪುರದ ಮರುಗದ ಗ್ರಾಮ.


62) ಕರ್ನಾಟಕದ ಹಿಂದುಳಿದ ಜಿಲ್ಲೆ ಯಾವುದು?


- ಚಾಮರಾಜ ನಗರ.


63) ವೈಧ್ಯಕೀಯ ಕ್ಷೇತ್ರದ ಪಿತಮಹಾಯ ಯಾರು?


- ಸುಶ್ರುತ.


64) ಅತಿ ವೇಗವಾಗಿ ಜನಸಂಖ್ಯಾ ಸ್ಪೋಟವಾಗುತ್ತಿರುವ ರಾಷ್ಟ್ರ ಯಾವುದು?


- ಭಾರತ.


65) ಭವಿಷ್ಯದ ವಿದ್ಯುತ್ತಿನ ಮೂಲ ಎಂದು ಯಾವುದನ್ನು ಕರೆಯುತ್ತಾರೆ?


- ಚಂದ್ರ.


66) ಭಾರತದಲ್ಲಿ ಮೊದಲು ಶಾಸ್ತ್ರೀಯ ಸ್ಥಾನ ಪಡೆದ ಭಾಷೆ ಯಾವುದು?


- ಸಂಸ್ಕೃತ.


67) "ಇಗೋ ಕನ್ನಡ" ಎನ್ನುವ ಕನ್ನಡದ ನಿಘಂಟನ್ನು ಬರೆದವರು ಯಾರು?


- ಪ್ರೊ. ಜಿ.ವೆಂಕಟಸುಬ್ಬಯ್ಯ.


68) ಮೈಸೂರು ದಸರಾ ಉತ್ಸವದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡುವ ಸಿಂಹಾಸನದ ಹೆಸರೇನು?


- "ಕರ್ನಾಟಕ ರತ್ನ ಸಿಂಹಾಸನ".


69) "ಗೆರಿಲ್ಲಾ" ಎನ್ನುವ ಯುದ್ದ ಕಲೆಯನ್ನು ಪರಿಚಯಿಸಿದ ವ್ಯಕ್ತಿ ಯಾರು?


- ಛತ್ರಪತಿ ಶಿವಾಜಿ.


70) ವಿಶ್ವದ ಅತಿ ಎತ್ತರವಾದ ಎರಡನೆಯ ಶಿಖರ ಯಾವುದು?


- ಕೆ೨


71) ವಿಶ್ವದ ಅತಿ ಎತ್ತರವಾದ ೩ ನೆ ಶಿಖರ ಯಾವುದು?


- ಕಾಂಚನಚುಂಗ.


72) ಭಾರತದಲ್ಲಿ ಎರಡು ರಾಜಧಾನಿಯನ್ನು ಹೊಂದಿರುವ ರಾಜ್ಯ ಯಾವುದು?


- ಜಮ್ಮು-ಕಾಶ್ಮೀರ.


73) ಅಗಾಗ ಭೂಮಿಯಲ್ಲಿ ಗೋಚರಿಸುವ ಅನ್ಯಗ್ರಹ ಜೀವಿಗಳ ವಾಸಸ್ಥಳ ಭೂಮಿಯಿಂದ ಎಷ್ಟು ದೂರದಲ್ಲಿದೆ?


- 17 ಜ್ಯೋತಿರ್ವರ್ಷ.


74) ಭಾರತದಲ್ಲಿ ಹೆಚ್ಚಾಗಿ ಹವಳಗಳು ಎಲ್ಲಿ ದೊರೆಯುತ್ತದೆ?


- ಅಂಡಮಾನ್ ಮತ್ತು ನಿಕೊಬಾರ್.


75) "ಶಾಸ್ತ್ರೀಯ ಭಾಷೆ"ಗೆ ಕನ್ನಡದಲ್ಲಿ ಏನೆಂದು ಕರೆಯುತ್ತಾರೆ?


ಚೆನ್ನುಡಿ"
76 ಅತಿ ಹೆಚ್ಚು ವೇಗವಾಗಿ ಓಡುವ ಪ್ರಾಣಿ ಯಾವುದು?


- ಚಿರತೆ.


77) ಭಾರತದ ರಾಷ್ಟ್ರೀಯ ಪಕ್ಷಿ ಯಾವುದು?


- ನವಿಲು.


78) ಭಾರತೀಯರು ಯಾವ ದೇಶಕ್ಕೆ ಪ್ರಯಾಣಿಸಲು "ಪಾಸ್ ಪೋರ್ಟ್ ಮತ್ತು ವೀಸಾ"ದ ಅಗತ್ಯವಿಲ್ಲ?


- ನೇಪಾಳ


79) ಕನ್ನಡದ ಮೊದಲ ವಾಕಿ ಚಿತ್ರ ಯಾವುದು?


- ಸತಿ ಸುಲೋಚನ.


80)ಕಂಪ್ಯೂಟರಿನ ಮೆದುಳು ಎಂದು ಯಾವುದನ್ನು ಕರೆಯುತ್ತಾರೆ?


- ಸಿಪಿಯು (ಸೆಂಟ್ರಲ್ ಪ್ರಾಸೆಸ್ಸಿಂಗ್ ಯುನಿಟ್)


81) ಭಾರತ ಷೇರು ಮಾರುಕಟ್ಟೆ ಯಾವ ರಾಜ್ಯದಲ್ಲಿದೆ.


- ಮಹಾರಾಷ್ಟ್ರ.


82) ಭಾರತದ ರಾಷ್ಟ್ರಧ್ವಜದ ವಿನ್ಯಾಸಗಾರ ಯಾರು?-


Lt. ಶ್ರೀ ಪಿಂಗಲಿ ವೆಂಕಯ್ಯ.


83) ವಿಶ್ವದಲ್ಲೇ ಅತಿ ಉದ್ದವಾದ ನದಿ ಯಾವುದು?


- ನೈಲ್ ನದಿ.


84) ವಿಶ್ವದಲ್ಲೇ ಅತಿ ಉದ್ದವಾದ ಹೆದ್ದಾರಿ ಯಾವುದು?


- ಕೆನಡಾದ ಟ್ರಾನ್ಸ್ ಹೆದ್ದಾರಿ (8000 ಕಿ.ಮೀ.)


85) ಭಾರತದಲ್ಲಿರುವ ಮರುಭೂಮಿ ಯಾವುದು?


- ಥಾರ್ ಮರುಭೂಮಿ.


86) ವಿಶ್ವದ ಅತಿ ದೊಡ್ಡ ಮರುಭೂಮಿ ಯಾವುದು?


- ಸಹರ ಮರುಭೂಮಿ.


87) ಅತಿ ಹೆಚ್ಚು ಕಾಫಿ ಬೆಳೆಯುವ ದೇಶ ಯಾವುದು?


- ಬ್ರೆಜಿಲ


88) "ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನ"ವನ್ನು ಬೇರ್ಪಡಿಸುವ ಗಡಿ ಯಾವುದು?


- ಡುರಾಂಡ್ ಲೈನ್.


89) ಭೂಮಿಯಲ್ಲಿ ಅತಿಹೆಚ್ಚು ತಂಪು ವಾತಾವರಣವನ್ನು ಹೊಂದಿರುವ ಪ್ರದೇಶ ಯಾವುದು?


- ಸೈಬಿರಿಯಾದ ವೆರ್ಕೊಯನ್ಸ್ಕ್.


90) ಜಪಾನಿಯರು ತಮ್ಮ ದೇಶವನ್ನು ಏನೆಂದು ಕರೆಯುತ್ತಾರೆ?


- ನಿಪ್ಪೋನ್.


91) ಮೊಟ್ಟ ಮೊದಲು ಕೈಗಾರಿಕಾ ಕ್ರಾಂತಿಯನ್ನು ಕಂಡ ದೇಶ ಯಾವುದು?


- ಇಂಗ್ಲೆಂಡ್.


92) "ಭಾರತ ರತ್ನ" ಪ್ರಶಸ್ತಿ ಪಡೆದ ಮೊದಲ ವಿದೇಶಿ ವ್ಯಕ್ತಿ ಯಾರು?


- ನೆಲ್ಸನ್ ಮಂಡೇಲಾ.


93) ಬಿಳಿ ಆನೆಗಳ ಭೂಮಿ ಎಂದು ಗುರುತಿಸಿಕೊಂಡ ಮೊದಲ ದೇಶ ಯಾವುದು?


- ಥೈಲ್ಯಾಂಡ್.


94) ವಿಶ್ವದ ಅತಿ ಎತ್ತರವಾದ ಜಲಪಾತ ಯಾವುದು?


- ಸಲ್ತೋ ಏಂಜೆಲ್ ಜಲಪಾತ.


95) ವಿಶ್ವದ ಅತಿ ದೊಡ್ಡ ಗ್ರಂಥಾಲಯ ಯಾವುದು?


- ಯುನಟೆಡ್ ಸ್ಟೇಟ್ಸ್ ಲೈಬ್ರರಿ ಆಫ್ ಕಾಂಗ್ರೆಸ್.


96) ವಿಶ್ವದ ಅತಿ ದೊಡ್ಡ "ವಸ್ತುಸಂಗ್ರಹಾಲ"ಯ ಯಾವುದು?


- ಅಮೇರಿಕನ್ ಮ್ಯೂಸಿಯಮ್ ಆಫ್ ನ್ಯಾಷನಲ್ ಹಿಸ್ಟರಿ (ಅಮೆರಿಕಾದ ರಾಷ್ಟ್ರೀಯ ಐತಿಹಾಸಿಕ ವಸ್ತು ಸಂಗ್ರಹಾಲಯ)


97) ವಿಶ್ವದ ಅತಿ ದೊಡ್ಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಯಾವುದು?


- ಕಿಂಗ್ ಕಾಲಿದ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ (ಸೌದಿ ಅರೇಬಿಯಾ)


98) ವಿಶ್ವದ ಅತಿ ದೊಡ್ಡ ಚರ್ಚ್ ಯಾವುದು?


- ರೋಮ್ ನ ಬ್ಯಾಸಿಲಿಕಾ ಆಫ್ ಸೆಂಟ್ ಪೀಟರ್.


99) ವಿಶ್ವದ ಅತಿ ಉದ್ದವಾದ ರೈಲ್ವೆ ಮಾರ್ಗ ಯಾವುದು?


- ಒಶಿಂಜು ಟುನೆಲ್.


100) ವಿಶ್ವದ ಹಳೆಯ ರೈಲ್ವೆ ಸುರಂಗ ಮಾರ್ಗ ಇಂಗ್ಲೆಂಡಿನ ಯಾವ ಪ್ರದೇಶದಲ್ಲಿದೆ?


- ಲಂಡನ್.
101) ಭಾರತದ ರಾಜಧಾನಿ ಯಾವುದು?


- ದೆಹಲಿ


102) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅತಿಹೆಚ್ಚು ತರಕಾರಿಗಳನ್ನು ಬೆಳೆಯುತ್ತಾರೆ?


- ಹಾಸನ.


103) ಕರ್ನಾಟಕದ ಕವಿಗಳ ನಾಡು ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ?


- ದಾರವಾಡ.


104) ವಿಶ್ವ ಪ್ರಸಿದ್ದ ಕಲ್ಲಿನ ರಥ ಯಾವ ಜಿಲ್ಲೆಯಲ್ಲಿದೆ?


- ಬಳ್ಳಾರಿ.


105) "ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ"ನವರ ಜನ್ಮ ಸ್ಥಳ ಯಾವುದು?


-ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೆನಹಲ್ಲಿ.


106) ಕರ್ನಾಟಕ ಸರ್ಕಾರದ ಸುಪ್ರಸಿದ್ದ ಹೋಟೆಲ್ ಯಾವುದು?


- ದಿ ಗ್ರಾಂಡ್ ಅಶೋಕ.


107) ಮಂಡ್ಯ ಜಿಲ್ಲೆಯಲ್ಲಿರುವ ಪಕ್ಷಿಧಾಮ ಯಾವುದು?


- ರಂಗನತಿಟ್ಟು.


108) ಕರ್ನಾಟಕ ಆರಕ್ಷಕರ ಗಸ್ತು ವಾಹನಕ್ಕೆ ಏನೆಂದು ಕರೆಯುತ್ತಾರೆ?


- ಹೊಯ್ಸಳ.


107) ಕೆಂಪೇಗೌಡರು ನಿರ್ಮಿಸಿದ ಅವಳಿನಗರಗಳು ಯಾವುದು?


- ಬೆಂಗಳೂರು ಮತ್ತು ಯಲಹಂಕ.


108) ಭಾರತ ದೇಶದ ಯಾವ ರಾಜ್ಯದಲ್ಲಿ ಅತಿ ಹೆಚ್ಚು "ಶಿಲಾ ಶಾಸನ ಮತ್ತು ವೀರಗಲ್ಲು"ಗಳನ್ನೂ ಕಾಣಬಹುದು?


- ಕರ್ನಾಟಕ.


109) "ಗೋಪಾಲರಾಯನ ಹೆಬ್ಬಾಗಿಲು" ಎಂದು ಪ್ರಸಿದ್ದವಾದ ಕಲ್ಲಿನ ಸ್ಮಾರಕ ಕರ್ನಾಟಕದ ಯಾವ ಊರಿನಲ್ಲಿದೆ?


- ಮೇಲುಕೋಟೆ.


110) ಮಂಡ್ಯ ಜಿಲ್ಲೆಯಲ್ಲಿರುವ ಜಲಾಶಯ ಯಾವುದು?


- ಕೃಷ್ಣರಾಜ ಸಾಗರ


111) ಪ್ರೆಂಚ್ ಮಾದರಿಯ ರಕ್ಷಣೆಯನ್ನು ಹೊಂದಿದ್ದ ಕೋಟೆ ಯಾವುದು?


- ಶ್ರೀ ರಂಗಪಟ್ಟಣದ ಕೋಟೆ.


112) ಏಷ್ಯ ಖಂಡದಲ್ಲೇ ಅತಿ ಎತ್ತರವಾದ ಏಕಶಿಲಾ ಬೆಟ್ಟ ಯಾವ ಊರಿನಲ್ಲಿದೆ?


- ಮಧುಗಿರಿ.


113) ಕನ್ನಡಿಗರ ಬಲಿಷ್ಟ ಸಾಮ್ರಾಜ್ಯ ಯಾವುದು?


- ರಾಷ್ಟ್ರಕೂಟರ ಸಾಮ್ರಾಜ್ಯ.


114) ಯಾರ ಒಂದು ಆಳ್ವಿಕೆಯಲ್ಲಿ ಕರ್ನಾಟಕವ ವೈಭವದ ತುತ್ತ ತುದಿಯನ್ನು ಮುಟ್ಟಿತ್ತು?


- ಶ್ರೀ ಕೃಷ್ಣ ದೇವಾರಾಯ.


115) ವಿಜಯನಗರ ಸಾಮ್ರಾಜ್ಯದ ಮೊದಲ ಚಕ್ರವರ್ತಿ ಯಾರು?


- ಒಂದನೇ ಹರಿಹರ (ಹಕ್ಕ ಮಹಾಶಯ)


116) ಕೆ.ಅರ್.ಎಸ್ ಜಲಾಶಯದಲ್ಲಿ ಮುಳುಗಿಹೋಗಿರುವ ದೇವಾಲಯ ಯಾವುದು? ಇದು ಯಾರ ಕಾಲದ್ದು?


- ವೇಣುಗೋಪಾಲ ಸ್ವಾಮಿ ದೇವಾಲಯ. ಇದು ಚೋಳರ ಕಾಲದ್ದು?


117) "ಕನ್ನಡ ಚಿತ್ರರಂಗದ ಬೀಷ್ಮ" ಎಂದು ಯಾರನ್ನು ಕರೆಯುತ್ತಾರೆ?


- ಹೊನ್ನಪ್ಪ ಭಾಗವತರ್.


118) ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಯಾರು?


- ಪ್ರತಿಭಾದೇವಿ ಸಿಂಗ್ ಪಾಟಿಲ್.


119) ಕರ್ನಾಟಕ ರಾಜ್ಯದಲ್ಲಿ ಎಷ್ಟು "ವಿಧಾನಸಭೆ" ಕ್ಷೇತ್ರಗಳಿವೆ


- ೨೨೪


120) ಕರ್ನಾಟಕ ರಾಜ್ಯದ ಅತಿದೊಡ್ಡ ಆನೆಗಳ ಬಿಡಾರ ಎಲ್ಲಿದೆ?


- ಸಕ್ರೆ ಬೈಲು.


121) ಮೈಸೂರು ಅರಮನೆಯ ವಿನ್ಯಾಸಕ ಯಾರು?


- ಹೆನ್ರಿ ಇರ್ವಿನ್.


122) ಭಾರತದಲ್ಲಿ ಮೊದಲು ಸಿಮೆಂಟ್ ಕಾರ್ಖಾನೆ ಎಲ್ಲಿ ಸ್ಥಾಪನೆ ಆಯಿತು?


- ಚೆನ್ನೈ.


123) "ಟಿಪ್ಪು ಸುಲ್ತಾನ"ನ ಅರಮನೆಯನ್ನು ಏನೆಂದು ಕರೆಯುತ್ತಾರೆ?


- ಕೆಂಪು ಭವನ, (ಲಾಲ್ ಮಹಲ್)
124) ವಿಮಾನವನ್ನು ಕಂಡುಹಿಡಿದವರು ಯಾರು?


- ರೈಟಾ ಸಹೋದರರು.


125) ಭಾರತೀಯ ಅಂಚೆ ಕಛೇರಿ ಮತ್ತು ಸ್ಟಾಂಪುಗಳು ಅಧಿಕೃತವಾಗಿ ಯಾವಾಗ ಜಾರಿಗೆ ಬಂತು?


- ಅಕ್ಟೋಬರ್ ೧ನೇಯಾ 1854


126) ವೈದ್ಯಕೀಯ ಇತಿಹಾಸದಲ್ಲಿ ಸಿಜ್ಹಲ್ ಅಪರೇಷನ್ ಮೂಲಕ ಜನಿಸಿದ ಮೊದಲ ವ್ಯಕ್ತಿ ಯಾರು?


- ಜೂಲಿಯಸ್ ಸಿಜ್ಹಲ್.


127) ಮೊದಲ ಜೆಟ್ ವಿಮಾನವನ್ನು ಯಾರು? ಎಲ್ಲಿ? ಯಾವಾಗ? ಕಂಡುಹಿಡಿದರು?


- ಫ್ರಾಂಕ್ ವೈಟಿಲಫ್, ಇಂಗ್ಲೆಂಡ್, ೧೯೩೦


128) ಪ್ರಪಂಚದಲ್ಲಿ ಜನಸಂಖ್ಯಾನುಸಾರ ಹೆಚ್ಚು ಮಾತನಾಡುವ ಭಾಷೆಯಲ್ಲಿ ಕನ್ನಡವು ಎಷ್ಟನೆಯದಾಗಿದೆ?


- ೩೦


129) ಕನ್ನಡದ ಮೊದಲ ಸಾಹಿತಿ ಯಾರು?


- ಗಂಗರ ಕಾಲದ "ಧ್ರುವನೀತ ಚಾವುಂಡರಾಯ".


1೩೦) ಕನ್ನಡದ (ಕನ್ನಡಿಗರ) ಮೊದಲ ಸಾಮ್ರಾಜ್ಯ ಯಾವುದು?


- ಕದಂಬ ಸಾಮ್ರಾಜ್ಯ.


131) ಬನವಾಸಿ ಎಂದು ಈಗಿನ ಯಾವ ಜಿಲ್ಲೆಯನ್ನು ಕರೆಯುತ್ತಿದ್ದರು.


- ಉತ್ತರ ಕನ್ನಡ ಜಿಲ್ಲೆ.
132) ಹೊಯ್ಸಳರ ಸಮ್ರಾಜ್ಯದ ರಾಜಧಾನಿ ಯಾವುದು?


- ಹಳೇಬೀಡು.


133) ಕನ್ನಡವನ್ನು "ವಿಶ್ವ ಲಿಪಿಗಳ ರಾಣಿ" ಎಂದು ಯಾರು ವರ್ಣಿಸಿದ್ದಾರೆ?


- "ಭೂದಾನ ಚಳುವಳಿ ನೇತಾರ - ಶ್ರೀ ವಿನೋಭಾ ಭಾವೆ"


134) "ಕರ್ನಾಟಕ ಕುಲ ಪುರೋಹಿತ" ಎಂದು ಯಾರನ್ನು ಕರೆಯುತ್ತಾರೆ?


- ಆಲೂರು ವೆಂಕಟರಾಯರು.


135) "ಹಬಶಿಕೋಟೆ" ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?


- ಬೀದರ್.


136) ಚಂದ್ರನ್ನನ್ನು ಸ್ಪರ್ಶಿಸಿದ ಮೊದಲ ಮಾನವ ಯಾರು?


- ನೀಲ್ ಆರ್ಮ್ ಸ್ಟ್ರಾಂಗ್.


137) ದೂರವಾಣಿಯನ್ನು ಕಂಡುಹಿಡಿದವರು ಯಾರು?


- ಗ್ರಾಂಬೆಲ್


138) ವಿಧ್ಯುತ್ ಅನ್ನು ಕಂಡು ಹಿಡಿದವರು ಯಾರು?


- ಥಾಮಸ್ ಅಲ್ವ ಎಡಿಸನ್


139) ಬಾನುಲಿ (ರೇಡಿಯೋ) ಅನ್ನು ಕಂಡುಹಿಡಿದವರು ಯಾರು?


- ಮಾರ್ಕೋನಿ.


140) "ನಿತ್ಯೋತ್ಸವ"ವನ್ನು ಕರೆದವರು ಯಾರು?


- ಕೆ. ಎಸ್ ನಿಸಾರ್ ಅಹಮದ್.


141) ಹುಲಿ ಯಾವ ರಾಷ್ಟ್ರೀಯ ಪ್ರಾಣಿ?


- ಭಾರತ.


142) ಕನ್ನಡದ ಕೀಲೀ ಮಣೆಯನ್ನು ಕಂಡು ಹಿಡಿದವರು ಯಾರು?


- ಕೌಶಿಕ ಅನಂತಸುಬ್ಬರಾಯರು.


143) ಕ್ರಿ.ಶ.800 ರಲ್ಲಿ ಗಂಗ ಅರಸರ ಕಾಲದ ಸೈಗೊಟ್ಟ ಶಿವರಾಮ ಆನೆಗಳನ್ನು ಪಳಗಿಸಿ-ಉಪಯೋಗಿಸಿಕೊಳ್ಳುವ ತಾಂತ್ರಿಕ ಕಲೆಯನ್ನು ಪರಿಚಯಿಸುವ ಪುಸ್ತಕ ಬರೆದಿದ್ದರೆ. ಅದು ಯಾವುದು?


- ಗಜಶಾಸ್ತ್ರ.


144) ಕ್ರಿ.ಶ.942-1025 ರಲ್ಲಿ 2ನೇ ಚಾವುಂಡರಾಯ ಬಂಡೆಕಲ್ಲು ಒಡೆಯುವ ಕ್ರಮ, ಹಣ್ಣುಗಳಲ್ಲಿ ಬೀಜವಿಲ್ಲದಂತೆ ಮಾಡುವ ಕಲೆ, ಕ್ಷಯ ನಿವಾರಣೆ, ವಿಷವನ್ನು ಶಮನ ಮಾಡುವ ಬಗೆ, ಬುದ್ದಿವರ್ಧನೆಗೆ ಔಷಧೋಪಚಾರ ಹೇಗೆ ಎಂಬುದರ ಬಗ್ಗೆ ಯಾವ ಪುಸ್ತಕದಲ್ಲಿ ದಾಖಲಿಸಿದ್ದಾರೆ?


- ಲೋಕೋಪಕಾರ.


145) ಕನ್ನಡದಲ್ಲಿ ಮೊದಲ ಜ್ಯೋತಿಷ್ಯ ಶಾಸ್ತ್ರ ಎಂದು ಪರಿಗಣಿಸಲ್ಪಡುವ ಜಾತಕ ತಿಲಕ ಎಂಬ ಕೃತಿಯನ್ನು ಯಾರು ರಚಿಸಿದ್ದರು?


- ಕ್ರಿ.ಶ. 1049 ರಲ್ಲಿ ಶ್ರೀಧರಾಚಾರ್ಯ.


146) ಮೊದಲ ವೈದ್ಯ ಶಾಸ್ತ್ರ ಗ್ರಂಥ ಯಾವುದು? ಯಾವಾಗ? ಯಾರು ಬರೆದರು?


- ಕ್ರಿ.ಶ. 1150ರಲ್ಲಿ ಜಗದ್ಧಳ ಸೋಮನಾಥರ ಕಲ್ಯಾಣಕಾರವೆಂಬ.


147) ಕ್ರಿ.ಶ.1300 ರಲ್ಲಿ ಮಳೆ, ಬೆಳೆ ,ನೀರು ,ಹವಾಮಾನ, ವಾಯುಗುಣ, ಬಿತ್ತನೆ ಮತ್ತು ಅಂತರ್ಜಲ ಇರುವ ಸ್ಥಳವನ್ನು ಕರಾರುವಕ್ಕಾಗಿ ಕಂಡು ಹಿಡಿಯುವ ಬಗೆ ಇತ್ಯಾದಿಗಳನ್ನು ಕುರಿತ ವಿಷಯಗಳನ್ನು ರಟ್ಟಶಾಸ್ತ್ರ ಎಂಬ ಪುಸ್ತಕವನ್ನು ಬರೆದವರು ಯಾರು?


- ರಟ್ಟಕವಿ ಎಂಬ ಕೃಷಿ ವಿಜ್ಞಾನಿ.


148) ಮಹಾರಾಷ್ಟ್ರದಲ್ಲಿ ಜಕಣಾಚಾರ್ಯರು ಕಟ್ಟಿದ ಕಟ್ಟಡಗಳನ್ನೂ ಏನೆಂದು ಕರೆಯುತಾರೆ?


- "ಹೇಮಾಡಪಂತೀ" ಗುಡಿಗಳು.
149. ಶ್ರೀ ಕೃಷ್ಣದೇವರಾಯ ಯಾವ ವಂಶಕ್ಕೆ ಸೇರಿದವನು ?


- ತುಳು



150. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಯಾವಾಗ ಜರುಗಿತು?



-1857





Tuesday, April 26, 2011

ಆಧುನಿಕ ಭಾರತ ಇತಿಹಾಸ

ಆಧುನಿಕ ಭಾರತ ಇತಿಹಾಸ
ಭಾರತೀಯ ಪುನುರುಜ್ಜೀವನ
I. ರಾಜ ರಾಂ ಮೋಹನ್ ರಾಯ್- ಭಾರತೀಯ ಪುನುರುಜ್ಜೀವನದ ಪಿತಾಮಹಾ
ಜನನ: 1772 ರಲ್ಲಿ ಬಂಗಾಳದ ಬರ್ದ್ವಾನ ಜಿಲ್ಲೆಯ ರಾಧನಗರ್
ತಂದೆ : ರಮಾಕಾಂತ್ ರಾಯ್
ತಾಯಿ: ತಾರಿಣಿ ದೇವಿ
1814 ರಲ್ಲಿ ಅತ್ಮೀಯ ಸಭಾ ಸ್ಥಾಪನೆ ಇದು 1828 ರ ಆಗಸ್ಟ್ 20 ರಂದು ಕಲ್ಕತ್ತದಲ್ಲಿ ಬ್ರಹ್ಮಸಮಾಜವಾಗಿ ಪರಿವರ್ತನೆಯಾಯಿತು
1829 ರ ಡಿಸೆಂಬರ್ 4 ರಂದು ಸತಿ ಪದ್ಧತಿ ನಿಷೇಧ ಈ ಸಮಯದಲ್ಲಿ ಭಾರತದಲ್ಲಿ ಬ್ರಿಟೀಷ್ ರ ಗೌರ್ನರ್
ಜನರಲ್ ಆಗಿದ್ದರು ವಿಲಿಯಂ ಬೆಲ್ಯೂಕ್
ಬಿರುದುಗಳು: ಭಾರತೀಯ ಪುರುಜ್ಜೀವನದ ಪಿತಾಮಹಾ
ಭಾರತದ ರಾಷ್ಟ್ರೀಯತೆಯ ಪಿತಾಮಹಾ
ಭಾರತೀಯ ಪುರುಜ್ಜೀವನದ ಉಷಾತಾರೆ
ಅಧುನಿಕ ಬಂಗಾಳ ಗದ್ಯ ಸಾಹಿತ್ಯದ ಪಿತಾಮಹಾ
ಭಾರತೀಯ ಪತ್ರಿಕೋದ್ಯಮದ ಪ್ರವರ್ತಕ
1828 ರ ಆಗಸ್ಟ್ 20 ರಂದು ಕಲ್ಕತ್ತದಲ್ಲಿ ಸ್ಥಾಪಿತವಾದ ಬ್ರಹ್ಮಸಮಾಜ ರಾಜ ರಾಂ ಮೋಹನ್ ರಾಯ್ ರವರ ಮರಣದ ನಂತರ
ವಿಭಜನೆಯಾಯಿತು: ದೇವೆಂದ್ರನಾಥ್ ಠಾಗೋರ್ ರವರಿಂದ ಅಧಿ ಬ್ರಹ್ಮ ಸಮಾಜ
ಕೇಶವ್ ಚಂದ್ರ ರವರಿಂದ ಭಾರತೀಯ ಬ್ರಹ್ಮ ಸಮಾಜ
2 ದಯಾನಂದ ಸರಸ್ವತಿ - ವೇದಗಳ ಅಧಾರದ ಮೇಲೆ ಹಿಂದು ಸಮಾಜವನ್ನು ಶುದ್ಧೀಕರಿಸಲು ಪ್ರಯತ್ನಿಸಿದ ಮೊದಲ ರಸ ಋಷಿ
ಮೂಲಹೆಸರು: ಮೂಲಶಂಕರ
ಜನನ: 1824 ರಲ್ಲಿ ಗುಜರಾತಿನ ತಂಕಾರ ಗ್ರಾಮ
ತಂದೆ : ಅಂಬ ಶಂಕರ ತಿವಾರಿ
ತಾಯಿ: ಅಮೃತ ಭಾಯಿ
1875ರ ಏಪ್ರಿಲ್ 10 ರಂದು ಲಾಹೋರ್ ನಲ್ಲಿ ಮೊದಲ ಆರ್ಯ ಸಮಾಜ ಸ್ಥಾಪನೆ
1877 ರಲ್ಲಿ ಮುಂಬೈನಲ್ಲಿ 2 ನೆ ಶಾಖೆ ಪ್ರಾರಂಭ
ತನ್ನ ಪ್ರಸಿದ್ದ ಕೃತಿಯಾದ ಸತ್ಯಾರ್ಥ ಪ್ರಕಾಶನ ದಲ್ಲಿ ವೇದಗಳಿಗೆ ಹಿಂತಿರುಗಿ ಎಂದು ಕರೆಕೊಟ್ಟರು
ಇದು ಆರ್ಯರ ಬೈಬಲ್
ಇವರ ಇರ ಕೃತಿಗಳು : ವೇದ ಭಾಷ್ಯ ಭೂಮಿಕ, ಭಾರತ ಭಾರತೀಯರಿಗೆ
3. ಸ್ವಾಮಿ ವಿವೇಕಾನಂದ 1863 ರಿಂದ 1902
ಮೂಲ ಹೆಸರು: ನರೇಂದ್ರ ನಾಥ ದತ್ತ
ಇವರಿಗೆ ಆಧ್ಯಾತ್ಮಿಕ ದಿವ್ಯ ಪುರುಷ ಎನ್ನುವರು
ಜನನ: 1863 ಜನವರಿ 12 ರಂದು : ಇದನ್ನು ವಿಶ್ವ ಯುವಕ ದಿನವನ್ನಾಗಿ ಆಚರಿಸುತ್ತಾರೆ
ತಂದೆ ವಿಶ್ವನಾಥ ದತ್ತ
ತಾಯಿ: ಭುವನೇಷ್ವರಿ
ಇವರ ಗುರು: ರಾಮಕೃಷ್ಣ ಪರಮ ಹಂಸ
1893 ಮೇ 31 ರಂದು ಅಮೇರಿಕಾದ ಚಿಕಾಗೋ ನಗರದಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಸಿದ್ದರು
1897 ರಲ್ಲಿ ಕಲ್ಕತ್ತಾದ ಬೇಲೂರಿನಲ್ಲಿ : ರಾಮಕೃಷ್ಣ ಮಿಷಿನ್ ಸ್ಥಾಪನೆ
ಸಂದೇಶ: ಯುವಕರೇ ಏಳಿ ಎದ್ದೇಳಿ ಗುರಿಮುಟ್ಟುವತನಕ ನಿಲ್ಲದಿರಿ
ಜನರ ಸೇವೆಯೇ ಜನರ್ಧಾನ ಸೇವೆ
ಪತ್ರಿಕೆಗಳು: ಪ್ರಭುಧ್ದ್ ಭಾರತ, ಉದ್ಬೋದನ
ಬಿರುದು: ವೇದಾಂತ ಕೇಸರಿ
4. ಸರ್ ಸೈಯದ್ ಅಹ್ಮದ್ ಖಾನ್ 1817 ರಿಂದ 1898
ಮುಸ್ಲಿಂ ಸಮುದಾಯದ ಉದ್ಧಾರಕ್ಕೆ ಅಲಿಘಡ್ ಚಳುವಳಿ ಪ್ರಾರಂಬಿಸಿದರು
ಅಂಜುಮಾನ್ ಸೇವಾ ಸಂಘ ಸ್ಥಾಪಸಿದರು
ಇವರು ಮುಸ್ಲಿಂ ಧರ್ಮದ ವೃದ್ಧ ಪಿತಾಮಹಾ
1875 ರಲ್ಲಿ ಅಲೀಘಡ್ ದಲ್ಲಿ ಓರಿಯಂಟಲ್ ಕಾಲೇಜ್ ಸ್ಥಾಪನೆ
ಮುಂದೆ ಇದು ಅಲೀಘಡ್ ವಿಶ್ವ ವಿದ್ಯಾಲಯವಾಯಿತು
1888 ರಲ್ಲಿ ಇವರಿಗೆ " ನೈಟ್ ಹುಡ್" ಪ್ರಶಸ್ತಿ ನೀಡಲಾಯಿತು
ಪತ್ರಿಕೆಗಳು: ತಹಜಿಲ್-ಉಲ್-ಅಖ್ಲಾಕ್
5.ಡಾ. ಅನಿಬೆಸೆಂಟ್
ಕಾಲ: 1846 ರಿಂದ 1933
ಇವರು ಐರೀಷ್ ಮಹಿಳೆ
1846 ರಲ್ಲಿ ಐರ್ಲ್ಯಾಂಡಿನಲ್ಲಿ ಜನನ
1893 ರಲ್ಲಿ ಥಿಯೋಸಾಪಿಕಲ್ ಸೊಸೈಟಿಯ ಸದಸ್ಯರಾಗಿ ಭಾರತಕ್ಕೆ ಬಂದರು
1907 ರಲ್ಲಿ ಇದರ ಅಧ್ಯಕ್ಷರಾದರು
ಕಾಂಗ್ರೇಸ್ಸಿನ ಪ್ರಥಮ ಮಹಿಳಾ ಅದ್ಯಕ್ಶೆ ಇವರು
1916 ರಲ್ಲಿ ಚನೈನ ಅಡಿಯಾರ್ ನಲ್ಲಿ ಹೋಂರೂಲ್ ಚಳುವಳಿ ಸ್ಥಾಪಿಸಿದರು
ಪತ್ರಿಕೆ: ಇಂಡಿಯಾ ಪತ್ರಿಕೆ ಆರಂಭಿಸಿದರು
ಕಾಂಗ್ರೇಸ್ಸಿನ ಪ್ರಥಮ ಭಾರತೀಯ ಮಹಿಳೆ : ಶ್ರೀಮತಿ ಸರೋಜಿನಿ ದೇವಿ ನಾಯ್ಡು
ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ (INC-INDIAN NATIONAL CONGRESS) ಸ್ಥಾಪನೆ
1885 ರಲ್ಲಿ ಮುಂಬೈನಲ್ಲಿ ಎ. ಓ. ಹ್ಯೂಂ. (A O HUME) ರಿಂದ ಸ್ಥಾಪನೆ
ಅಧಿವೇಶನ
ವರ್ಷ
ಸ್ಥಳ
ಅದ್ಯಕ್ಷರು
ಪ್ರಥಮ
1885 ಡಿಸೆಂಬರ್ 28 ರಿಂದ 30
ಮುಂಬೈ
WC ಬ್ಯಾನರ್ಜಿ
ದ್ವಿತೀಯಾ
1886
ಕಲ್ಕತ್ತಾ
ದಾದಾ ಬಾಯಿ ನವರೋಜಿ
ತೃತೀಯಾ
1887
ಮದ್ರಾಸ್
ಬದ್ರುದ್ದೀನ್ ತಯಾಬ್ಜಿ
4 ನೇಯದು
1888
ಅಲಹಾಬಾದ್
ಜಾರ್ಜ್ ಯುಲೆ

1907
ಸೂರತ್
ರಾಸ್ ಬಿಹಾರಿ ಬೋಷ್
ಕಾಂಗ್ರೇಸ್ ಸ್ಥಾಪನೆ ಉದ್ದೇಶ
1. ಭಾರತದಲ್ಲಿ ಬ್ರಿಟೀಶರ ಆಡಳಿತಕ್ಕೆ ಒತ್ತಾಯಿಸುವುದು
2. ಭಾರತೀಯರಲ್ಲಿ ಜಾಗೃತಿ ಮೂಡಿಸುವುದು
3.ಬ್ರಿಟೀಶರ ಆಡಳಿತದಲ್ಲಿ ಭಾರತೀಯರು ಹೆಚ್ಚು ಹೆಚ್ಚು ಪಾಲ್ಗೊಳ್ಳೂವಂತೆ ಒತ್ತಾಯಿಸುವುದು
4.ಸಂವಿಧಾನದ ಸುದಾರಣೆಗೆ ಒತ್ತಾಯಿಸುವುದು
5.ವಿದೇಶದಲ್ಲಿ ಭಾರತೀಯರ ಹಿತವನ್ನು ಕಾಪಾಡುವುದು
6.ಭಾರತೀಯರ ಸಮಸ್ಯಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು
7.ರಾಷ್ಟ್ರೀಯತೆಯ ಜಾಗೃತಿಯನ್ನು ಮೂಡಿಸುವುದು.

ಮಂದಗಾಮಿಗಳು : 1885 ರಿಂದ 1905
ಸಂವಿಧಾನಾತ್ಮಕ ಹೋರಾಟದಲ್ಲಿ ನಂಬಿಕೆಯಿಟ್ಟು ಶಾಂತಿಯುತವಾಗಿ ಪ್ರತಿಭಟನೆ ಮಾಡುವರು
ನಾಯಕರಗಳು: ದಾದಬಾಯಿ ನವರೋಜಿ, ಗೋಪಾಲ್ ಕೃಷ್ಣ ಗೋಖಲೆ, ಮೆಹ್ತಾ, WC ಬ್ಯಾನರ್ಜಿ, ಬದ್ರುದ್ದೀನ್ ತಯಾಬ್ಜಿ, ಸುರೇಂದ್ರನಾಥ್ ಬ್ಯಾನರ್ಜಿ, M G ರಾನಡೆ,
ಬ್ರಿಟೀಶ್ ಸರ್ಕಾರದ ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಮೊಟ್ಟ ಮೊದಲಿಗೆ ತೋರಿಸಿಕೊಟ್ಟವರು "ದಾದ ಬಾಯಿ ನವರೋಜಿ "
ತನ್ನ ಕೃತಿಯಾದ Poverty and un-British rule in India ದಲ್ಲಿ
1905 ರಲ್ಲಿ ಗೋಪಾಲ್ ಕೃಷ್ಣ ಗೋಖಲೆಯವರು ವಿದೇಶದಲ್ಲಿನ ಭಾರತೀಯರ ರಕ್ಷಣೆಗಾಗಿ ಸರ್ವೆಂಟ್ ಆಪ್ ಇಂಡಿಯಾ ಸ್ಥಾಪಿಸಿದರು
1885 ರಲ್ಲಿ INC ಸ್ಥಾಪನೆಯಾದಾಗ ಬ್ರಿಟೀಶ್ ವೈಸ್ ರಾಯ್ ಯಾಗಿದ್ದವರು ಲಾರ್ಡ್ ಡಫ್ರೀನ್
ತೀವ್ರಗಾಮಿಗಳು 1905 ರಿಂದ 1919 :
ಮಂದಗಾಮಿಗಳು ಭಾರತೀಯರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾದಗ ತೀವ್ರಗಾಮಿಗಳು ಹುಟ್ಟುಕೊಂಡರು
ಇವರು ವಿಚಾರದಲ್ಲಿ ತೀವ್ರತೆಯನ್ನು ಹೊಂದಿದ್ದವರು,
ನಾಯಕರುಗಳು: ಲಾಲ್ ಬಾಲ್ ಪಾಲ್
ಲಾಲ ಲಜಪತ್ ರಾಯ್, ಬಾಲಗಂಗಾಧರನಾಥ್ ತಿಲಕ್ ಮತ್ತು ಬಿಪಿನ್ ಚಂದ್ರಪಾಲ್ ಮತ್ತು ಅರವಿಂದ್ ಘೋಷ್
1905 ರಲ್ಲಿ ಬಂಗಾಲದ ವಿಭಜನೆಯಾಯಿತು: ಮಾಡಿದವರು ಲಾರ್ಡ್ ಕರ್ಜನ್ 1911 ರಲ್ಲಿ ಬಾಂಗ್ಲ ಒಗ್ಗೂಡಿಸಲಾಯಿತು.
ಭಾಲಗಂಗಾದರ ನಾಥ್ ತಿಲಕ್: ಇವರು ಲೋಕಮಾನ್ಯ ತಿಲಕರೆಂದು ಪ್ರಸಿದ್ದಿಯಾಗಿದ್ದರು
ಜನನ: 1856 ಜುಲೈ 23 ರಂದು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಕಲ್ ಎಂಬಲ್ಲಿ
ಘೋಷಣೆ: "ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು"
ಪತ್ರಿಕೆಗಳು : ಮರಾಠಿ ಭಾಷೆಯ ಕೇಸರಿ ಮತ್ತು ಆಂಗ್ಲ ಭಾಷೆಯ ಮಾರಾಠ
ವಂಗ ಭಂಗ ಚಳುವಳಿಯನ್ನು ಸ್ಥಾಪಿಸಿದರು
1906 ರಲ್ಲಿ ಅಘಾಖಾನ್ ರವರಿಂದ ಡಾಕಾ ಮುಸ್ಲಿಂ ಲೀಗ್ ಸ್ಥಾಪನೆ
1916 ರಲ್ಲಿ ಹೋಂ ರೂಲ್ ಚಳುವಳಿ ಸ್ಥಾಪನೆ
ಲಾಲ ಲಜಪತ್ ರಾಯ್ ರು UNHAPPY ಕೃತಿಯನ್ನು ರಚಿಸಿದರು
ಗಾಂಧಿ ಯುಗ 1919 ರಿಂದ 1947:
ಇದರ ನಾಯಕರು ಮಹಾತ್ಮ ಗಾಂಧಿಜೀ
ಜನನ: 1869 ಅಕ್ಟೋಬರ್ 2 ರಂದು ಇದನ್ನು ವಿಶ್ವ ಅಹಿಂಸಾ ದಿನವನ್ನಾಗಿ ಅಚರಿಸುತ್ತಾರೆ.
ತಂದೆ: ಕರಮಚಂದ ಗಾಂಧಿ ತಾಯಿ: ಪುತಳೀ ಬಾಯಿ
1893 ರಲ್ಲಿ ಬಾಂಬೆ ದಾದ ಅಬ್ದುಲ್ಲಾ ಕಂಪನಿಯ ದಾವೆಯ ಮೊಖದ್ದಮ್ಮೆಯನ್ನು ಹೂಡಲು ಆಫ್ರೀಕಾಕಕ್ಕೆ ಹೋದರು
1915 ರಲ್ಲಿ ಭಾರತಕ್ಕೆ ಮರಳಿದರು ಆಗ ಗುಜರಾತ್ ನಲ್ಲಿ ಸಬರಮತಿ ಆಶ್ರಮ ಸ್ಥಾಪಿಸಿದರು ಉಪ್ಪುನ ಸತ್ಯಾಗ್ರಹವನ್ನು ಸಹಾ ಇಲ್ಲೇ ಪ್ರಾರಂಬಿಸಿದರು.
ದಕ್ಷಿಣ ಆಫ್ರೀಕಾದಲ್ಲಿ ನೀಟಾಲ್ ಇಂಡೀಯಾ ಎಂಬ ಪತ್ರಿಕೆ ಸ್ಥಾಪಿಸಿದರು
ಪತ್ರಿಕೆಗಳು END INDIA, ನವಜೀವನ
ಇವರ ಆತ್ಮಕಥನ: My experiment with Truth
1919 ರ ಪೆಬ್ರವರಿ 19 ರಂದು ರೌಲತ್ ಕಾಯಿದೆ ಜಾರಿಗೆ ಬಂತು
1919 ಏಪ್ರಿಲ್ 13 ರಂದು ಪಂಜಾಬ್ ನ ಜಲಿಯನ್ ವಾಲಾ ಬಾಗ್ ಹತ್ಯಕಾಂಡ ನಡೆಯಿತು.
ಇದೊಂದು ಅವಮಾನವೀಯ ಘಟನೆ, ಮೇಲ್ಕಂಡ ದಿನಾಂಕದಂದು ಪಂಜಾಬ್ ನ ಜಲಿಯನ್ ವಾಲ್ ಬಾಗ್ ಎಂಬ ಸ್ಥಳದಲ್ಲಿ ಜನರು ಸೇರಿ ಸಭೆ ನಡೆಸುತಿದ್ದರು ಈ ಸಭೆಯಲ್ಲಿ ಸ್ವಾಭಿಮಾನಿ ಭಾರತೀಯರೆಲ್ಲರು ಭಾಗವಹಿಸಿದ್ದರು, ಸಭೆ ಸೇರಿದ್ದ ಸ್ಥಳವೂ ಒಂದು ವಿಶಾಲವಾದ ಅಂಗಳವಾಗಿದ್ದು ಕೇವಲ ಒಂದೇ ಒಂದು ಪ್ರವೇಶ ದ್ವಾರವಿರುತ್ತದೆ ಆಗ ಅದನ್ನು ಗಮನಿಸಿದ ಬ್ರಿಟೀಶ್ ಸೇನಾನಿ ಜನರಲ್ ಡಯರ್ ಎಲ್ಲರ ಮೇಲೆ 1650 ಗುಂಡು ಹಾರಿಸುತ್ತಾನೆ ಈ ಘಟನೆಯಲ್ಲಿ 379 ಜನರು ಸತ್ತು 1208 ಜನ ಗಾಯಗೊಳ್ಳುತ್ತಾರೆ
ಖಿಲಾಪತ್ ಚಳುವಳಿ : 1919 ರಿಂದ 1923::: ಟರ್ಕಿಯಾ ಇಬ್ಬರು ಸಹೋದರರಾದ ಮಹ್ಮದ್ ಅಲಿ ಮತ್ತು ಶೌಕತ್ ಅಲಿ ಎಂಬುವುವರು ತಮ್ಮ ಚಳುವಳಿಗೆ ಮಹಾತ್ಮ ಗಾಂಧೀಜಿಯವರ ಸಹಾಯವನ್ನು ಪಡೆದುಕೊಳ್ಳುತಾರೆ ಇದನ್ನೆ ಖಿಲಾಪತ್ ಚಳುವಳಿ ಎನ್ನುತ್ತೇವೆ.
1923 ದೇಶಬಂಧು ಎಂದು ಖ್ಯಾತಿ ಪಡೆದ ಚಿತ್ತರಂಜನ್ ದಾಸ್ ಮತ್ತು ಮೋತಿಲಾಲ್ ನೆಹರು ರವರು ಸೇರಿ "ಸ್ವರಾಜ್" ಪಕ್ಷವನ್ನು ಸ್ಥಾಪಿಸಿದರು
ಆದರೆ 1926 ರಲ್ಲಿ ಚಿತ್ತರಂಜನ್ ದಾಸ್ ರವರ ಮರಣದ ನಂತರ ಇದೂ ಸಹ ಹಂತ್ಯವಾಯಿತು.
ಸೈಮನ್ ಕಮೀಷನ್: 1927 ರಲ್ಲಿ ಸೈಮನ್ ಆಯೋಗ(ಕಮೀಷನ್) ಭಾರತಕ್ಕೆ ಬಂದಾಗ ದೇಶದಾದ್ಯಂತ ವಿರೋಧಿಸಲಾಯಿತು. ಆಗ ನಡೆದ ಪೋಲಿಸರ ಲಾಠಿ ಚಾರ್ಜ್ ನಲ್ಲಿ ತೀವ್ರಗಾಮಿ ನಾಯಕರಲ್ಲೊಬ್ಬರಾದ ಲಾಲ ಲಜಪತ್ ರಾಯರು ಹತ್ಯವಾದರು
ಲಾಹೋರ್ ಕಾಂಗ್ರೇಸ್ಸು: 1929-1930: 1930 ಜನವರಿ 26 ರಂದು ಲಾಹೋರ್ ಅಧಿವೇಷನದಲ್ಲಿ "ಸ್ವರಾಜ್ಯ ಘೋಷಣೆ"ಯಾಯಿತು
ಅಸಹಕಾರ ಚಳುವಳಿ : 1920 ರಿಂದ 1922:: ಮಹಾತ್ಮ ಗಾಂಧೀಜಿಯವರು ಬ್ರಿಟೀಶ್ ಸರ್ಕಾರದ ವಿರುದ್ದ ಅಸಹಕಾರ ಚಳುವಳಿಯನ್ನು ಸಾರಿದ್ದರು ಆದರೆ 1922 ಪೆಬ್ರವರಿ 15 ಉತ್ತರ ಪ್ರದೇಶದ ಗೋರಖ್ ಪುರ ಜಿಲ್ಲೆಯ ಚೌರಿ ಚೌರಾ ಎಂಬ ಗ್ರಾಮದಲ್ಲಿ ಭಾರತೀಯ ಸತ್ಯಾಗ್ರಹಿಗಳು ಪ್ರತಿಭಟನೆಯಲ್ಲಿ ಅಲ್ಲಿನ ಪೋಲೀಸ್ ಠಾಣೆಗೆ ಬೆಂಕಿ ಹಚ್ಚಿದರು ಆಗ ಅದರಲ್ಲು 23 ಜನ ಪೋಲೀಸರು ಸಜೀವ ದಹನ ವಾದರು, ಅಹಿಂಸೆಯ ಮೂಲ ಮಂತ್ರದಿಂದ ಪ್ರತಿಭಟಿಸುತ್ತಿದ್ದ ಮಹಾತ್ಮ ಗಾಂಧೀಜಿಯವರಿಗೆ ಇದರಿಂದ ಬೇಸರವಾಗಿ ಅಸಹಕಾರ ಚಳುವಳಿಯನ್ನು ವಾಪಸ್ಸು ಪಡೆಯಲಾಯಿತು.
ಮಹಾತ್ಮ ಗಾಂಧೀಜಿಯವರು 1917 ರಲ್ಲಿ ಮೊಟ್ಟಮೊದಲ ಭಾರಿಗೆ ಚಂಪಾರಣ್ಯ ಎಂಬ ಸ್ಥಳದಲ್ಲಿ ಸತ್ರ್ಯಾಗ್ರಹದಲ್ಲಿ ಪಾಲ್ಗೊಂಡ್ಡರು
1918 ರಲ್ಲಿ ಗುಜರಾತ್ ನ ಖೇಡದಲ್ಲಿಯೂ ಸಹ ರೈತರ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು
ಕಾನೂನು ಬಾಹಿರ ಚಳುವಳಿ :1930 ರಿಂದ 1934
ಉಪ್ಪಿನ ಸತ್ಯಾಗ್ರಹ
ಮಹಾತ್ಮ ಗಾಂಧೀಜಿಯವರು 1930 ರ ಮಾರ್ಚ್ 12 ರಂದು ಸಬರಮತಿ ಆಶ್ರಮದಿಂದ ದಂಡಿ ಮಾರ್ಗವಾಗಿ ಉಪ್ಪಿನ ಸತ್ಯಾಗ್ರಹ ಕೈಗೊಂಡರು
ಈ ಸತ್ಯಾಗ್ರಹದಲ್ಲಿ 78 ಜನ ಸತ್ಯಾಗ್ರಹಿಗಳಿದ್ದು ಮಹಾತ್ಮ ಗಾಂಧೀಜಿಯವರು ಅತ್ಯಂತ ಹಿರಿಯ ವ್ಯಕ್ತಿಯಾದರೆ
ಕರ್ನಾಟಕದ ಮೈಲಾರ ಮಹದೇವಪ್ಪ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದರು ಆಗ ಅವರ ವಯಸ್ಸು ಕೇವಲ 18
1930 ರ ಏಪ್ರಿಲ್ 30 ರಂದು ದಂಡಿ ತಲುಪಿದ ಸತ್ಯಾಗ್ರಹಿಗಳು ಒಂದು ಇಡಿ ಉಪ್ಪನ್ನು ತಯಾರಿಸಿ ರೂ 1600/- ಕ್ಕೆ ಅದನ್ನು ಹಾರಾಜು ಹಾಕಿ ಅದರ ಹಣವನ್ನು
ತಮ್ಮ ಸತ್ಯಾಗ್ರಹಿಗಳ ಹುಂಡಿಗೆ ಹಾಕಿದರು
ಭಾಗವಹಿಸಿದ ಇತರೆ ಸತ್ಯಾಗ್ರಹಿಗಳು ವಿಜಯ ಲಕ್ಷ್ಮಿ ಪಂಡಿತ್ ( ವಿಶ್ವ ಸಂಸ್ಥೆಯ ಪ್ರಥಮ ಮಹಿಳಾ ಭಾರತದ ಪ್ರತಿನಿಧಿ) , ಸರ್ದಾರ್ ವಲ್ಲಭ ಬಾಯ್ ಪಟೇಲ್ (ಉಕ್ಕಿನ ಮನುಷ್ಯ),
ಮೋತಿಲಾಲ್ ನೆಹರು ರವರ ಪತ್ನಿ ಸ್ವರೂಪ ರಾಣಿ, ಜವಹರಲಾಲ್ ನೆಹರು ( ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ) ಅವರ ಹೆಂಡತಿ ಕಮಲಾದೆವಿ ನೆಹರು,
ಮದನ್ ಗೋಪಾಲ್ ಮಾಳವೀಯಾ, KM ಮುನ್ಷಿ ಮತ್ತು ವಿಟ್ಠಲ ಭಾಯ್ ಪಟೇಲ್
ಕರನಿರಾಕರಣ ಚಳುವಳಿ:
1928 ರಲ್ಲಿ ಗುಜರಾತ್ ನ ಖೇಡ ಮತ್ತು ಬಾರ್ಡೋಲಿಯಲ್ಲಿ ನಡೆಯಿತು ಇದರ ನಾಯಕರು :ಮಹಾತ್ಮ ಗಾಂಧಿಜೀ ಮತ್ತು ಸರ್ದಾರ್ ವಲ್ಲಭ ಭಾಯ್ ಪಟೇಲ್
ಗಾಂಧಿ ಇರ್ವಿನ್ ಒಪ್ಪಂದ:
1931 ರ ಮಾರ್ಚ್ 5 ರಂದು ನಡೆಯಿತು ಇದರ ಮದ್ಯಸ್ಥಿಕೆ ವಹಿಸಿದ್ದವರು ಜಯಕರ್ ಮತ್ತು ಸಪ್ರೂ
ದುಂಡು ಮೇಜಿನ ಸಮ್ಮೇಳನ
ಸಮ್ಮೇಳನ
ಅವಧಿ
ನಡೆದ ಸ್ಥಳ
ಭಾರತದ ಪ್ರತಿನಿಧಿಗಳು
ಉದ್ದೇಶ
ಅಧ್ಯಕ್ಷರು
ರಿಂದ
ರವರಗೆ
ಮೊದಲನೇಯ
16 ನೇ ನವಂಬರ್
1930
19 ನೇ ಜನವರಿ
1931
ಇಂಗ್ಲೇಂಡ್
ಇದರಲ್ಲಿ 89 ಪ್ರತಿನಿಧಿಗಳು ಭಾಗವಹಿಸಿದ್ದರು ಭಾರತದಿಂದ ಡಾ ಬಿ. ಆರ್. ಅಂಬೇಡ್ಕರ್ ಮತ್ತು ಮೈಸೂರು ಸಂಸ್ಥಾನದ ದಿವಾನ ಸರ್ ಮಿರ್ಜಾ ಇಸ್ಮಾಯ್ಲಿ
RYM DONALD
ಎರಡನೇಯದು
7 ನೇ ಸೆಪ್ಟಂಬರ್
1931
1 ನೇ ಡಿಸಂಬರ್ 1931
ಇಂಗ್ಲೆಂಡ್
ಮೊದಲ ಭಾರಿಗೆ ಕಾಂಗ್ರೇಸ್ಸಿನ ಏಕೈಕ ಪ್ರತಿನಿಧಿಯಾಗಿ ಮಹಾತ್ಮ ಗಾಂಧೀಜು ಭಾಗವಹಿಸಿದರು
ಮುಸ್ಲಿಂ ಸಮುದಾಯದ ಪ್ರತಿನಿಧಿ: ಮಹ್ಮದ್ ಇಕ್ಬಾಲ್, ಕೈಗಾರಿಕೋದ್ಯಮದ ಪ್ರತಿನಿಧಿ: ಜಿ.ಡಿ. ಬಿರ್ಲಾ ಹಿಂದುಗಳ ಪರವಾಗಿ ಸರೋಜಿನಿ ದೇವಿ ನಾಯ್ಡು ಮತ್ತು ಮದನ್ ಮೋಹನ್ ಮಾಳವಿಯಾ
RYAM DONALD
3 ನೇಯದು
17 ನೇ ನವಂಬರ್
1932
24 ನೇ ಡಿಸೆಂಬರ್
1932
ಇಂಗ್ಲೆಂಡ್
ಎರಡನೇಯ ಸಮ್ಮೇಳನದಲ್ಲಿ ಮಹ್ಮದ್ ಅಲಿ ಜಿನ್ನ ಮುಸ್ಲಿಂ ಸಮುದಾಯಕ್ಕಾಗಿ ಪ್ರತ್ಯೇಕ ಮತ ಕ್ಷೇತ್ರ ಮತ್ತು ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟರು
ಅದೇ ರೀತಿ ಡಾ. ಬಿ ಅರ್ ಅಂಬೇಡ್ಕರ್ ತಮ್ಮ ನಿಮ್ನ ವರ್ಗದವರಿಗೆ ಪ್ರತ್ಯೇಕ ಮತ ಕ್ಷೇತ್ರ ಮತ್ತು ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟರು
ಇದರಿಂದ ಬೇಸತ್ತ ಮಹಾತ್ಮ ಗಾಂಧೀಜಿರವರು ಬಂದ ದಾರಿಗೆ ಸುಂಕವಿಲ್ಲ ಅಂತ ಮರಳಿ ಭಾರತಕ್ಕೆ ಬಂದರು ಮತ್ತು ಮಹಾರಷ್ಟ್ರದ
ಪೂನಾದಲ್ಲಿನ ಎರವಾಡ ಜೈಲ್ ನಲ್ಲಿ ಇದನ್ನು ವಿರೋದಿಸಿ ಉಪವಾಸ ಸತ್ಯಾಗ್ರಹ ಕೈಗೊಂಡರು, ಅದಕ್ಕಾಗಿ ಪ್ರಮುಖ ನಾಯಕರಗಳು
ಡಾ,ಅಂಬೇಡ್ಕರ್ ರವರ ಮನವೊಲಿಸಿ ತಮ್ಮ ನಿರ್ದಾರವನ್ನು ಕೈ ಬಿಡಲು ಕೇಳೀಕೊಂಡ ನಂತರ ದಿನಾಂಕ 24ನೇಯ ಸೆಪ್ಟಂಬರ್ 1932
ರಲ್ಲಿ ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್ ರವರ ನಡುವೆ ಪೂನಾ ಒಪ್ಪಂದವಾಯಿತು.
ಕ್ಲಿಪ್ತ್ ಆಯೋಗ:
1942 ರಲ್ಲಿ ನಡೆಯಿತು
ಚಲೇಜಾವ್ ಚಳುವಳಿ:
1942 ರಲ್ಲಿ ನಡೆಯಿತು ಆಗ ಗಾಂಧೀಜಿಯವರು ಭಾರತದ ಜನತೆಗೆ ಮಾಡು ಇಲ್ಲವೇ ಮಡಿ ( DO OR DIE) ಎಂದು ಸಂದೇಶ ಕೊಟ್ಟರು
ಈ ಚಳುವಳಿಯ ನಾಯಕರು ಜಯಪ್ರಕಾಶ್ ನಾರಾಯಣ್
ಮೌಂಟ್ ಬ್ಯಾಟನ್ ಆಯೋಗ:
ಇವರು ಸ್ವಂತಂತ್ರ ಭಾರತದ ಮೊದಲ ಗೌರ್ನರ್ ಜನರಲ್, ಭಾರತ ಮತ್ತು ಪಾಕಿಸ್ತಾನದ ವಿಭಜನೆಗೊಳಿಸಿದ ಗೌರ್ನರ್
ಸ್ವತಂತ್ರ ಭಾರತದ ಮೊದಲ ಭಾರತೀಯ ಗೌರ್ನರ್ ಜನರಲ್ ಸಿ. ರಾಜಗೋಪಾಲ ಚಾರಿ
ಬಂಗಾಳದ ಮೊದಲ ಗೌರ್ನರ್ - ರಾಬರ್ಟ್ ಕ್ಲೈವ್ 1757 ರಿಂದ 1760
ಬಂಗಾಳದ ಕೊನೆಯ ಗೌರ್ನರ್ - ವಾರ್ನ್ ಹೇಸ್ಟಿಂಗ್ಸ್ 1772 ರಿಂದ 1774
ಬಂಗಾಳದ ಮೊದಲ ಗೌರ್ನರ್ ಜನರಲ್ - ವಾರನ್ ಹೇಸ್ಟಿಂಗ್ಸ್ 1774 ರಿಂದ 1785
ಬಂಗಾಳದ ಕೊನೆಯ ಗೌರ್ನರ್ ಜನರಲ್ - ಲಾರ್ಡ್ ವಿಲಿಯಂ ಬೆಂಟಿಂಗ್ 1823 ರಿಂದ 1833
(ಇವರ ಕಾಲದಲ್ಲಿ ಭಾರತದಲ್ಲಿ ಭಾಲಗಂಗಾಧರ್ ತಿಲಕ್ ರಿಂದ ಸತಿ ಸಹಗಮನ ಪದ್ಧತಿ ನಿರ್ಮೂಲವಾಯಿತು)
ಭಾರತದ ಮೊದಲ ಗೌರ್ನರ್ ಜನರಲ್ - ಲಾರ್ಡ್ ವಿಲಿಯಂ ಬೆಂಟಿಂಗ್ 1833 ರಿಂದ 1835
ಭಾರತದ ಕೊನೆಯ ಗೌರ್ನರ್ ಜನರಲ್ - ಲಾರ್ಡ್ ಕ್ಯಾನಿಂಗ್ 1856 ರಿಂದ 1858
ಭಾರತದ ಮೊದಲ ವೈಸರಾಯ್ - ಲಾರ್ಡ್ ಕ್ಯಾನಿಂಗ್ - 1858 ರಿಂದ 1862
ಭಾರತದ ಕೊನೆಯ ವೈಸರಾಯ್ - ಲಾರ್ಡ್ ಮೌಂಟ್ ಬ್ಯಾಟನ್ ಇವರು ಬ್ರಿಟೀಶ್ ಸಾಮ್ರಾಜ್ಯದ ಕೊನೆಯ ಮತ್ತು
ಸ್ವತಂತ್ರ ಭಾರತದ ಮೊದಲ ವಿದೇಶಿ ಗೌರ್ನರ್ ಜನರಲ್
2ನೇಯ ಮಹಾಯುದ್ದದ ಸಂದರ್ಭದಲ್ಲಿ ಜಪಾನಿನಲಿ ಕೆಳಕಂಡ ಸ್ಥಳಗಳಲ್ಲಿ ಬಾಂಬ್ ಹಾಕಲಾಯಿತು
1945 ಆಗಸ್ಟ್ 6 ರಂದು ಹಿರೋಶಿಮಾ
1945 ಆಗಸ್ಟ್ 9 ರಂದು ನಾಗಸಾಕಿ
ಬಾಂಬ್ ಹೆಸರು : ಲಿಟ್ಲ್ ಬಾಯ್ ( littl boy)
1882 ರಲ್ಲಿ ವಿಶ್ವದಲ್ಲಿ ಪ್ರಪ್ರಥಮವಾಗಿ ಮೇಡಂ ಬ್ಲವಾಟಿ ಮತ್ತು ಕರ್ನಲ್ ಓಲ್ಕಾಟ್
ಥಿಯೋಸಾಪಿಕಲ್ ಸೊಸೈಟಿ ಸ್ಥಾಪಿಸಿದರು ( ಕನ್ನಡದಲ್ಲಿ ದಿವ್ಯಾ ಸಭಾ)
ಖಾಯಂ ಜಮೀನ್ದಾರಿ ಪದ್ಧತಿ:
1793 ರ ಮಾರ್ಚ್ 22 ರಂದು ಕಾರ್ನ್ವಾಲೀಸ್ ಬಂಗಾಳದಲ್ಲಿ ಸ್ಥಾಪಿಸಿದನು
ರೈತವಾರಿ ಪದ್ಧತಿ:
1820 ರಲ್ಲಿ ಮೊದಲು ಮದ್ರಾಸಿನಲ್ಲಿ ಮತ್ತು ನಂತರ ಮುಂಬೈ ನಲ್ಲಿ
ಥಾಮಸ್ ಮನ್ರೋ ಸ್ಥಾಪಿಸಿದ
ಕ್ರಾಂತಿ ಕಾರಿಗಳು:
ವಾಸುದೇವ ಬಲವಂತ್ ಫಡ್ಕೆ:
ಇವನು ಕ್ರಾಂತಿಯುಗದ ಪ್ರವರ್ತಕ ಎನ್ನುತ್ತಾರೆ, ಇವನು ಪೂನಾದಲ್ಲಿ ಜನಿಸಿದ
ವಿ ಡಿ ಸಾವರ್ಕರ್:
ಪೂರ್ಣ ಹೆಸರು ವಿನಾಯಕ ದಾಮದೋರ ಸಾವರ್ಕರ್
ಜನನ: ಮಹಾರಷ್ಟ್ರದಲ್ಲಿ
1857 ರ ದಂಗೆಯನ್ನು ಪ್ರಥಮ ಸ್ವಾತಂತ್ರ ಸಂಗ್ರಾಮ ಎಂದು ಕರೆದನು
1904 ರಲ್ಲಿ ಲಂಡನ್ ನಲ್ಲಿ ಅಭಿನವ ಭಾರತ ಎಂಬ ಗುಪ್ತ ಸಂಘವನ್ನು ಸ್ಥಾಪಿಸಿದನು
ಇನ್ಕ್ವಿಲಾಬ್ ಪತ್ರಿಕೆಯನ್ನು ಮೊದಲಿಗೆ ಹೊರಡಿಸಿದನು
ಮ್ಯಾಜಿನಿ ಎಂಬ ಪುಸ್ತಕವನ್ನು ಬರೆದು ಕ್ರಾಂತಿಕಾರಿಗೆಳಿಗೆ ಹಂಚಿದನು
ಕ್ರಾಂತಿಕಾರಿಗಳಲ್ಲಿ ಅತಿ ಹೆಚ್ಚು (ದೀರ್ಘ) ಕಾಲ ಜೈಲು ಶಿಕ್ಷೆ ಅನುಭವಿಸಿದವರಲ್ಲಿ ಇವರೇ ಮೊದಲಿಗರು
ಮದನ್ ಲಾಲ್ ಧಿಂಗ್ರಾ:
1909 ರಲ್ಲಿ ಕರ್ಜನ್ ಮೈಲ್ ಎಂಬುವವರನ್ನು ಗುಂಡಿಟ್ಟು ಕೊಂದರು
1909 ಅಗಸ್ಟ್ 17 ರಂದು ಗಲ್ಲುಗೇರಿಸಲಾಯಿತು
ಚಾಪೆಕರ್ ಸಹೋದರರು:
1897 ರ ಜನವರಿ 22 ರಂದು ಬಂಗಾಳದ ಪ್ಲೇಗ್ ಅಧಿಕಾರಿಯನ್ನು ಗುಂಡಿಟ್ಟೂ ಕೊಂದರು
ಇವರಿಗೂ ಗಲ್ಲು ಶಿಕ್ಷೆ ವಿಧಿಸಲಾಯಿತು
ಬರೀಂದ್ರ ಕುಮಾರ್ ಘೊಷ್:
ಯುಗಾಂತರ ಪತ್ರಿಕೆ ಮತ್ತು ಭವಾನಿ ಮಂದಿರ ಪುಸ್ತಕವನ್ನು ಪ್ರಕಟಿಸಿದರು
ರಾಶ್ ಬಿಹಾರಿ ಬೋಸ್:
1912 ಡಿಸೆಂಬರ್ 23 ವೈಸ್ ರಾಯ್ ಲಾರ್ಡ್ ಹಾರ್ಡಿಂಜ್ ರ ಮೇಲೆ ಬಾಂಬ್ ದಾಳಿ
1942 ರಲ್ಲಿ ಬ್ಯಾಂಕಾಕ್ ನಲ್ಲಿ ಇಂಡಿಯಾ ಇಂಡಿಪೆಂಡೆಂಟ್ ಸ್ಥಾಪನೆ
ಲಾಲ್ ಹರ್ ದಯಾಳ್;
ಪಂಜಾಬಿನ ಕ್ರಾಂತಿಕಾರಿ , ಹರ್ದ್ ಚಳುವಳಿಯ ಸ್ಥಾಪಕ
1911 ರಲ್ಲಿ ಹರ್ದ್ ಪತ್ರಿಕೆಯ ಸ್ಥಾಪನೆ ಮತ್ತು ಪ್ರಕಟನೆ
ರಾಂ ವಿನಾಬ್ ಬಿಸ್ಮಿಲ್ಲಾ:
ಶಹಾ ಪುರದ ಕ್ರಾಂತಿಕಾರಿ ಮತ್ತು ಕಾಕೋರಿ (1925 ರಲ್ಲಿ ಲಕ್ನೋ ರೈಲನ್ನು ಸರಪಲಿ ಎಳೆದು ನಿಲಿಸಿದ)ಪ್ರಕರಣದ ರುವಾರಿ
ಅಝಾದ್ ಚಂದ್ರಶೇಖರ್:
1912ಡಿಸೆಂಬರ್ 26 ರಂದು ಬ್ರೀಟೀಶ್ ರ ವಿರುದ್ದ ದ ದಂಗೆಯಲ್ಲಿ ಬ್ರೀಟೀಶ್ ಅಧಿಕಾರಿ ಮೇಲೆ ಕಲ್ಲೆಸೆದರು
ಹಿಂದುಸ್ಥಾನ್ ಸೋಸಿಯಲಿಸ್ಟ್ ರಿಪಬ್ಲಿಕ್ ಸಂಘದ ಸದಸ್ಯ
ಲಾಲಲಜಪತ್ ರಾಯ್:
1928 ರಲ್ಲಿ ಕಾನ್ಫುರದಲ್ಲಿ ಹಿಂದುಸ್ಥಾನ್ ರಿಪಬ್ಲಿಕ ಅಸೋಸಿಯೇಷನ್ ಸ್ಥಾಪನೆ
ಭಗತ್ ಸಿಂಗ್ :
ಪಂಜಾಬ್ ನ ಪುರುಷ ಸಿಂಹ ಮತ್ತು ಕ್ರಾಂತಿ ಕಾರಿ ಕಿಡಿ
ನವಜಾತ ಭಾರತ ಸಭಾದ ಸ್ಥಾಪಕ
1928 ಡಿಸೆಂಬರ್ 17 ರಮ್ದು ಸ್ಯಾಂಡರ್ ನನ್ನು ಗುಂಡಿಟ್ಟು ಕೊಂದನು
ಇನ್ಕ್ವಿಲಾಬ್ ಜಿಂದಾಬಾದ್ ( ಕ್ರಾಂರಿ ಚಿರಾಯುವಾಗಲಿ ) ಎಂದು ಘೋಷಣೆ ಮಾಡಿದನು
1931 ಮಾರ್ಚ್ 31 ರಂದು ರಾಜ್ ಗುರು ರವರ ಜೊತೆ ಇವರನ್ನು ಲಹೋರ್ ನಲ್ಲಿ ಗಲ್ಲಿಗೇರಿಸಲಾಯಿತು
ಸುಭಾಷ್ ಚಂದ್ರ ಬೋಸ್ :
ಕ್ರಾಂತಿಕರಿಗಳಲ್ಲಿ ಶ್ರೇಷ್ಠರು ಮತ್ತು " ನೇತಾಜಿ"
1897 ರಲ್ಲಿ ಒರಿಸ್ಸಾದ ಕಟಕ್ ನಲ್ಲಿ ಜನನ
ತಂದೆ: ಜಾನಕಿನಾಥ ಬೋಸ್
ತಾಯಿ: ಪ್ರಭಾವತಿ
INA ( Indian National Army) ಸ್ಥಾಪಕರು
1943 ರಲ್ಲಿ ಸಿಂಗಪುರದಲ್ಲಿ ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರದ ಸ್ಥಾಪಕದು
1938 ರ ಹರಿಪುರ ಮತ್ತು 1939ರ ಪ್ರಥಮ ಕಾಂಗ್ರೇಸ್ ಅಧ್ಯಕ್ಷರು
ಘೋಷಣೆ: ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವತಂತ್ರ ಕೊಡುತ್ತೇನೆ
1992 ರಲ್ಲಿ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲಾಯಿತು

Sunday, April 24, 2011

ಶಿರಡಿ, ಸತ್ಯ ನಂತರ ಪ್ರೇಮ ಸಾಯಿಬಾಬಾ

ಸಾಯಿಬಾಬಾ


ಸತ್ಯ ಸಾಯಿಬಾಬ ಯುಗ ಇಂದಿಗೆ(ಏ.24,2011) ಅಂತ್ಯಗೊಂಡಿದೆ. ಸಾಯಿಬಾಬಾ ಅವರ ಸಾಮಾಜಿಕ ಸೇವೆಗೆ ಇಡೀ ವಿಶ್ವವೇ ತಲೆದೂಗಿದೆ. ಜಗತ್ತಿನಾದ್ಯಂತ ಇರುವ ಸುಮಾರು 6 ಮಿಲಿಯನ್ ಗೂ ಅಧಿಕ ಭಕ್ತಾದಿಗಳಿಗೆ ಬಾಬಾರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಆದರೆ, ಬಾಬಾಗೆ ಸಾವಿಲ್ಲ. ಆತ್ಮ ಅವಿನಾಶಿ, ಬಾಬಾ ಯೋಗ ನಿದ್ರೆಯಲ್ಲಿದ್ದಾರೆ. 96ನೇ ಹುಟ್ಟುಹಬ್ಬದ ದಿನದಂದು ಪುನಃ ದರ್ಶನ ನೀಡುತ್ತಾರೆ. ಸಾಯಿಬಾಬಾ ಅವತಾರ ಮುಗಿದಿಲ್ಲ ಮತ್ತೆ ಆರಂಭವಾಗುತ್ತದೆ. ಪ್ರೇಮ ಸಾಯಿಯಾಗಿ ಗೋಚರಿಸಲಿದ್ದಾರೆ ಎಂಬ ನಂಬಿಕೆ ಬಲವಾಗಿ ಭಕ್ತರ ಮನಸಲ್ಲಿ ಬೇರೂರಿದೆ.


96 ವಸಂತಗಳನ್ನು ಕಳೆದ ನಂತರ ಇಹಲೋಕ ತ್ಯಜಿಸುತ್ತೇನೆ. ನಂತರ ಕರ್ನಾಟಕದ ಮಂಡ್ಯಜಿಲ್ಲೆಯ ಗುಣಪರ್ತಿಯಲ್ಲಿ ಪ್ರೇಮ ಸಾಯಿಯಾಗಿ ನಿಮ್ಮ ಮುಂದೆ ಬರುತ್ತೇನೆ. 2023ರ ತನಕ ನನಗಾಗಿ ಕಾಯುತ್ತಿರಿ ಎಂದು ಸ್ವತಃ ಸಾಯಿಬಾಬಾ ಒಮ್ಮೆ ಹೇಳಿದ್ದರು.


ಬಾಬಾ ಇಚ್ಛಾಮರಣಿಯೇ?: ಹೌದು ಎನ್ನುತ್ತದೆ ಭಕ್ತ ಸಮೂಹ. ನನಗೆ ಬೇಕೆನಿಸಿದಾಗ ಈ ದೇಹ ತ್ಯಾಗ ಮಾಡುತ್ತೇನೆ. ಆದರೂ 96 ವರ್ಷ ಯಾವುದೇ ಮಾರಣಾಂತಿಕ ಕಾಯಿಲೆ ನನ್ನನ್ನು ಬಾಧಿಸದು, 96 ವರ್ಷ ನಿಮ್ಮೊಡನಿರುತ್ತೇನೆ ಎಂದಿದ್ದರು ಆದರೆ, 86 ವರ್ಷಕ್ಕೆ ಅವತಾರ ಮುಗಿಸಿರುವುದು ಸ್ವಲ್ಪ ಗೊಂದಲ ಉಂಟಾಗಿದೆ. ಮಾನವರನ್ನು ಬಾಧಿಸುವ ಕಾಯಿಲೆಯನ್ನು ತಮ್ಮ ದೇಹದಲ್ಲಿ ಆವರಿಸಿಕೊಂಡು ಬಾಬಾ ಯೋಗ ನಿದ್ರೆಗೆ ತೆರಳಿದ್ದಾರೆ. ಅವರೇ ಹೇಳಿದಂತೆ ಆತ್ಮಕ್ಕೆ ಸಾವಿಲ್ಲ. ಬಾಬಾ ಭಕ್ತರನ್ನು ಕೈಬಿಡುವುದಿಲ್ಲ. ಮತ್ತೆ ಅವತರಿಸುತ್ತಾರೆ ಎಂದು ಭಕ್ತರು ನಂಬಿದ್ದಾರೆ.


ಮಂಡ್ಯ ಕಡೆ ಎಲ್ಲರ ಕಣ್ಣು: ಮಂಡ್ಯದ ಪುಟ್ಟ ಗ್ರಾಮ ಗುಣಪರ್ತಿ ಮೇಲೆ ಎಲ್ಲರ ಕುತೂಹಲದ ನೋಟ ನೆಟ್ಟಿದೆ. ಶಿರಡಿ ಸಾಯಿಬಾಬಾ ಪರಂಪರೆಯ ಕೊನೆಯ ಅವತಾರವಾದ ಪ್ರೇಮ ಸಾಯಿಬಾಬಾ 2023ರ ಹೊತ್ತಿಗೆ ಪ್ರಕಟವಾಗುತ್ತೇನೆ ಎಂದು ಬಾಬಾ ಹೇಳಿದ್ದರು. ಪ್ರೇಮ ಸಾಯಿಬಾಬಾರ ತಾಯಿಯಾಗಿ ಕಸ್ತೂರಿ ಎಂಬ ಹೆಣ್ಣು ಮಗಳು ಕಾಣಿಸಿಕೊಳ್ಳಲಿದ್ದಾರೆ ಎಂದು 2008ರಲ್ಲಿ ಬಾಬಾ ಅಶ್ರಮದಿಂದ ಸುದ್ದಿ ಹೊರ ಬಿದ್ದಿತ್ತು. ಜಾನ್ ಹಿಸ್ಲಾಪ್ ಎಂಬ ಸಾಯಿಬಾಬಾ ಭಕ್ತ ಪ್ರೇಮ ಸಾಯಿಬಾಬಾ ಚಿತ್ರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದರು.


ಬಾಬಾರ ಪವಾಡಗಳನ್ನು ನಂಬುವ ಭಕ್ತರಿಗೆ, ಅವರ ಸಾಮಾಜಿಕ ಸೇವೆಯನ್ನು ಮೆಚ್ಚುವ ಜನರಿಗೆ, ಮಾನಸಿಕ ಬೆಂಬಲ ಲಾಭ ಪಡೆಯುತ್ತಿದ್ದ ಕ್ರಿಕೆಟ್ಟಿಗರಿಗೆ, ಆಧುನಿಕ ಭಗೀರಥನಂತೆ ಕಂಡ ಬರದ ನಾಡಿನ ಜನರಿಗೆ, ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಬಾಬಾ ಎಂಬ ವಿಸ್ಮಯ ಜೀವ ಎಂದಿಗೂ ಶಾಶ್ವತ.

Thursday, March 17, 2011

ಕನ್ನಡ ವ್ಯಾಕರಣ

ಕನ್ನಡ
ಪಠ್ಯ ಕ್ರಮ
1. ವ್ಯಾಕರಣ
2. ಛಂದಸ್ಸು
3 ಅಲಂಕಾರ
4. ಸಾಹಿತ್ಯ ಚರಿತ್ರೆ
I. ವ್ಯಾಕರಣ
ಭಾಷೆಯ ಸ್ವರೂಪ ಜ್ನಾನ ಅರ್ಥಗಳಲ್ಲದೆ ಉಚ್ಛಾರ ಶೃತಿಗಳನ್ನು ವ್ಯವಸ್ಥಿತವಾಗಿ ನಿಯಮಗಳ
ಮೂಲಕ ತಿಳೀಸುವುದೇ ವ್ಯಾಕರಣ ಶಾಸ್ತ
ವ್ಯಾಕರಣದ ಬಗ್ಗೆ ತಿಳಿಸುವುವರು ವೈಯಾಕರಣಿಗಳು
II ಛಂದಸ್ಸು
ಕಾವ್ಯರಚನೆ ಸೌಂಧರ್ಯ ಸೊಭಗತೆಯನ್ನು ಸೂತ್ರ ರೊಪದಲ್ಲಿ ಪರಿಚಯಿಸುದೇ ಛಂದಸ್ಸು ಶಾಸ್ತ್ರ
II. ಅಲಂಕಾರಗಳು
ಕಾವ್ಯದೇವಿಯನ್ನು ಶಬ್ಧ ಅರ್ಥಗಳ ಉಡುಗೆತೊಡಿಗೆಗಳಿಂದ ಶೋಭಿಸುವಂತೆ
ಅಲಂಕರಿಸುವುದೇ ಅಲಂಕಾರ ಶಾಸ್ತ್ರ
ಮೇಲಿನ ಮೂರು ಪ್ರಕರಣ ಅಂದರೆ ವ್ಯಾಕರಣ, ಛಂದಸ್ಸು ಮತ್ತು
ಅಲಂಕಾರಗಳನ್ನೊಳಗೊಂಡ ಗ್ರಂಥಕ್ಕೆ ಲಕ್ಷಣ ಗ್ರಂಥ ಎನ್ನುವರು.
ಮೊಟ್ಟ ಮೊದಲಿಗೆ ಹಳಗನ್ನಡದಲ್ಲಿ ವ್ಯಾಕರಣದ ಬಗ್ಗೆ ಹೇಳಿದವನು
1. 2ನೇ ನಾಗವರ್ಮ ಅಥವಾ ಇಮ್ಮಡಿ ನಾಗವರ್ಮ
ಕಾಲ: 11ನೇ ಶತಮಾನ
ಕೃತಿಗಳು
1. ಕರ್ನಾಟಕ ಭಾಷಾ ಭೂಷಣ
2. ಕಾವ್ಯಾವಲೋಕನ
3. ವರ್ಧಮಾನ ಪುರಾಣ
4. ಅಭಿದಾನ ವಸ್ತು ಕೋಶ
5. ಛಂದೋ ವಿಚಿತಿ
2. ಕನ್ನಡ ಶ್ರೇಷ್ಠ ವೈಯಾಕರಣಿ ಮತ್ತು ಶ್ರೇಷ್ಠ ಗ್ರಂಥ
ಕೇಶಿ ರಾಜ
ಕಾಲ: 13 ನೇ ಶತಮಾನ (1260)
ಶ್ರೇಷ್ಠ ಕೃತಿ: ಶಬ್ಧಮಣಿದರ್ಪಣ ಇದರಲ್ಲಿ 8 ಭಾಗಗಳಿವೆ
3. ಭಟ್ಟಾಕಳಂಕಾ
ಕಾಲ: 16 ಮತ್ತು 17 ನೆ ಶತಮಾನ
ಕೃತಿ : ಶಬ್ಢ ಅನುಶಾಸನ. ಇದು ಸಂಸ್ಕೃತದಲ್ಲಿದೆ
ಪ್ರಸ್ತುತ ಕನ್ನಡ ವರ್ಣಮಾಲೆ 49
ಸ್ವರಗಳು
ಕನ್ನಡದಲ್ಲಿ ಒಟ್ಟು ಸ್ವರಗಳು 13 ಇದರಲ್ಲಿ 3 ವಿಧಗಳು
1. ಹ್ರಸ್ವ ಸ್ವರ: ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳು ,
ಉದಾ: ಅ ಇ ಉ ಋ ಎ ಒ ( ಒಟ್ಟು 6)
2. ದೀರ್ಘಸ್ವರ: ಎರಡು ಮಾತ್ರೆ ಕಾಲದಲ್ಲು ಉಚ್ಛರಿಸಲ್ಪಡುವ ಅಕ್ಷರಗಳು
ಉದಾ: ಆ ಈ ಊ ಏ ಐ ಓ ಔ (ಒಟ್ಟು 7)
3. ಪ್ಲುತ ಸ್ವರ : ಮೂರು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳು,
ಇದಕ್ಕೆ ಕನ್ನಡದಲ್ಲಿ ಪದಗಳಿಲ್ಲ ಅಂಗ್ಲಭಾಷೆಯ "S" ಅಕ್ಷರದಿಂದ ಗುರಿತಿಸಲ್ಪಡುತ್ತದೆ
ಉದಾ: ಆಣ್ಣಾs ತಮ್ಮಾs ಗೆಳೆಯಾs, ಗುರುಗಳೇs
ವ್ಯಂಜನಗಳು
ಕನ್ನಡದಲ್ಲಿ ವ್ಯಂಜನಗಳು ಒಟ್ಟು 34 ಇದರಲ್ಲಿ 2 ವಿಧಗಳು
1. ವರ್ಗೀಯ ವ್ಯಂಜನಗಳು ಒಟ್ಟು 25 ವರ್ಣಮಾಲೆಯ ಅಕ್ಷರಗಳು ಕ ಯಿಂದ ಮ ವರಗೆ
2. ಅವರ್ಗೀಯ ವ್ಯಂಜನಗಳು ಒಟ್ಟು 9 ಉದಾ: ಯ ರ ಲ ವ ಶ ಷ ಸ ಹ ಳ
ಅನುನಾಸಿಕಗಳು
ಮೂಗಿನ ಸಹಾಯದಿಂದ ಉಚ್ಛರಿಸಲ್ಪಡುವ ವರ್ಣಮಾಲೆಯ 5 ನೇ ಅಕ್ಶರಗಳು
ಯೋಗವಾಹಕಗಳು: ಸ್ವರಗಳೊಂದಿಗೆ ಸಂಬಂಧಹೊಂದಿ ಉಚ್ಛರಿಸಲ್ಪಡುವ ಅಕ್ಷರಗಳು
( ಯೋಗ = ಸಂಬಂಧ, ಮತ್ತು ವಾಹ= ಹೊಂದಿದ)
ಇವುಗಳನ್ನು ಅನುಸ್ವರ (೦) ಮತ್ತು ವಿಸರ್ಗ (ಃ) ಎನ್ನುತ್ತಾರೆ
ಗುಣಿತಾಕ್ಷರಗಳು
ಸ್ವರವನ್ನು ಪಡೆದು ಪೂರ್ಣವಾಗುವ ಅಕ್ಷರಕ್ಕೆ ಗುಣಿತಾಕ್ಷರ ಅಥವಾ ಕಾಗುಣಿತ ಎನ್ನುತ್ತಾರೆ
ಉದಾ: ಕ್+ಅ=ಕ, ಕ್+ಆ=ಕಾ, ಕ್+ಇ=ಕಿ, ಕ್+ಈ=ಕೀ
ಉ, ಊ ಮತ್ತು ಒ, ಓ ಸ್ವರ ಚಿಹ್ನೆಗಳು "ವ" ಕಾರಕ್ಕೆ ಮಾತ್ರ ಕೆಳಗಿನಿಂದ ಸೇರಿಸಲ್ಪಡುತ್ತದೆ.
ಉಳಿದೆಲ್ಲವುಗಳಿಗೆ ಮುಂದಿನಿಂದ ಸೇರಿಸಲ್ಪಡುತ್ತದೆ.
ಕಾಗುಣಿತಾಕ್ಷರವನು ವಿಭಜಿಸುವುದೆ
ಉದಾ: ಭಾರತ = ಬ್+ಆ+ರ್+ಅ+ತ್+ಅ
ಕಾವೇರಿ: ಕ್+ಆ+ವ್+ಏ+ರ್+ಇ\
ರೇಡಿಯೋ: ರ್+ಏ+ಡ್+ಇ+ಯ್+ಓ
ಜೊಕಾಲಿ: ಜ್+ಓ+ಕ್+ಆ+ಲ್+ಇ
ಮೈಸೂರು: ಮ್+ಐ+ಸ್+ಊ+ರ್
ಹೃದಯ: ಹ್+ಋ+ದ್=ಅ+ಯ್=ಅ
ಕಂಬ: ಕ್+ಂ+ಬ್+ಅ
ಅಂತಃಕರಣ: ಅ+ಂ+ತ್+ಅ+ಃ+ಕ್+ಅ+ರ್+ಅ+ಣ್+ಅ
ಆಜ್ನೆ : ಆ+ಜ್ನ್+ಏ
ರಾಷ್ಟ್ರ: ರ್+ಆ+ಷ್+ಟ್+ರ್+ಆ
ಸ್ತ್ರೀ: ಸ್+ತ್+ರ್+ಈ
ಸಂಯುಕ್ತಾಕ್ಷರಗಳು (ದ್ವಿತ್ವ)
ಎರಡು ಅಥವಾ ಅದಕಿಂತ ಹೆಚ್ಚು ಸ್ವರವನ್ನು ಪಡೆದುಕೊಳ್ಳುವುದು
ಉದಾ: ಪುಸ್ತಕ. ಹೊತ್ತಿಗೆ, ಪೆನ್ನು. ಅಪ್ಪ. ಅಮ್ಮ. ಅತ್ತೆ ಇತ್ಯಾದಿ
ಇದರಲ್ಲಿ ಎರಡು ವಿಧ ಸಜಾತಿ ಮತ್ತು ವಿಜಾತಿ ಸಂಯುಕ್ತಾಕ್ಷರಗಳು
ಒಂದೇ ಜಾತಿಯ ಎರಡು ವ್ಯಂಜನಗಳು ಸ್ವರವನ್ನು ಪಡೆದುಕೊಳ್ಳುವುದು:
ಉದಾ: ಅಕ್ಕ, ಅಮ್ಮ. ಅತ್ತೆ. ಕತ್ತೆ, ಹುಗ್ಗು, ಅನ್ನ ಇತ್ಯಾಧಿ
ಬೇರೆ ಬೇರೆ ಜಾತಿಯ ವ್ಯೆಂಜನಗಳು ಸ್ವರವೊಂದ್ದನ್ನು ಪಡೆದುಕೊಳ್ಳುವುದು:
ಉದಾ: ಅಗ್ನಿ, ಸ್ನೇಹ, ವಿನ್ಯಾಸ, ಸನ್ಯಾಸಿ, ಇತ್ಯಾದಿ
ಉಚ್ಚಾರಣೆಯು ಮಹಾಪ್ರಾಣದಂತೆ ಉಚ್ಛಾರವಾದರೆ ಅದರ ಅಲ್ಪಪ್ರಾಣಕ್ಕೆ
ಮಾತ್ರ ಮಹಪ್ರಾಣದ ವ್ಯಂಜನವನ್ನೇ ಒತ್ತಕ್ಷರಾವಾಗಿ ಬರಬೇಕು
ಉದಾ:
ಶುದ್ಧ ಅಶುದ್ಧ
ವಿಟ್ಠಲ ವಿಠ್ಠಲ
ಅಶ್ವತ್ಥಾಮ ಅಶ್ವಥಾಮ
ಮುಟ್ಠಾಳ ಮುಟ್ಟಾಳ
ನಿರ್ಧಿಷ್ಟ ಅರ್ಥವನ್ನು ಕೊಡುವ ಪದಗಳ ಸಮೂಹ
ನಾಮ ಪದ ( ನಾಮ ಪ್ರಕೃತಿ): ಭಾಷೆಯಲ್ಲಿನ ಬಗೆ ಬಗೆಯ ಹೆಸರುಗಳನ್ನು
ತಿಳಿಸುವುದೇ ನಾಮ ಪದ(ಪ್ರಕೃತಿ) ಉದಾ: ರಾಮ, ಸೀತೆ, ಗಿಡ ಮರ, ಇತ್ಯಾದಿ
ಇದರಲ್ಲಿ 2 ವಿಧ
ಸಹಜ ನಾಮಪದ: ಮೂಲದಿಂದಲೂ ಸಹಜವಾಗಿ ಬಳಕೆಯಾಗುವ ಪದಗಳು
ಉದಾ: ರಾಮ, ಸೀತೆ, ಗಿಡ, ಮರ, ಶಾಲೆ ಇತ್ಯಾದಿ
ಸಾಧಿತ ನಾಮಪದ: ಒಂದು ನಾಮಪದವು ತಧ್ಧಿತ ಪ್ರತ್ಯಯೇ ಪಡೆದು ಇನ್ನೊಂದನ್ನು
ಪಡೆದುಕೊಳ್ಳುವುದು, ಅಥವಾ 2ಅಥವಾ 2 ಕಿಂತ ಹೆಚ್ಚುನಾಮ್ಪಪದಗಳು ಸೇರಿ ಒಂದೆ ಪದ
ಸಿದ್ಧಗೊಳ್ಳುವುದು ಅಥವಾ ಧಾತು ಅಥವಾ ಕ್ರಿಯಾ ಪ್ರತೇಯವನ್ನು ಪಡೆದು ಪದ ಸಿದ್ಧಗೊಂಡರೆ
ಅದಕ್ಕೆ ಸಾಧಿತ ನಾಮ ಪದ ಎನ್ನುವರು
ಉದಾ: ಮಾಲೆ+ಗಾರ= ಮಾಲೆಗಾರ
ಕನಸು + ಇದ್ದರೆ; ಕನಸುಗಾರ
ಹೃದಯ+ವಂತ+ ಹೃದಯವಂತ
----------------------------------------------------------------------
ವಿಭಕ್ತಿ ಪ್ರತ್ಯೇಯಗಳು
1.ಪ್ರಥಮ ಉ ರಾಮನು(ಉ)
2 ದ್ವಿತೀಯ ಅನ್ನು ರಾಮನನ್ನು(ಅನ್ನು)
3 ತೃತೀಯಾ ಇಂದ ರಾಮನಿಂದ(ಇಂದ
4.ಚತುರ್ಥಿ ಗೆ ರಾಮನಿಗೆ(ಗೆ)
5 ಪಂಚಮಿ ದೆಸೆಯಿಂದ (ರಾಮನ ದೆಸೆಯಿಂದ)
6 ಷಷ್ಥಿ ಅ ರಾಮನ(ಅ)
7 ಸಪ್ತಮಿ ಅಲ್ಲಿ ರಾಮನಲ್ಲಿ(ಅಲ್ಲಿ)
8 ಅಷ್ಟಮಿ ಓ ಓ ರಾಮ(ಓ)
-------------------------------------------------------------------------
ನಾಮಪದಗಳಲ್ಲಿ 4 ವಿಧ ಇವುಗಳನ್ನು ಅವುಗಳ ಸ್ಬರೂಪದ ಹಿನ್ನೆಲೆಯಲ್ಲಿ ವಿಂಗಡಿಸಲಾಗಿದೆ.
I ವಸ್ತು ವಾಚಕ ನಾಮಪದ: ವಸ್ತು ಹೆಸರುಗಳನ್ನು ತಿಳಿಸುವ ಶಬ್ದಗಳು:
ಉದಾ: ರಾಮ..ಸೀತೆ, ಗುಡ್ದ, ಬೆಟ್ಟ, ಇತ್ಯಾದಿ
ಇದರಲ್ಲಿ 3 ವಿಧ
1. ರೂಡನಾಮ: ರೂಡಿಯಿಂದ ಬಂದ ಹೆಸರುಗಳು
ಉದಾ: ಹುಡುಗ, ಹುಡುಗಿ ಮನುಷ್ಯ ಇತ್ಯಾದಿ
2. ಅಂಕಿತನಾಮ: ಗುರುತಿಸಲು ಬಳಿಸುವ ಪದಗಳು
ಉದಾ: ರಾಮ. ಸೀತೆ, ಬೆಂಗಳೂರು, ಭಾರತ
3. ಅನ್ವರ್ಥನಾಮ: ಅಂಗವ್ಯಕಲ್ಯ ಮತ್ತು ವೃತ್ತಿಯನ್ನು ಗುರಿತಿಸುವುದು;
ಉದಾ: ಕುಂಟ, ಕುರುಡ, ವೈದ್ಯ. ಶಿಕ್ಷಕಿ, ವಕೀಲ,
II. ವಿಶೇಷಣ ವಾಚಕ: ಗುಣ ಮತ್ತು ಸ್ವಭಾವಗಳನ್ನು ತಿಳಿಸುವುದು.
ವಿಶೇಷಣ ವಿಶೇಷ
ಬಿಳಿಯ ಬಟ್ಟೆ
ಓಡುವ ಗಾಡಿ
ಸುಂದರ ಯುವತಿ
ಭವ್ಯ ಕಟ್ಟಡ
ಪವತ್ರ ಗಂಗೆ
ಹಿರಿಯ ವಿಜ್ನಾನಿ
ಕೊದ್ದಂಡ ರಾಮ
ಕರಿಯಾ ಮೋಡ
ಚಿಕ್ಕ ಬಾಲೆ
ಶ್ರೇಷ್ಠ ಕಾವ್ಯ
ಇದರಲ್ಲಿ 5 ವಿಧಗಳು
1 ಗುಣವಾಚಕ: ಗುಣಸ್ವರೂಪಗಳನ್ನು ತಿಳಿಸುವ ನಾಮಪದ
ಉದಾ: ದೊಡ್ಡ, ಚಿಕ್ಕ, ಒಳ್ಳೆಯ ಕೆಟ್ಟ, ಇತ್ಯಾದಿ
2. ಸಂಖ್ಯಾವಾಚಕ: ಸಂಖ್ಯಗಳನ್ನು ತಿಳಿಸುವ ಪದಗಳು
ಉದಾ: ಒಂದಾನೊಂದು, ಎಂಟನೇಯ ತರಗತಿ,
ಮೂರನೇ ದರ್ಜೆ, ಇಮ್ಮಡಿ,ನಾಲ್ವಡಿ,
3. ಪರಿಮಾಣವಾಚಕ: ನಿರ್ಧಿಷ್ಟವಲ್ಲದ ಪರಿಮಣ ಮತ್ತು ಗಾತ್ರವನ್ನು ತಿಳಿಸುವುದು, \
ಉದಾ: ಸ್ವಲ್ಪ. ಕಡಿಮೆ, ಹೆಚ್ಛು. ಹಲವು, ಕೆಲವು, ಸುಮಾರು ಇತ್ಯಾದಿ.
4. ಪ್ರಕಾರವಾಚಕ: ನಿಜಸ್ಥಿತಿಯನ್ನು ತಿಳಿಸುವುದು.
ಅಂಥ, ಇಂಥ, ಎಂಥ, ಅಂಥಹಾ, ಇಂಥಹಾ,
5. ದಿಗ್ವಾಚಕ: ದಿಕ್ಕುಗಳನ್ನು ತಿಳಿಸುವುದು:
ಊದಾ: ಉಈಪೂಅದನೈಪವ
ಮೂಪಬತೆಂ
ಸರ್ವನಾಮಗಳು: ನಾಮಪದಕ್ಕೆ ಬದಲಾಗಿ ಬಳಿಸುವ ಪದಗಳು ಇದರಲಿ 4 ವಿಧ
1. ಪುರುಷಾರ್ಥಕ, 2ಆತ್ಮಾರ್ಥಕ 3ಪ್ರಶ್ನಾರ್ಥಕ 4. ನೆರ್ದೇಶನಾತ್ಮಕ/ ದರ್ಶಕ
ಪುರುಷಾರ್ಥಕ: ಪುರುಷಗಲ ಹಿನ್ನೆಲೆಯಲ್ಲಿ ವರ್ಗೀಕರಣಕೊಂಡ ಸರ್ವನಾಮ
ಪುರುಷ ಏಕವಚನ ಬಹುವಚನ
ಉತ್ತಮ ನಾನು ನಾವು
ಮದ್ಯಮ ನೀನು ನೀವು
ಪ್ರಥಮ ಪುಲಿಂಗ ಅವನು ಅವರು
ಸ್ತ್ರೀಲಿಂಗ ಅವಳು ಅವರು
ನ. ಲಿಂಗ ಅದು ಅವು.

2. ಆತ್ಮಾರ್ಥಕ: ತಾನು ಮತ್ತು ತಾವು
3. ಪ್ರಶ್ನಾರ್ಥಕ: ಪ್ರಶ್ನಿಸುವಂತ ನಾಮಪದಗಳು:ಉದಾ: ಯಾವನೋ, ಯಾವುದು, ಏಕೆ,
4. ನಿರ್ದೇನಾತ್ಮಕ: ಸ್ಪಷ್ಟವಾಗಿ ಮತ್ತು ನಿರ್ಧಿಷ್ಟವಾಗಿ ನಿರ್ದೇಶಿಸುವುದು
ಉದಾ: ತಾಜ್ ಮಹಲ್ ಕಲ್ಲಿನಲ್ಲಿ ಅರಳಿದ ಪ್ರೇಮ ಕಾವ್ಯ
ಗೋಲಗುಮ್ಮಟ ಜಗತ್ಪ್ರಸಿದ್ದ ಕಟ್ಟಡ
ಭಾವನಾಮಗಳು; ಗುಣ, ಸ್ವಭಾವ, ಸ್ಥಿತಿ, ಕ್ರೀಯೆಗಳನ್ನು ತಿಳಿಸುವುದು.
ಉದಾ: ಸಿಟ್ಟು, ಸಂತೋಷ, ಕೋಪ, ತಾಪ, ಅಳು, ನಗು,

ಸಂಧಿಗಳು
ಸ್ವರ ಅಥವಾ ವ್ಯಂಜನದ ಎರಡು ಅಕ್ಷರಗಳ ನಡುವೆ ಕಾಲವಿಳಂಬವಿಲ್ಲದೆ ಮತ್ತು
ಮೂಲ ಅರ್ಥಕ್ಕೆ ವ್ಯತೆಯುಂಟಾಗದಂತೆ ಸೇರಿಸಿ ಉಚ್ಛರಿಸುವುದೇ ಸಂಧಿ
ಪೂರ್ವ ಪದದ ಅಂತ್ಯ ಮತ್ತು ಉತ್ತರ ಪದದ ಆದಿ ಅಕ್ಷರಗಳ ನಡುವೆ ಕೂಡುವ ಪದವೇ ಸಂಧಿ
ಪೂರ್ವ ಪದ+ಉತ್ತರ ಪದ = ಸಂಧಿ ಪದ
ಭಾಷೆಯ ಆದರದ ಮೇಲೆ ಸಂಧಿಗಳು ಎರಡು ವಿಧ
ಕನ್ನಡ ಸಂಧಿಗಳು ಮತ್ತು ಸಂಸ್ಕೃತ ಸಂಧಿಗಳು
ಕನ್ನಡ ಸಂಧಿಗಳು 3 ಲೋಪ,, ಆಗಮ. ಮತ್ತು ಅದೇಶ ಸಂಧಿಗಳು
ಸ್ವರ ಸಂಧಿ
ಸ್ವರ+ಸ್ವರ ಉದಾ: ಅವನ+ಊರು= ಅವನೂರು
ವ್ಯಂಜನ ಸ್ವರ
ವ್ಯಂಜನ + ಸ್ವರ ಉದಾ: ಹಳ್+ಕನ್ನಡ=ಹಳಗನ್ನಡ
ವ್ಯಂಜನ+ವ್ಯಂಜನ
ಕಣ್+ಪನಿ=ಕಂಬನಿ
ಎರಡು ಕನ್ನಡದ ಒರೆಗಳ ಕೂಡಿಕೆ/ಸೇರಿಕೆ/ಕಲೆತ.
ಮೂರು ಕನ್ನಡದ ಒರೆಗೂಡಿಕೆಗಳು.
ಲೋಪ ಸಂಧಿ
ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ
ಪೂರ್ವಪದದ ಕೊನೆಯ ಸ್ವರವು ಲೋಪವಾಗುವುದು.
ಉದಾ:- ಮತ್ತು(ಉ)+ಒಬ್ಬ=ಮತ್ತೊಬ್ಬ.ಇಲ್ಲಿ ಪೂರ್ವಪದದ ಕೊನೆಯ ಸ್ವರ 'ಉ' ಕಾರ ಲೋಪವಾಗಿದೆ.
ಉದಾ:- ಅಲ್ಲಿ(ಇ)+ಅಲ್ಲಿ=ಅಲ್ಲಲ್ಲಿ.ಇಲ್ಲಿ ಪೂರ್ವಪದದ ಕೊನೆಯ ಸ್ವರ 'ಇ'ಕಾರ ಲೋಪವಾಗಿದೆ.

ಇಲ್ಲಿ "ಅರ್ಥವು ಕೆಡದಿದ್ದ ಪಕ್ಷದಲ್ಲಿ" ಎಂದು ಕೇಳುವಾಗ, ಸಂಧಿ ಮಾಡುವವರು ಅರ್ಥ
ಕೆಡುವುದೇ ಇಲ್ಲವೇ ಎಂದು ಹೇಳಲು ಹಲವು ಸರತಿ ಆಗುವುದಿಲ್ಲ.
ಮಾದರಿ: ಬಾಳನ್ನು = ಬಾಳೆ + ಅನ್ನು ? ಇಲ್ಲವೆ ಬಾಳು + ಅನ್ನು ?
ಒಂದು ವೇಳೆ ಬಾಳೆ + ಅನ್ನು = ಬಾಳನ್ನು ಅಂದರೆ ಇಲ್ಲಿ ಅರ್ಥ ಹೇಗೆ ಕಟ್ಟಿದೆ, ಹೇಳಲು ಸಾಧ್ಯವಿಲ್ಲ.
ಆದುದರಿಂದ ಇಂತಹ ಹಲವು ಸನ್ನಿವೇಶಗಳಲ್ಲಿ ರೂಢಿಯಲ್ಲಿ ಇರುವ ಅರ್ಥವೇ ಸರಿಯೆಂದು ತಿಳಿವು.
ಹಾಗೆ
ಬಾಲೆ + ಅನ್ನು = ಬಾಲನ್ನು ತಪ್ಪು ಎಂದು ತಿಳಿವು
"ಬಾಲನ್ನು = ಬಾಲು + ಅನ್ನು" ಎಂದೇ ರೂಢಿ.
ಆಗಮ ಸಂಧಿ
ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ,ಸಾಮಾನ್ಯವಾಗಿ ಹೊಸದಾಗಿ
ಒಂದು ವ್ಯಂಜನವು ಉತ್ತರಪದದ ಆದಿಯಲ್ಲಿರುವ ಸ್ವರಕ್ಕೆ ಬಂದು ಸೇರುತ್ತದೆ.ಇದರಲ್ಲಿ
ಎರಡು ವಿಧ.'ಯಕಾರಾಗಮ ಸಂಧಿ' ಹಾಗೂ 'ವಕಾರಾಗಮ ಸಂಧಿ'.
ಉದಾ:- ಮನೆ(ಎ)+ಅನ್ನು=ಮನೆಯನ್ನು.ಇಲ್ಲಿ ಉತ್ತರಪದದ ಆದಿಯಲ್ಲಿ 'ಯ್ ಕಾರ' 'ಆಗಮ'ವಾಗಿದೆ.
ಉದಾ:- ಮಗು(ಉ)+ಇಗೆ=ಮಗುವಿಗೆ.ಇಲ್ಲಿ ಉತ್ತರಪದದ ಆದಿಯಲ್ಲಿ 'ವ್ ಕಾರ' 'ಆಗಮ'ವಾಗಿದೆ.

ಕನ್ನಡದ ಹಲವಾರು ವ್ಯಾಕರಣದ ಹೊತ್ತಗೆಗಳು ಮೇಲಂತೆ ಹೇಳಿದರೂ, ಹೀಗೆ ಹೇಳುವದು ಹಲವು
ವಿವಾದಗಳಿಗೆ ಮತ್ತು ತಪ್ಪುತಿಳಿವಿಗೆ ಅನುವು ಮಾಡುವುದು.
ಈ ಸಂಧಿಯ ವಿವರಣೆಯಲ್ಲಿ ಇರುವಂತೆ "ಸಾಮಾನ್ಯವಾಗಿ ಹೊಸದಾಗಿ ಒಂದು ವ್ಯಂಜನವು
ಉತ್ತರಪದದ ಆದಿಯಲ್ಲಿರುವ ಸ್ವರಕ್ಕೆ ಬಂದು ಸೇರುತ್ತದೆ" ಎಂದಾಗ ಆ ಸಮಾನ್ಯವಲ್ಲದ( ಅಸಮಾನ್ಯ )
ಸನ್ನಿವೇಶಗಳು ಯಾವುವು ಎಂದು ಯಾವ ಹೊತ್ತಗೆಗಳು ಹೇಳುವುದಿಲ್ಲ.
ಮನೆ + ಅನ್ನು = ಮನೆಗಳನ್ನು ಏಕೆ ಆಗಬಾರದು? "ಗಳ್" ಯಾಕೆ ಆಗಮವಾಗಬಾರದು? ಹಾಗೆ...
ಮಗು + ಅನ್ನು = ಮಗುವನ್ನು ಆದರೆ ನೀರು + ಅನ್ನು = ನೀರುವನ್ನು ಏಕೆ ತಪ್ಪು?
ಮನೆ + ಅನ್ನು = ಮನೆಯನ್ನು ಆದರೆ ಆದರೆ + ಇಲ್ಲಿ = ಆದರೆಯಿಲ್ಲ ಏಕೆ ಆಗದೇ, ಆದರಿಲ್ಲಿ ಆಗುವುದು?
ಹೀಗೆ ಇನ್ನು ಹಲವು ವಿಚಾರಗಳಿಗೆ ಕಾರಣವನ್ನು ಕೊಡಲು ಆಗದು.
ಅದಕ್ಕೆ ಕೆಲವರು ಕನ್ನಡದಲ್ಲಿ "ಆಗಮಸಂಧಿ" ಎನ್ನವ ಸಂಧಿಯಿಲ್ಲ. ಕನ್ನಡದಲ್ಲಿ "ಲೋಪ ಸಂಧಿ" ಯೊಂದೆ ಸ್ವರ ಸಂಧಿ ಎನ್ನುವರು.
ಜತೆಗೆ ಅವರು "ಆಗಮಸಂಧಿ"ಗೆ ಉದಾಹರಣೆಯಾಗಿ ಹೇಳಿರುವ ಪದಗಳನ್ನು ಬಿಡಿಸಲು ಬೇರೆ ಬಗೆಯನ್ನು ಕೂಡ ಸೂಚಿಸಿರುವರು.
ಮೆನಯು + ಅನ್ನು = ಮೆನೆಯನ್ನು; ಉ ಕಾರ ಲೋಪ. "ಮನೆಯು => ಒಂದು ಮನೆ" ಮನೆಗಳು + ಅನ್ನು = ಮನೆಗಳನ್ನು :ಉ ಕಾರ ಲೋಪ; "ಮನೆಗಳು => ಹಲವು ಮನೆಗಳು"
ಮಗುವು + ಅನ್ನು = ಮಗುವನ್ನು; ಉ ಕಾರ ಲೋಪ
ಆದೇಶ ಸಂಧಿ
ಸಂಧಿಯಾಗುವಾಗ ಸ್ವರದ ಮುಂದೆ ಕ,ತ,ಪ ಗಳು ಬಂದಾಗ ,ಅದೇ ವರ್ಗದ ಮೂರನೇ
ವ್ಯಂಜನಗಳು ಅಂದರೆ ಗ,ದ,ಬ ಗಳು ಆದೇಶವಾಗಿ ಬರುತ್ತವೆ.
ಉದಾ:- ಮಳೆ+ಕಾಲ=ಮಳೆಗಾಲ., ಬೆಟ್ಟ+ತಾವರೆ=ಬೆಟ್ಟದಾವರೆ., ಅಡಿ+ಪವಳ=ಅಡಿಬವಳ.
ಗಮನಿಸಿರಿ: ಈ ನಿಯಮವು ಕನ್ನಡದಲ್ಲಿ ಬರುವ ಹಲವು ವ್ಯಂಜನದ ಆದೇಶಗಳನ್ನು ವಿವರಿಸುವುದಿಲ್ಲ.
ಅವನ್ನು ವಿವರಿಸಲು ಯಾವ ಸಂಧಿನಿಯಮವನ್ನು ಹಲವು ವ್ಯಾಕರಣದ ಹೊತ್ತಗೆಗಳು ಹೇಳುವುದಿಲ್ಲ.
ಮಾದರಿ:
ಹೆರ್‍ + ದಾರಿ = ಹೆದ್ದಾರಿ
ಬೆಲೆ + ಪೆಣ್ಣು(ಹೆಣ್ಣು) = ಬೆಲೆವೆಣ್ಣು
ಮುಂದು + ಪರಿ( ಹರಿ ) = ಮುಂದುವರಿ
ಮುಂದು + ಪರೆ( ಹರೆ ) = ಮುಂದುವರೆ
ತಣ್ + ನೀರು = ತಣ್ಣೀರು
ಕಣ್ + ನೀರು = ಕಣ್ಣೀರು
ಭೂ + ತಾಯಿ = ಭೂದಾಯಿ ಅಲ್ಲ ಏಕೆ?
ಒರ್‍ + ಕೊರಲು = ಒಕ್ಕೊರಲು
ಒರ್‍ + ಕೂಟ = ಒಕ್ಕೂಟ
ಒರ್‍ + ಕೂಡು = ಒಗ್ಗೂಡು
ಹೆರ್‍ + ಪಾವು(ಹಾವು) = ಹೆಬ್ಬಾವು
ಕಿಸು + ಪೊೞಲು(ಹೊಳಲು) = ಕಿಸುವೊಳಲು
ಮೂರ್‍ + ಕಣ್ಣ = ಮುಕ್ಕಣ
ತಣ್ + ಗಾಳಿ = ತಂಗಾಳಿ; ಇಲ್ಲಿ 'ಣ್' ಕಾರಕ್ಕೆ 'ಞ್' ಕಾರ ಆದೇಶ
ಗಮನಿಸಿರಿ: ಕನ್ನಡದಲ್ಲಿ ಹೆಚ್ಚ ಸರತಿ ಬರಿ ರೂಢಿಯಿಂದ ಸಂಧಿ/ಒರೆಗೂಡಿಕೆಗಳನ್ನು ಅರಿಯಲು
ಆರುವುದು. ಈ ಮೇಲಿನ ನಿಯಮಗಳಂತೆ ಎಲ್ಲ ಕನ್ನಡ ಸಂಧಿಪದಗಳನ್ನು ಬಿಡಿಸಲು ಆರದು.
ಸಂಸ್ಕೃತ ಸಂಧಿಗಳು
ಯಾವ ಕನ್ನಡದ ಪಲುಕು(ಪದ) ಈ ಕೆಳಗಿನ ಸಂಧಿಗಳಲ್ಲಿ ಬರುವುದಿಲ್ಲ. ಬರೀ ಸಂಸ್ಕೃತದ
ಪಲುಕುಗಳಿಗೆ ಸೀಮಿತವಾದ ಸಂಧಿಗಳಿವು. ಆದರೆ ಹಳೆಗನ್ನಡದಿಂದಲೂ ಕನ್ನಡದಲ್ಲಿ ಹೇರಳವಾಗಿ
ಬೆರೆತಿರುವ ಸಾವಿರಾರು ಸಂಸ್ಕೃತದ ಸಂಧಿಪದಗಳನ್ನು ತಿಳಿಯಲು ಈ ಸಂಧಿಗಳ ಅರಿವು ಬೇಕು.
ಈ ಸಂಧಿಗಳ ವಿವರಣೆಯನ್ನು ಸಂಸ್ಕೃತದ ವ್ಯಾಕರಣದ ಹೊತ್ತಗೆಗಳಿಂದ ಪಡೆಯಬಹುದು.
ಈ ಎಲ್ಲ ಸಂಧಿಗಳೂ ೧೦೦% ಸಂಸ್ಕೃತದ ವ್ಯಾಕರಣದ ಸಂಧಿನಿಯಮಗಳನ್ನೇ ಪಾಲಿಸುವುವು.
ಎರಡು ಸಂಸ್ಕೃತದ ಪದಗಳ ಸೇರಿಕೆ.
ಸವರ್ಣದೀರ್ಘ ಸಂಧಿ
ಗುಣ ಸಂಧಿ
ವೃದ್ಧಿ ಸಂಧಿ
ಯಣ್ ಸಂಧಿ
ಜಸ್ತ್ವ ಸಂಧಿ
ಶ್ಚುತ್ವ ಸಂಧಿ
ಷ್ಟುತ್ವ ಸಂಧಿ
ಅನುನಾಸಿಕ ಸಂಧಿ
ವಿಸರ್ಗ ಸಂಧಿ

ಸವರ್ಣದೀರ್ಘ ಸಂಧಿ

ಅ ಮತ್ತು ಆ, ಇ ಮತ್ತು ಈ, ಉ ಮತ್ತು ಊ - ಇವುಗಳಿಗೆ 'ಸವರ್ಣ'ಗಳೆಂದು ಹೆಸರು.
ಇವುಗಳಲ್ಲಿ ಆ,ಈ ಮತ್ತು ಊ ಸ್ವರಗಳು ದೀರ್ಘ ಸ್ವರಗಳು.
ಸಂಸ್ಕೃತ ಪದಗಳು ಸಂಧಿಯಾಗುವ ಸಂದರ್ಭದಲ್ಲಿ, ಸವರ್ಣ ಸ್ವರಗಳು ಒಂದರ
ಮುಂದೊಂದು ಬಂದಾಗ ಸಂಧಿ ಹೊಂದಿ, ಈ ಸವರ್ಣದ ದೀರ್ಘ ಸ್ವರವಾಗಿ ಉಳಿಯುತ್ತದೆ.
ಸಂಸ್ಕೃತದಲ್ಲಿ ಪಾಣಿನೀಯ ಸೂತ್ರ : 'ಅಕಃ ಸವರ್ಣೇ ದೀರ್ಘಃ' ಎಂದು.
ಉದಾಹರಣೆಗೆ:
ಅ + ಅ ಸ್ವರಗಳು ಸಂಧಿಯಾಗಿ 'ಆ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.ಇ + ಇ ಸ್ವರಗಳು ಸಂಧಿಯಾಗಿ 'ಈ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.ಉ + ಉ ಸ್ವರಗಳು ಸಂಧಿಯಾಗಿ 'ಊ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಆ + ಅ ಸ್ವರಗಳು ಸಂಧಿಯಾಗಿ 'ಆ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.ಇ + ಈ ಸ್ವರಗಳು ಸಂಧಿಯಾಗಿ 'ಈ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.ಊ + ಉ ಸ್ವರಗಳು ಸಂಧಿಯಾಗಿ 'ಊ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಕೃ ತ + ಅ ರ್ಥ = ಕೃ ತಾ ರ್ಥ
( ಅ + ಅ = ಆ )
ಶ ಚಿ + ಇಂ ದ್ರ = ಶ ಚೀಂ ದ್ರ ( ಇ + ಇ = ಈ )
ಬ ಹು + ಉ ದ ಕ = ಬ ಹೂ ದ ಕ ( ಉ + ಉ = ಊ )
ವಿ ದ್ಯಾ + ಅ ಭ್ಯಾ ಸ = ವಿ ದ್ಯಾ ಭ್ಯಾ ಸ ( ಆ + ಅ = ಆ )
ಸ ತೀ + ಈ ಶ = ಸ ತೀ ಶ ( ಈ + ಈ = ಈ )
ಉ ಪ + ಆ ಹಾ ರ = ಉ ಪಾ ಹಾ ರ ( ಅ + ಆ = ಆ )

ಗುಣ ಸಂಧಿ
ಗುಣ ಸಂಧಿ ಎಂಬ
ಸಂಸ್ಕೃತ ಸಂಧಿಯು ಪ್ರಮುಖವಾಗಿ ಮೂರು ಸಂದರ್ಭಗಳಲ್ಲಿ ಕಂಡು ಬರುತ್ತದೆ.
ಅ,ಆ + ಇ,ಈ ಸ್ವರಗಳು ಸಂಧಿಯಾಗಿ, 'ಏ' ಸ್ವರವಾಗಿ ಉಳಿಯುತ್ತದೆ.
ಅ,ಆ + ಉ,ಊ ಸ್ವರಗಳು ಸಂಧಿಯಾಗಿ, 'ಓ' ಸ್ವರವಾಗಿ ಉಳಿಯುತ್ತದೆ.
ಅ,ಆ + ಋ ಸ್ವರಗಳು ಸಂಧಿಯಾಗಿ, 'ಅರ್' ಎಂದು ಉಳಿಯುತ್ತದೆ.
ಉದಾಹರಣೆಗಳು:
ರಾ ಜ + ಇಂ ದ್ರ = ರಾ ಜೇಂ ದ್ರ ( ಅ + ಇ = ಏ )
ಜ ನ್ಮ + ಉ ತ್ಸ ವ = ಜ ನ್ಮೋ ತ್ಸ ವ ( ಅ + ಉ = ಓ )
ದೇ ವ + ಋ ಷಿ = ದೇ ವ ರ್ಷಿ ( ಅ + ಋ = ಅರ್)
ರ ಮಾ + ಈ ಶ = ರ ಮೇ ಶ ( ಆ + ಈ = ಏ )
ಮ ಹಾ + ಉ ತ್ಸ ವ = ಮ ಹೋ ತ್ಸ ವ ( ಆ + ಉ = ಓ )
ವೃದ್ಧಿ ಸಂಧಿ
ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಐ' ಕಾರವೂ, ಓ ಔ ಕಾರಗಳು
ಪರವಾದರೆ ಅವೆರಡರ ಸ್ಥಾನದಲ್ಲಿ 'ಔ' ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿ ಸಂಧಿಯೆನ್ನುವರು.
ಉದಾಹರಣೆ:
ಲೋಕ + ಏಕವೀರ = ಲೋಕೈಕವೀರ
ಜನ + ಐಕ್ಯ = ಜನೈಕ್ಯ

ಯಣ್ ಸಂಧಿ
ಸಂಧಿ ರಚನೆಯಲ್ಲಿ 'ಯ' 'ರ' 'ಲ' 'ವ' ಈ ನಾಲ್ಕು ಅಕ್ಷರಗಳು ಆದೇಶವಾಗಿ ಬಂದರೆ ಯಣ್ ಸಂಧಿ ಎನ್ನುತ್ತೇವೆ.
ಮತ್ತು ಇ,ಈ,ಉ,ಊ,ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ 'ಯ್'ಕಾರವೂ,
ಉ ಊಕಾರಗಳಿಗೆ 'ವ್'ಕಾರವೂ, ಋಕಾರಕ್ಕೆ 'ರ್'(ರೇಫ)ವೂ ಆದೇಶವಾಗಿ ಬರುತ್ತದೆ. ಇದಕ್ಕೆ 'ಯಣ್ ಸಂಧಿ'ಯೆನ್ನುತ್ತೇವೆ
ಉದಾಹರಣೆ:
ಅತಿ + ಅಂತ = ಅತ್ಯಂತ
ಮನು + ಅಂತರ = ಮನ್ವಂತರ
ಪಿತೃ + ಅರ್ಜಿತ = ಪಿತ್ರಾರ್ಜಿತ
ಅತಿ + ಅವಸರ = ಅತ್ಯವಸರ
ಜಾತಿ + ಅತೀತ = ಜಾತ್ಯಾತೀತ
ಕೂಟಿ + ಅಧೀಶ = ಕೋಟ್ಯಾಧೀಶ

ಜಸ್ತ್ವ ಸಂಧಿ
ವರ್ಗೀಯ
ವ್ಯಂಜನದ ಮೊದಲ ಅಕ್ಷರದ ಬದಲಿಗೆ ಮೂರನೆಯ ಅಕ್ಷರ ಬಂದಾಗ ಜಸ್ತ್ವ ಸಂಧಿ ಆಗುತ್ತದೆ.
ಪೂವ೯ಪದದ ಕೊನೆಯಲ್ಲಿರುವ ಪ್ರಥಮ ವಣ೯ಗಳಿಗೆ ಅಂದರೆ ಕ,ಚ,ಟ,ತ,ಪ ಗಳಿಗೆ ಇತರೆ ವಣ೯ಗಳು
ಪರವಾದರೆ ಅವುಗಳ ಸ್ತಾನದಲ್ಲಿ ಅದೇ ವಗ೯ದ ಮೂರನೆಯ ವಣ೯ವು ಆದೇಶವಾಗುತ್ತದೆ.
ಉದಾಹರಣೆ:
ವಾಕ್ + ಈಶ = ವಾಗೀಶ
ಜಗತ್ + ಗುರು = ಜಗದ್ಗುರು
ದಿಕ್ + ದೇಶ = ದಿಗ್ದೇಶ
ಸತ್ + ಉದ್ಯೋಗ = ಸದುದ್ಯೋಗ

ಶ್ಚುತ್ವ ಸಂಧಿ
'ಸ' ಕಾರ 'ತ' ವಗಾ೯ಕ್ಷರಗಳಿಗೆ 'ಶ' ಕಾರ 'ಚ' ವಗಾ೯ಕ್ಷರಗಳು ಪರವಾದಾಗ 'ಸ' ಕಾರಕ್ಕೆ 'ಶ' ಕಾರವೂ
'ತ' ವಗ೯ಕ್ಕೆ 'ಚ' ವಗ೯ವೂ ಆದೇಶವಾಗಿ ಬರುತ್ತದೆ.
ಉದಾ:-
ಮನಸ್+ಶುದ್ದಿ = ಮನಶ್ಯುದ್ದಿ
ಜಗತ್+ಜ್ಯೋತಿ = ಜಗಜ್ಯೋತಿ
ಸತ್ + ಜನ = ಸಜ್ಜನ

ಷ್ಟುತ್ವ ಸಂಧಿ
'ಷ್ಟು' ಎಂದರೆ 'ಷ' ಕಾರ 'ಟ' ವಗ೯ ಎಂದು ಸಂಙೆ ಪದಾಂತ್ಯದಲ್ಲಿರುವ 'ಸ' ಕಾರ 'ತ' ವಗ೯ಗಳಿಗೆ 'ಷ' ಕಾರ 'ಟ' ವಗ೯ಗಳು
ಪರವಾದರೆ 'ಸ' ಕಾರಕ್ಕೆ 'ಷ' ಕಾರವೂ 'ತ' ವಗ೯ಕ್ಕೆ 'ಟ' ವಗ೯ವೂ ಆದೇಶವಾಗುವುದು ಇದು ಷ್ಟುತ್ವ ಸಂಧಿ.
ಉದಾ:-
ತಪಸ್ + ಷಡಂಶ = ತಪಷ್ಪಡಂಶ
ತತ್ + ಟೀಕೆ = ತಟ್ಟೀಕೆ
ಅನುನಾಸಿಕ ಸಂಧಿ
ವರ್ಗೀಯ
ವ್ಯಂಜನದ ಮೊದಲ ಅಕ್ಷರದ ಬದಲಿಗೆ ಕೊನೆಯ ಅಕ್ಷರ (ಅನುನಾಸಿಕ) ಬಂದಾಗ ಅನುನಾಸಿಕ ಸಂಧಿ ಆಗುತ್ತದೆ.
ಉದಾಹರಣೆ:
ವಾಕ್ + ಮಯ = ವಾಙ್ಮಯ
ಜಗತ್ + ಮಾತಾ = ಜಗನ್ಮಾತಾ

ಜ್ನಾನಪೀಠ ಪ್ರಶಸ್ತಿ ಸ್ಥಾಪನೆ 1954
ಕೊಟ್ಟಿದ್ದು 1955
ಮೊಟ್ಟಮೊದಲ ಜ್ನಾನಪೀಠ ಪ್ರಶಸ್ತಿ ವಿಜೇತರು
ಶಂಕರ ಕುರುಪ್ ಭಾಷೆ ಮೆಲೆಯಾಳಂ
2010 ರಲ್ಲಿ 2007 ರ ಪ್ರಶಸ್ತಿ ಯನ್ನು ಶ್ರೀ ನೀಲಕಂಠ ಕುರುಪ ಕೊಂಕಣಿ ಮತ್ತು
2008 ರ ಅಖ್ಲರ್ ಖಾನ್ ಶೆರ್ಯ (ಉರ್ದು) ರವರಿಗೆ ನೀಡಲಾಯಿತು.
ಕನ್ನಡದಲ್ಲಿ ಜ್ನಾನಪೀಠ ಪ್ರಶಸ್ತಿ ವಿಜೇತರು 7 ಜನ (ಕುದ್ ಕಾ ಅಸ್ತಿ ವಿಕೃ UR ಗಿರೀಶ್) 196 7 3 7 3 0 4 8
ಕು ಕುವೆಂಪು (ಶ್ರೀ ರಾಮಾಯಣ ದರ್ಶನಂ) 1967
ದ್ ದ ರಾ ಬೇಂದ್ರೆ (ನಾಕು ತಂತಿ) 1973
ಕಾ ಶಿವರಾಂ ಕಾರಂತ(ಮೂಕಜ್ಜಿಯ ಕನಸುಗಳು) 1977
ಆಸ್ತಿ ಮಾಸ್ತಿ ವೆಂಕೇಶ ಅಯ್ಯಾಂಗಾರ್(ಚಿಕ್ಕವೀರ ರಾಜೇಂದ್ರ ಅಥವಾ ಸಮಗ್ರ ಸಾಹಿತ್ಯ) 1983
ವಿಕೃ ವಿನಾಯಕ ಕೃಷ್ಣ ಗೋಕಾಕ್(ಭಾರತ ಸಿಂದೂ ರಶ್ಮಿ ಅಥವಾ ಸಮಗ್ರ ಸಾಹಿತ್ಯ 1990
UR ಯು ಅರ್ ಅನಂತ ಮೂರ್ತಿ (ಸಮಗ್ರ ಸಾಹಿತ್ಯ) 1994
ಗಿರೀಶ್ ಗಿರೀಶ್ ಕಾರ್ನಾಡ್ (ಸಮಗ್ರ ಸಾಹಿತ್ಯ) 1998



21.03.2011
ವಿಸರ್ಗ ಸಂಧಿ
ಸಂಧಿ ಪದದಲ್ಲಿ ವಿಸರ್ಗ ಅಕ್ಷರವಾದ ಃ ಆದೇಶವಾಗಿ ಬಂದರೆ ಅದನ್ನು ವಿಸರ್ಗ ಸಂಧಿ ಅನ್ನುತಾರೆ
ಉದಾ: ಅಂತರ್+ಕರಣ=ಅಂತಃ ಕರಣ
ಅಂತರ್+ಪುರ=ಅಂತಃಪುರ
ಅಂತರ್+ಕಲಹ=ಅಂತಃಕಲಹ
ಟಿಪ್ಸ್:
ಮೊದಲನೇ ಮೈಸೂರ್ ಯುದ್ಧ 1767ರಿಂದ 69 ಕರ್ನಲ್ ಸ್ಮಿತ್ ಮದ್ರಾಸ್ ಒಪ್ಪಂದ
ಎರಡನೇ 1780 ರಿಂದ 84 ವಾರ್ನ್ ಹೇಸಿಟಿಂಗ್ಸ್ ಮಂಗಳೂರು ಒಪ್ಪಂದ
ಮೂರನೇಯ 1790 ರಿಂದ 92 ಕಾರ್ನವಾಲೀಸ್ ಶ್ರೀರಂಗಪಟ್ಟಣ ಒಪ್ಪಂದ
ನಾಲ್ಕನೇ 1799 ಶ್ರೀರಂಗಪಟ್ಟಣ ಒಪ್ಪಂದ

ಸಮಾಸಗಳು
ಬಿಡಿ ಬಿಡಿಯಾಗಿ ವಿಸ್ತರಿಸಿ ಹೇಳಬುಹುದಾದ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಅರ್ಥಬರುವಂತೆ ಸಿದ್ಧಗೊಂಡ
ಪದವೇ ಸಮಾಸ, ಇದು ಸಂಧಿತ ನಾಮಗಳಲ್ಲಿ ಬಹು ಪ್ರಧಾನವದುದ್ದು ಇದನ್ನು ಸಮಸ್ತ ಪದ, ಪಧ ವಿಧಿ,
ಕೂಡುನುಡಿ ಮತ್ತು ಸಮಾಸ ಅಂತಲೂ ಕರೆಯುತ್ತಾರೆ.
ಒಟ್ಟು ಕನ್ನಡದಲ್ಲಿ 8 ಪ್ರಕಾರಗಳಿದ್ದ್ದು ಅವುಗಳನ್ನು ಅರ್ಥದ ಮೊದಲ 4 ಈ ಕೆಳಗಿನಂತಿದೆ.
I ಉತ್ತರಪದ ಅರ್ಥ ಪ್ರಧಾನ ಪದ
1- ತತ್ಪುರುಷ ಸಮಾಸ
2 ಕರ್ಮಧಾರಯ ಸಮಾಸ
3 ದ್ವಿಗು ಸಮಾಸ
4ಕ್ರಿಯಾ ಸಮಾಸ
5ಗಮಕ ಸಮಾಸ
II. ಪೂರ್ವ ಪದ ಪ್ರಧಾನ ಸಮಾಸೆ
ಅಂಶಿಸಮಾಸ
II ಉಭಯ ಸರ್ವ ಪಧ ಪ್ರಧಾನ ಸಮಾಸ
ದ್ವಂದ್ವ ಸಮಾಸ
III ಅನ್ಯಪದ ಪ್ರಧಾನ ಸಮಾಸ
ಬಹುರ್ವೀಹಿ ಸಮಾಸ

I ಉತ್ತರ ಪದ ಪ್ರಧಾನ ಸಮಾಸ : ತತ್ಪುರುಷ ಸಮಾಸ
ಉದಾ: ಗುರುವಿನ+ಮನೆ+ಗುರುಮನೆ
ಹೊಟ್ಟೆಯಲ್ಲಿ+ಕಿಚ್ಛು=ಹೊಟ್ಟೆಕಿಚ್ಚು
ವಯಸ್ಸಿನ+ವೃದ್ಧ=ವಯೋವೃದ್ಧ
ಪೂರ್ವ ಪಧಗಳ ವಿಭಕ್ತಿ ಪ್ರತ್ಯೇಯಗಳ ಹಿನ್ನೆಲೆಯಲ್ಲಿ ಇದನ್ನು
5 ಪ್ರಕಾರವಾಗಿ ವಿಂಗಡಿಸಲಾಗಿದೆ
1 ತೃತೀಯ ತತ್ಪುರುಷ (ಇಂದ)
ಉದಾ: ಬಾಯಿಯಿಂದ + ಜಗಳ = ಬಾಯಿ ಜಗಳ (ಇಂದ ತೃತೀಯ ವಿಭಕ್ತಿ ಪ್ರತ್ಯಯ)
ಜ್ನಾನದಿಂದ+ವೃದ್ಧ=ಜ್ನಾನವೃಧ್ದ (ಇಂದ ತೃತೀಯ ವಿಭಕ್ತಿ ಪ್ರತ್ಯಯ)
ಕವಿಗಳಿಂದ+ವಂಧಿತ=ಕವಿವಂಧಿತ (ಇಂದ ತೃತೀಯ ವಿಭಕ್ತಿ ಪ್ರತ್ಯಯ)
2 ಚತುರ್ಥಿ ತತ್ಪುರುಷ ( ಗೆ)
ಉದಾ: ಕೃಷ್ಣನಿಗೆ+ಅರ್ಪಣಾ=ಕೃಷ್ಣಾರ್ಪಣಾ
ಭೂತಗಳಿಗೆ + ಬಲಿ=ಭೂತಬಲಿ
ಕೂದಲಿಗೆ+ಎಣ್ಣೆ=ಕೂದಲೆಣ್ಣೆ
3 ಪಂಚಮಿ ತತ್ಪುರುಷ (ದೆಸಿಯಿಂದ)
ಉದಾ: ರೋಗದ ದೆಸೆಯಿಂದ+ಮುಕ್ತಿ=ರೋಗಮುಕ್ತಿ
ದೇಶದ ದೆಸೆಯಿಂದ+ಅಂತರ=ದೆಶಾಂತರ
4 ಷಷ್ಠಿ ತತ್ಪುರುಷ ( ಅ)
ಉದಾ: ಆನೆಯ+ಮರಿ=ಆನೆಮರಿ
ಕಲ್ಲಿನ+ಮಂಟಪ=ಕಲ್ಲುಮಂಟಪ (IMP)
ಮಲ್ಲರ+ಕಾಳಗ=ಮಲ್ಲಕಾಳಗ
ದೇವರ+ಮಂದಿರ =ದೇವಮಂದಿರ
ಗುರುವಿನ+ಮನೆ=ಗುರುಮನೆ
5 ಸಪ್ತವಿ ತತ್ಪುರುಷ: (ಅಲ್ಲಿ)
ಸರ್ವರಲ್ಲಿ+ಉತ್ತಮ=ಸರ್ವೋತ್ತಮ
ಗೃಹದಲ್ಲಿ+ಪ್ರವೇಶ=ಗೃಹಪ್ರವೇಶ
ಹೊಟ್ಟೆಯಲ್ಲಿ+ಕಿಚ್ಚು=ಹೊಟ್ಟೆಕಿಚ್ಚು
ಗ್ರಾಮದಲ್ಲಿ+ವಾಸ=ಗ್ರಾಮವಾಸ
ತಲೆಯಲ್ಲಿ+ನೋವು=ತಲೆನೋವು
ಕರ್ಮಧಾರಯ ಸಮಾಸ:
ಪೂರ್ವ ಪದದ ಗುಣವಾಚಕ ಮತ್ತು ಉತ್ತರಪದ ಪ್ರಧಾನ ಸಮಾಸ
ಉದಾ; ಹಿರಿದಾದ+ಮರ= ಹೆಮ್ಮರ
ಹಿರಿದಾದ+ಮಾರಿ+ಹೆಮ್ಮಾರಿ
ನಿಡಿದಾದ+ಉಸಿರು+ನಿಟ್ಟುಸಿರು
ಕೆಂಪಾದ+ತುಟಿ=ಕೆಂದುಟಿ
ಕೆಂಪಾದ+ತಾವರೆ=ಕೆಂದಾವರೆ
ಪೀತವಾದ+ಅಂಬರ=ಪೀತಾಂಬರ
ನಿಯಮ I ಪೂರ್ವೋತ್ತರಗಳೆರಡು ವಿಶೇಶ ಮತ್ತು ವಿಶೇಷಣಗಳಿಂದ ಕೂಡಿ ಸಮಾಸವಾಗುವುದು
ಉದಾ: ಕೆಂಪಾದ+ತಾವರೆ=ಕೆಂದಾವರೆ
ತಂಪಾದ+ಗಾಳಿ=ತಂಗಾಳಿ
ತಂಪಾದ+ಎಲರು=ತಂಬೆಲರು
ತಂಪಾದ + ಕದಿರು=ತಂಗದಿರು
ನಿಯಮ II : ಪೂರ್ವೋತ್ತರಗಳು ಉಪಮಾನ ಉಪಮೇಯ ಅಥವಾ ಉಪಮೇಯ ಉಪಮಾನವಾಗಿರುವುದು
ಉದಾ: ಎಲೆಯಂತೆ + ಹಸಿರು=ಎಲೆಹಸಿರು
ಗಿಳಿಯಂತೆ + ಹಸಿರು= ಗಿಳಿಯಸಿರು
ಕ್ಷೀರದಂತೆ+ಸಾಗರ=ಕ್ಷೀರಸಾಗರ
ಹಾಲಿನಂತೆ + ಕಡಲು=ಹಾಲ್ಗಡಲು
ಚರಣಗಳು+ಕಮಲ=ಚರಣಕಮಲ
ಅಡಿಗಳು+ತಾವರ= ಅಡಿದಾವರೆ
ನಿಯಮ-III ಪೂರ್ವೋತ್ತರ ಪದಗಳೆರದು ವಿಶೇಷಣಗಳಾಗಿದ್ದರೆ
ಉದಾ ಶೀತವೂ+ಉಷ್ಣವೂ=ಶೀತೋಷ್ಣವೂ
ಹುಳಿಯ+ಮಧುರ=ಹುಳಿಮಧುರ
ಹಿರಿದು+ಕಿರಿದು=ಹಿರಿಕಿರಿದು
ನಿಯಮ-IV: ಪೂರ್ವ ಪದವೂ "ಏ" ಅಕ್ಷರದಿಂದ ಕೂಡಿರುವುದು
ಉದಾ: ಫಲವೇ+ಆಹಾರ=ಫಲಹಾರ
ಸುಃಖವೇ+ಜೀವನ=ಸುಃಖಜೀವನ
ಕೋಪವೇ+ಅನಲು=ಕಾನಲ
ವಿದ್ಯೆಯೇ+ಅರ್ಥಿ=ವಿಧ್ಯಾರ್ಥಿ
ಶಾಂತಿಯೇ+ಸಾಗರ=ಶಾಂತಿಸಾಗರ ( ಫೆಸಿಫಿಕ್ ಸಾಗರ)
ಮನವೇ+ಮರ್ಕಟ=ಮನೋಮರ್ಕಟ
ದ್ವಿಗು ಸಮಾಸ
ಪೂರ್ವ ಪದ ಸಂಖ್ಯಾಸೂಚಕ ಮತ್ತು ಉತ್ತರ ಪದ ನಾಮಪದ ವಾಗಿರುವುದು
ಉದಾ: ಎರಡು+ಮುಡಿ=ಇರ್ಮುಡಿ
ಮೂರು+ಕಣ್ಣ=ಮುಕ್ಕಣ್ಣ
ನಾಲ್ಕು+ಮಡಿ=ನಾಲ್ವಡಿ
ಎರಡು + ಕೆಲ =ಇಕ್ಕೆಲ
ಎರಡು+ಬದಿ=ಇಬ್ಬದಿ
ಮೂರು+ಬಟ್ಟೆ=ಮೂವಟ್ಟೆ
ಎರಡು + ತಂಡ=ಇತ್ತಂಡ
ನೂರೊ+ಮಡಿ=ನೂರ್ಮಡಿ
ದಶ+ಅವತಾರ=ದಶಾವತಾರ
ದಶ+ಆನನ= ದಶಾನನಾ
ಪಂಚ+ಇಂದ್ರೀಯ=ಪಂಚೇಂದ್ರಿಯಾ
ಮೂರು+ಗಾವುರ=ಮುರಾವುರ
ಐದು+ಮುಡಿ=ಐವಡಿ
ಅಂಶೀ ಸಮಾಸ: ಅಥವಾ ಅವ್ಯಯ ಸಮಾಸ
ಪೂರ್ವ ಪದವೂ ಸಮಸ್ತ(ಪೂರ್ಣ)ವಸ್ತುವನ್ನು ಮತ್ತು ಉತ್ತರ ಪದ ಅದರ ಭಾಗವನ್ನು ಸೂಚಿಸಿವುದು
ಉದಾ: ತಲೆಯ+ಮುಂದೆ=ಮುಂದಲೆ
ಮೆದುಳು+ಮುಂದೆ=ಮುಮೆದುಳು
ಕಾಲು+ಮುಂದೆ=ಮುಂಗಾಲು
ಬೆಟ್ಟದ+ತುದಿ=ತುದಿಬೆಟ್ಟ
ಪೂರ್ವೋತ್ತರ ಪದಗಲ ಸ್ಥಾನಪಲ್ಲಟಗೊಳ್ಳವುದು
ಉದಾ: ಮೂಗಿನ+ತುದಿ=ತುದಿಮೂಗು
ಕೈ+ಅಡಿ+ಅಂಗೈ
ಕಾಲಿನ+ಅಡಿ=ಅಡಿಗಾಲು
ರಾತ್ರಿಯ+ಮದ್ಯೆ=ಮದ್ಯರಾತ್ರಿ
ಕಣ್ಣಿನ+ಕಡೆಗೆ=ಕಡೆಗಣ್ಣು
ದ್ವಂದ್ವ ಸಮಾಸ : ಎಲ್ಲಾ ಪದಗಳ ಅರ್ಥವೂ ಪ್ರಧಾನವಾಗಿರುವುದು
ಉದಾ: ರಾಮ+ಲಕ್ಷ್ಮಣ +ಸೀತೆ=ರಾಮಲಕ್ಷ್ಮಣಸೀತೆಯರು
ಕೆರೆಯೂ+ಬಾವಿಯೂ+ಕಟ್ಟೆಯೂ=ಕೆರೆಬಾವಿಕಟ್ಟೆಗಳು
ಕೃಷ್ಣನು+ಅರ್ಜುನನು=ಕೃಷ್ಣಾರ್ಜುನರು
ತಂದೆಯೂ+ತಾಯಿಯರು= ತಂದೆ ತಾಯಿಯರು
ಧನವೂ+ಧಾನ್ಯವೂ=ಧನಧಾನ್ಯವೂ
ನಕುಲರು+ಸಹದೇವರು=ನಕುಲಸಹದೇವರು
ಬಹುರ್ವೀಹಿ ಸಮಾಸ: ಅನ್ಯಪ್ರಧಾನಾರ್ಥ ಕೊಡುವ ಸಮಾಸ
ಉದಾ: ಮೂರು+ಕಣ್ಣುಳ್ಳವನೂ ಯಾವನೋ=ಮುಕ್ಕಣ್ಣ (ಶಿವ)
ಹಣೆಯಲ್ಲಿ+ಕಣ್ಣುಳ್ಳವನೂ ಯಾವನೋ=ಹಣೆಗಣ್ಣ(ಶಿವ)
ನಿಡಿದಾದ+ಮೂಗುಳ್ಳವಳು=ನಿಡಿಮೂಗು
ಕಡಿದು+ಚಾಗವುಳ್ಳವುನು=ಕಡುಚಾಗಿ(ಕರ್ಣ)
ಛಲವೂ+ಅಧಿಯಲ್ಲಿ=ಛಲವಾಧಿಯಲ್ಲಿ(ದುರ್ಯೋಧನ)
ಅರ್ಧ+ಅಂಗವುಳ್ಳವಳು=ಅರ್ದಾಂಗಿ
ನಾಲ್ಕು+ಮುಖವುಳ್ಳವನು=ನಾಲ್ಮುಗ(ಬ್ರಹ್ಮ)
ಕ್ರಿಯಾ ಸಮಾಸ :ಪೂರ್ವ ಪದವೂ ದಾತುವನ್ನು (ಯಾವುದೆ ವಿಭಕ್ತಿ ಪ್ರತೇಯವನ್ನು)
ಉತ್ತರ ಪದವೂ ಕ್ರಿಯೆಯನ್ನು ಸೂಚಿಸುವುದು
ಉದಾ; ವಿಷವನ್ನು+ಕಾರು=ವಿಷಕಾರು
ಕೈಯನ್ನು+ಮುಗಿ=ಕೈಮುಗಿ
ಬಿಲ್ಲನ್ನು+ಎತ್ತು=ಬಿಲ್ಲೆತ್ತು
ತಲೆಯನ್ನು+ಕೆಡವು=ತಲೆಗೆಡುವು
ನೀರಿನಿಂದ ಕೂಡೂ+ನೀರ್ಗೂಡು
ತಪದಲ್ಲಿ+ಇರು=ತಪವಿರು
ಗಮಕ ಸಮಾಸ ಅಥವಾ ಕರ್ಮಧಾರಯ ಸಮಾಸದ ಪ್ರಬೇದ ಅಥವಾ ಪ್ರಕಾರ
ಕೇಶಿರಾಜನ ಪ್ರಕಾರ ಇದು ಕನ್ನಡದ ಒಂದು ಅಸಾದರಣ ಲಕ್ಷಣಗಳ್ಳಿ ಒಂದು
ಉದಾ: ಅವನು+ಹುಡುಗ=ಆ ಹುಡುಗ
ಅವಳು + ಹುಡುಗಿ= ಅ ಹುಡುಗಿ
ಅದು+ಮರ=ಆ ಮರ
ಇದು + ಮರ = ಈ ಮರ
ಇದು + ಶಾಲೆ = ಈ ಶಾಲೆ

ಕ್ರಿಯಾ ಪದ
ವಾಕ್ಯದಲ್ಲಿ ಕತೃವಿನ ಕ್ರಿಯೆಯನ್ನು ಸೂಚಿಸುವ ಪದವನ್ನು ಕ್ರಿಯಾ ಅದ ಎನ್ನುತ್ತಾರೆ
ಈ ಕ್ರಿಯಾ ಪದವೂ ಮೂಲರೂಪವನ್ನು ಧಾತು
ಅಥವಾ ಕ್ರಿಯಾ ಪ್ರಕೃತಿ ಎನ್ನುತ್ತೇವೆ.
ಉದಾ: ತಿನ್ನು, ಬರೆ, ಹಾಡು, ನೋಡು, ನೀಡು ಇತ್ಯಾದಿ
ಕ್ರಿಯೆಯೂ ಕೆಲೆವೂ ಪ್ರತ್ಯೇಯಗಳನ್ನು ಪಡೆಯುವದರ ಮೂಲಕ ಕ್ರಿಯಾ
ಪದವಾಗಿ ಸಿದ್ಧಗೊಳ್ಳುತ್ತದೆ.
ಉದಾ: ಹೋಗುತ್ತಾನೆ, ತಿನ್ನುತ್ತಾನೆ, ಬರೆದನು, ನೀಡುತ್ತೇನೆ,
ಹಾಡುತ್ತೇನೆ, ನಗುತ್ತೇನೆ ಇತ್ಯಾದಿ.
ಕ್ರಿಯಾ ಪ್ರಕೃತಿ ಅಥವಾ ಧಾತುಗಳಲ್ಲಿ ಎರಡು (2) ಪ್ರಕಾರಗಳು
1. ಸಹಜ ಧಾತು 2 ಸಾಧಿತ ಧಾತು
1. ಸಹಜ ಧಾತು : ಕ್ರಿಯಾ ಪದವೂ ಮೂಲದಿಂದಲೂ ಸಹಜವಾಗಿ
ಬಳಕೆಗೊಳ್ಳುವುದು
ಉದಾ: ತಿನ್ನು, ಬರೆ, ಹಾಡು, ನೋಡು, ನೀಡು ಇತ್ಯಾದಿ
2. ಸಾಧಿತ ಧಾತು: ನಾಮ ಪ್ರಕೃತಿಯು ಪ್ರತ್ಯೇಯವನ್ನು ಪಡೆಯುವುದು.
ಪ್ರೇರಣಾರ್ಥದಲ್ಲಿ ಇನ್ನೊಂದು ಧಾತುವಾಗಿ ಸಿದ್ಧಗೊಳ್ಳುವುದು
ಅಥವಾ ಅನುಕರಣ ವ್ಯಯಗಳ ("ಇಸು" ಪ್ರಧಾನ) ಪ್ರತ್ಯೇಯವನ್ನು ಪ
ಡೆದು ಸಿದ್ಧಗೊಳ್ಳುವುದೇ ಸಾಧಿತ ಧಾತು
ಉದಾ: ಭಾವ+ ಇಸು=ಭಾವಿಸು
ಕನ್ನಡ + ಇಸು= ಕನ್ನಡಿಸು
ತರ್ಕ+ಇಸು=ತರ್ಕಿಸು
ಪ್ರೀತಿ+ಇಸು=ಪ್ರೀತಿಸು
ಸಾಧನೆ+ಇಸು=ಸಾಧಿಸು
ರಕ್ಷ+ಇಸು= ರಕ್ಷಿಸು
ಕುಣಿ+ಇಸು=ಕುಣಿಸು
ತಿನ್ನು+ಇಸು=ತಿನ್ನಿಸು
ಬರೆ+ಇಸು+ಬರೆಯಿಸು
ಅನುಕರಣ
ಉದಾ: ಥಳಥಳ+ಇಸು = ಥಳಥಳಿಸು
ಗುಡುಗು+ಇಸು=ಗುಡುಗಿಸು
ಕ್ರಿಯಾ ರೂಪಗಳು
ಒಂದು ಕ್ರಿಯಾ ಪದವೂ ರೂಪದಲ್ಲಿ ಎಂಬ ಆಧಾರದಲ್ಲಿ
2 ಪ್ರಕಾರವಾಗಿ ವಿಂಗಡಿಸಲಾಗಿದೆ
1. ಕಾಲರೂಪ ಕ್ರಿಯಾ ಪದ: 2. ಅರ್ಥ ರೂಪ ಕ್ರಿಯಾ ಪದ
1. ಕಾಲರೂಪ ಕ್ರಿಯಾ ಪದ: ಇದರಲ್ಲಿ 3 ಅಂಶಗಳನ್ನು ಪ್ರಕಟ ಪಡಿಸುತ್ತದೆ.
1. ಕ್ರಿಯೆಯ ಬಗ್ಗೆ 2 ಕ್ರಿಯೆ ನಡೆದ ಕಾಲದ ಬಗ್ಗೆ ಮತ್ತು. 3.ಕ್ರಿಯೆಗೆ
ಸಂಬಂದಿಸಿದ ಕತೃವಿನ ಲಿಂಗ, ವಚನ, ಸರ್ವ ನಾಮಗಳ ಬಗ್ಗೆ
ಮೇಲಿನ ಮೂರು ಅಂಶಗಳು ವ್ಯಾಕರಣದ ನಿಯಮದಂತೆಯೇ ಸೇರುತ್ತವೆ:
ಉದಾ: ಬರೆ+ಉತ್ತ್+ಏನೆ=ಬರೆಯುತ್ತೇನೆ
ಬರೆ+ಉತ್ತ್+ಆಳೆ=ಬರೆಯುತ್ತಾಳೆ
ಕಾಲ ಸೂಚಕ ಪ್ರತ್ಯೇಯಗಳು : ಕ್ರಿಯೇ ನಡೆದ ಕಾಲವನ್ನು ಸೂಚಿಸುವ ಪ್ರತ್ಯೇಯ
ಕನ್ನಡದಲ್ಲಿ ಮೂರು ಪ್ರಕಾರಗಳಿವೆ
ಹೊಸಗನ್ನಡ ಹಳಗನ್ನಡ
ವರ್ತಮಾನ ಕಾಲ ಉತ್ತ ದಪ
ಭೂತಕಾಲ ದ ದ
ಭವಿಷ್ಯತ್ ಕಾಲ ಉವ/ವ ವ
ಪುರುಷ
ವರ್ತಮಾನ ಕಾಲ
ಭೂತ ಕಾಲ
ಭವಿಷ್ಯತ್ಕಾಲ
ಏಕ ವಚನ
ಬಹು ವಚನ
ಏಕ ವಚನ
ಬಹು ವಚನ
ಏಕವಚನ
ಬಹು ವಚನ
ಉತ್ತಮ
ಏನೆ
ಏವೆ
ಏನು
ಏ ಉ
ಎನ್ನು
ಎ ವು
ಬರೆಯುತ್ತೇನೆ
ಬರೆಯುತ್ತೇವೆ
ಬರೆದನು
ಬರೆದೆವು
ಬರೆವನು
ಬರೆಯುವೆವು
ಮಧ್ಯಮ
ಇ ಯ
ಇರಿ

ಇರಿ

ಇರಿ
ಬರೆಯುತ್ತೀಯ
ಬರೆಯುತ್ತಿರಿ
ಬರೆದೆ
ಬರೆದಿರಿ
ಬರೆಯೆ
ಬರೆಯುವಿರಿ
ಪ್ರಥಮ

ಪುಲ್ಲಿಂಗ
ಆನೆ
ಅರೆ
ಅವು
ಅರು
ಅನು
ಅದು
ಬರೆವನು
ಬರಿಯಿರು
ಬರೆವನು
ಬರೆವುದು
ಬರೆವನು
ಬರೆಯನು
ಸ್ತ್ರೀ ಲಿಂಗ
ಅಳೆ
ಅರೆ
ಅಳು
ಅದು
ಅಳು
ಅರು
ಬರೆಯಳು
ಬರೆಯರು
ಬರೆಯಳು
ಬರೆಯದು
ಬರೆಯಳು
ಬರೆವರು
ನಪುಂಸಕ ಲಿಂಗ
ಅದೆ
ಅವೆ
ಇತು
ಅವು
ಅದು
ಅವು


ನಿಯಮ-1. ಕೆಲವೂ :ಉ:ಕಾರಾಂತ ಧಾತುಗಳು ಭೂತಕಾಲದಲ್ಲಿ "ಇ"ಕಾರಾಂತ ವಾಗಿ
ಮಾರ್ಪಟ್ಟು ಕಾಲವಾಚ ಪ್ರತ್ಯೇಯ ಮತ್ತು ಅಖ್ಯಾತ
ಪ್ರತೇಯವನ್ನು ಪಡೆಯುತ್ತವೆ.
ನಿಯಮ-2. ಕೆಲವು ಧಾತುಗಳು ಭೂತಕಾಲದಲ್ಲಿ ವಿಕಾರಗೊಳ್ಳುತ್ತವೆ
ಉದಾ: ನಗು----ನಕ್ಕ
ತಿನ್ನು---ತಿಂದ
ಕೆಡು---ಕೆಟ್ಟ
ಪಡು--ಪಟ್ಟ
ನಿಯಮ 3. ಭೂತಕಾಲದ ನಪುಂಸಕ ಲಿಂಗ ಏಕವಚನದಲ್ಲಿ ಧಾತು ನೇರವಾಗಿ ಅಖ್ಯಾತ
ಪ್ರತ್ಯೇಯವಾಗಿ ಪಡೆಯುತ್ತದೆ.
ಉದಾ: ಮಾಡಿತ್ತು---ಮಾಡು
ನೋದಿತ್ತು---ನೋಡು
ಅರ್ಥ ರೂಪ ಕ್ರಿಯಾ ಪದ
ಕ್ರಿಯಾ ಪದವೂ ಕಾಲರೂಪವನ್ನಲ್ಲದೆ ಅರ್ಥ ರೂಪವನ್ನು ಹೊಂದುತ್ತದೆ.
ಇಲ್ಲಿ ಕ್ರಿಯಾ ಪದದ ಅರ್ಥವೆ ಪ್ರಧಾನವಾಗಿರುತ್ತದೆ.
ಮತ್ತು ಇದು ಆಜ್ನೆ, ಆರೈಕೆ, ಕೋರಿಕೆ, ನಿಷೇಧ, ಸಂಭವ ಇತ್ಯಾದಿ ಅರ್ಥಗಳನ್ನು
ತಿಳಿಸಲು ಬಳಕೆಯಾಗುತ್ತದೆ. ಮತ್ತು ಧಾತುಗೆ
ನೇರವಾಗಿ ಅಖ್ಯಾತ ಪ್ರತ್ಯೇಯ ಬಂದು ಸೇರುತ್ತದೆ. ಇದರಲ್ಲಿ 3 ಪ್ರಕಾರಗಳು
ವಿಧಿ/ವಿಧ್ಯಾರ್ಥ ರೂಪ:ಆಜ್ನೆ, ಅರೈಕೆ, ಅಪ್ಪಣೆ, ವಿಜ್ನಾಪನೆ ಅಥವಾ
ಅಶೀರ್ವಾದ ಈ ಅರ್ಥಗಳನ್ನು ಹೇಳಿವ ಕ್ರಿಯಾ ಪದ
ನಿಷೇಧಾರ್ಥಕ: ಕ್ರಿಯೇ ನಡೆಯಲಿಲ್ಲ/ ನಡೆಯುವುದಿಲ್ಲ/ ಎಂಬ
ಅರ್ಥವನ್ನು ಕೊಡುವುದು
ಸಂಭವಾರ್ಥ ರೂಪ ಕ್ರಿಯಾಪದ : ಕ್ರಿಯೆ ನಡೆಯುವದರಲ್ಲಿ ಸಂಶಯ
ಇರುವಾಗ ನಡೆಯಬೇಕೆಂದು ಊಹಿಸಿವುದಕ್ಕೆ
ಸಂಭವಾರ್ಥ ಎನ್ನುತ್ತೇವೆ.
ಪುರುಷ
ವಿಧಿ ರೂಪ
ನಿಷೇದಾರ್ಥ
ಸಂಭವಾರ್ಥ
ಏಕ ವಚನ
ಬಹು ವಚನ
ಏಕ ವಚನ
ಬಹು ವಚನ
ಏಕ ವಚನ
ಬಹು ವಚನ
ಉತ್ತಮ

ಕೊಲ್ಲುವೆ
ಓ ಣ
ಕೊಲ್ಲೋಣ
ಏನು
ಬರೆಯನು
ಏವು
ಬರೆಯುವೆ
ಏನು
ನಕ್ಕೆನು

ಏವು
ನಕ್ಕೆವು


ಮಧ್ಯಮ

ಕೊಲ್ಲು
ಇರಿ
ಕೊಲ್ಲಿರಿ

ಬರೆಯೆ
ಅರಿ
ಬರೆಯಿರು
ಈಯ
ನಕ್ಕೀಯಾ
ಇರಿ
ನಕ್ಕಿರಿ
ಪ್ರಥಮ






ಪುಲ್ಲಿಂಗ
ಅಲ್ಲಿ
ಕೊಲ್ಲಲಿ
ಅರಿ
ಕೊಲ್ಲಿರಿ
ಅನು
ಬರೆಯನು
ಅರು
ಬರೆಯದು
ಅನು
ನಕ್ಕಾನು
ಅರು
ನಕ್ಕಾರು
ಸ್ತ್ರೀ ಲಿಂಗ






ನ. ಲಿಂಗ







ಪ್ರಸ್ತಾರ ಹಾಕುವುದು
ಹ್ರಸ್ವಸ್ವರ ಮತ್ತು ಹ್ರಸ್ವಸ್ವರದಿಂದ ಕೂಡಿದ ಅಕ್ಷರ : ಲಘು (U) ಎಂದು
ಪರಿಗಣಿಸಬೇಕು
ದೀರ್ಘಸ್ವರ, ದೀರ್ಘಸ್ವರದಿಂದ ಕೂಡಿದ, ಒತ್ತಕ್ಷರದ ಹಿಂದಿನ, ಅನುಸ್ವಾರ ಮತ್ತು
ವಿಸರ್ಗ ಅಕ್ಷರಗಳನ್ನು ಗುರು (-) ಎಂದು ಪರಿಗಣಿಸಬೇಕು
"ಗುರು" ವಾಗಲು ಹಲವಾರು ಕಾರಣಗಳಿದ್ದರು ಅದನ್ನು ಒಂದೆ ಗುರುವೆಂದು ಪರಿಗಣಿಸಬೇಕು
ಉದಾ: ಕಾಂಗ್ರೇಸ್ ಕಾಂ(-) ಗ್ರೇ( U ) ಸ್ ( U )

25.03.2011
ಅವ್ಯಯಗಳು :(ಬದಲಾಗದೆ ಇರುವುದು)
ನಾಮ ಪ್ರಕೃತಿ ಮತ್ತು ಧಾತು ಅಥವಾ ಕ್ರಿಯಾ ಪ್ರಕೃತಿಗಳು ಪ್ರತ್ಯೇಗಳನ್ನು
ಪಡೆಯುವದರ ಮೂಲಕ ತನ್ನ ರೂಮಪವನ್ನು ಬದಲಿಸಿಕೊಳ್ಳುತ್ತವೆ
ಹೀಗೆ ನಾಮ ಪ್ರಕೃತಿ ಮತ್ತು ಕ್ರಿಯಾ ಪ್ರಕೃತಿಗಳಂತೆ ಲಿಂಗ, ವಚನ,
ಕಾಲಕ್ಕನುಗುಣವಾಗಿ ಯಾವ ರೂಪ ಭಾವ ಹೊಂದದೆ ಏಕರೂಪವಾಗಿರುವ ಶಬ್ದಗಳನ್ನು
ಅವ್ಯಗಳನ್ನುತ್ತಾರೆ
ಪ್ರಕಾರಗಳು
1. ಸಾಮಾನ್ಯ ಅವ್ಯಗಳು
2. ಅನುಕರಣ ಅವ್ಯಗಳು
3. ಕ್ರಿಯಾರ್ಥ ಅವ್ಯಗಳು
4. ಭಾವ ಸೂಚಕ ಅವ್ಯಗಳು
5. ಸಂಬಂಧ ಸೂಚಕ ಅವ್ಯಯಗಳು
6. ಅವಧಾರಣಾರ್ಥಕ
7. ಕೃದ್ಧಾಂತ ಅವ್ಯಯ
8. ತದ್ಧಿತಾಂತ ಅವ್ಯಗಳು
1.ಸಾಮಾನ್ಯ ಅವ್ಯಗಳು :
ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳುವಂತೆ ಅವ್ಯಗಳಿಗೆ
ಸಾಮಾನ್ಯ ಅವ್ಯಗಳೆನ್ನುತ್ತಾರೆ ಇವು ಕ್ರಿಯಾ ವಿಶೇಷಣಗಾಳಿರುತ್ತವೆ.
ಉದಾ: ಸುಮ್ಮನೆ, ಬೇಗನೆ, ತಟ್ಟನೆ, ಚೆನ್ನಾಗಿ, ನೆಟ್ಟಗೆ ಇತ್ಯಾದಿ.
2. ಅನುಕರಣ ಅವ್ಯಗಳು
ಅರ್ಥವಿಲ್ಲದ ದ್ವನಿ ವಿಶೇಷಣಗಳನ್ನು ತಾನು ಹೇಳಿದಂತೆ ಮತ್ತೆ ಮತ್ತೆ
ಅನುಕರಿಸಿ ಹೇಳುವುದನ್ನು ಅನುಕರಣ ಅವ್ಯಗಳನ್ನುತ್ತೇವೆ.
ಉದಾ: ರಪ ರಪ, ಗುಡುಗುಡು, ಸರ ಸರ, ಚುರು ಚುರು, ಘಮ ಘಮ ಗಳಗಳ ಇತ್ಯಾದಿ
3.ಕ್ರಿಯಾರ್ಥಕ ಅವ್ಯಗಳು
ಉದಾ: ಹೌದು ಹೌದು, ಇಲ್ಲ ಇಲ್ಲ, ಬೇಡ ಬೇಡ, ಸಾಕುಸಾಕು ಇತ್ಯಾದಿ
4. ಭಾವಸೂಚಕ ಅವ್ಯಗಳು:
ಮನಸ್ಸಿನಲ್ಲಿ ಉಂಟಾಗುವ ಭಿನ್ನ ಬಗೆಯ ಭಾವಗಳಾದ ಹರ್ಷ, ಸಂಭ್ರಮ, ಗಾಬರಿ,
ತಿರಸ್ಕಾರ, ತೊಂದರೆ ಇಂತಹ ಭಾವನೆಗಳನ್ನು ಅಭಿವ್ಯಕ್ತಿಸುವಾಗ
ಕೆಲವು ಅರ್ಥವಿಲ್ಲದ ಪದಗಳನ್ನು ಉಪಯೋಗಿಸುತ್ತೇವೆ ಇವುಗಳಿಗೆ ಭಾವಸೂಚಕ
ಅವ್ಯಗಳನ್ನುತ್ತೇವೆ.
ಉದಾ: ಅಹಾ!. ಅಭ್ಬಾ!, ಛೇ!. ಥೂ, ಭಲೇ!, ಶಬ್ಭಾಷ್, ಮತ್ತು ಅರೇ ಇತ್ಯಾದಿ
5. ಸಂಭಂದ ಸೂಚಕ ಅವ್ಯಗಳು:
ಎರಡು ಪದಗಳು ಇಲ್ಲವೇ ಎರಡು ವಾಕ್ಯಗಳನ್ನು ಜೋಡಿಸುವ ಶಬ್ಧಗಳಿಗೆ ಸಂಭಂದ
ಸೂಚಕ ಅವ್ಯಗಳೆನ್ನುತ್ತೇವೆ
ಉದಾ: ಆದರೆ, ಮತ್ತು. ಹಾಗು, ಅಥವಾ. ಇಲ್ಲವೆ ಅದುದ್ದರಿಂದ, ಇತ್ಯಾದ್ದಿ.
6. ಅವಧಾರಣಾರ್ಥಕ ಅವ್ಯಗಳು
ಒಂದು ನಿಶ್ಚಿಥ ಭಾವವನ್ನು ಹೇಳುವುದಕ್ಕಾಗಿ ಅವಧರಣೆಯ "ಏ" ಸ್ವರವನ್ನು
ಪೆಡೆದುಕೊಂಡು ಪದವೂ
ಅವಧರಣಾರ್ಥಕ ಅವ್ಯಯವಾಗಿ ಸಿದ್ಧಗೊಳ್ಳುತ್ತದೆ
ಉದಾ: ನೀವೇ, ರಾಮನೇ, ಕಾಯಕವೇ, ನನ್ನದೇ.

ದ್ವಿರುಕ್ತಿ :
ಒಂದು ವಿಶೇಷ ಅರ್ಥವನ್ನು ಅಭಿವ್ಯಕ್ತಿಸುವುದಕ್ಕಾಗಿ ಒಂದು ಪದ ಅಥವ
ಒಂದು ವಾಕ್ಯವನ್ನು ಎರಡೆರಡೂ ಬಾರಿ
ಬಳಸುವುದನ್ನು ದ್ವಿರುಕ್ತಿ ಎನ್ನುತ್ತೇವೆ.
ಉದಾ: ಹೌದು ಹೌದು, ನಿಲ್ಲುನಿಲ್ಲು ಎಲೇ ಎಲೇ, ಕಳ್ಳ ಕಳ್ಳ, ಅಗೋ ಅಗೋ,
ಬನ್ನಿ ಬನ್ನಿ, ಹತ್ತಿರ ಹತ್ತಿರ, ಅಬ್ಬಬ್ಬಾ ಬೇಡ ಬೇಡ, ಇತ್ಯಾದಿ
ಜೋಡಿ ನುಡು (ಜೋಡು ನುಡಿ)
ಕನ್ನಡದಲ್ಲಿ ದ್ವಿರುಕ್ತಿಗಳಂತೆ ಕಾಣುವ ಎಷ್ಟೋ ಪದಗಳಿವೆ ಆದರೆ ಅವುಗಳು
ದ್ವಿರುಕ್ತಿಗಳಲ್ಲ ಏಕೆಂದರೆ ಪೂರ್ವ ಪದಕ್ಕೆ ಅರ್ಥವಿದ್ದು
ಉತ್ತರ ಪದಕ್ಕೆ ಅರ್ಥವಿದುವುದಿಲ್ಲ ಆದರೂ ಜೊತೆ ಜೊತೆಯಾಗಿ ಉಚ್ಛರಿಸಲ್ಪಡುತ್ತವೆ
ಉದಾ: ದೇವರು ದಿಂಡಿರು,
ಕೂಲಿನಾಲಿ
ಬಟ್ಟೆ ಬರೆ
ಸಂಧಿ ಗೊಂಧಿ
ಒಂದೇ ಅರ್ಥ ಕೊಡುವ ಎರದು ಬಿನ್ನ ಭಾಷಾ ಪದಗಳು ಜೊತೆ ಜೊತೆಯಾಗಿ
ಬಳಕೆಗೊಂಡರೆ ಅದನ್ನೂ ಜೋಡು ನುಡಿ ಎನ್ನುತ್ತಾರೆ
ಉದಾ: ಕಡೆ ಲಾಸ್ಟ್
ಕ್ಯಾಚ್ ಇಡಿ
ಸಂತೆಬಜಾರ್
ಗೇಟ್ಬಾಗಿಲು
ಕಾಂಪೌಂಡ್ ಗೋಡೆ
ದ್ವಾರಬಾಗಿಲು
ಆಕಳಗೋಮೂತ್ರ
ಹಣ್ಣು ಹಂಪಲು
ಹಳದಿಪೀತಾಂಬರ
ಸಂಪೂರ್ಣ ವಿರುದ್ಧಾರ್ಥ ಕೊಡುವ ಪದಗಳು
ಉದಾ: ಪಶುಪಕ್ಷಿ
ಮನೆ ಮಠ
ತಂದೆ ತಾಯಿ
ಹಗಲು ರಾತ್ರಿ
ಆಟಪಾಠ ಇತ್ಯಾದಿ
ಪ್ರತಿ ಎರಡನೇ ಅಕ್ಷರ "ಗೀ" ಪದದಿಂದ ರೂಪುಗೊಳ್ಳುವುದು
ಉದಾ: ನಗು ಗಿಗು
ಬುದ್ದಿ ಗಿದ್ದಿ
ರೊಕ್ಕಗಿಕ್ಕ
ನೋವು ಗೀವು
ಶಾಲೆಗೀಲೆ
ಮಾತುಗೀತು
ನುಡಿಗಟ್ಟುಗಳು/ ಪಡೆನುಡಿ
ಅಡ್ದಹಾದಿ ಇಡಿ - ರೀತಿಬಿಟ್ಟು ನಡೆ
ಅಡ್ದಗಾಲು ಹಾಕಿ - ಅಡೆತಡೆ ಮಾಡು
ಅಕಾಶ ಕಳಕೊಂಡೂ ಬೀಳು - ಏನು ತಿಳಿಯಾದಂತಾಗು
ಉಂಡ ಮನೆಗಳ ಎಣಿಸು - ಉಪಕಾರ ಮಾಡಿದವನಿಗೆ ಅಪಕಾರ ಮಾಡು
ಕಣ್ಣಿಡು - ಮನಸ್ಸು ಮಾಡು
ಕಾಲು ಕೆದರು - ಜಗಳ ತೆಗೆ
ಕಾಲಮೇಲೆ ನಿಲ್ಲು - ಸ್ವಾವಲಂಬಿಯಾಗು
ಕಾಲು ಇಡಿ - ಶರಣಾಗು
ಕಿವಿ ಕಚ್ಚು - ಚಾಡಿಹೇಳು
ಕೈ ಕೊಡು - ಮೋಸಮಾಡು/ನೆರವಾಗಿ/ಸಹಾಯಮಾಡು
ಕೆಂಡಕಾರು - ದ್ವೇಷ್ಮ ಮಾಡು/ಸಿಟ್ಟಾಗು
ಕೈಯಲ್ಲಿ ಕಡ್ಡಿ ಕೊಟ್ಟು ಹೇಳು - ಪರಿ ಪರಿಯಿಂದ ಹೇಳು
ಕೈ ನೋಡು - ಬಲ ಪರೀಕ್ಷಿಸು
ಕೈ ಮೇಲೆ ಕೈ ಹಾಕು - ವಚನಕೊಡು
ಕೈ ತೊಳಕೊಂಡು ಬೆನ್ನು ಹತ್ತು - ಗಂಟು ಬೀಳು
ಕೈ ಗೂ ಬಾಯಿಗೂ ಜಗಳ ಹಚ್ಚು - ಊಟ ಮಾಡು
ಕೈ ಚಾಚು - ಬೇಡು
ಕೈಯಾಸೆ ಮಾಡು - ಲಂಚ ನೀಡು
ಗಾಳಿಗೆ ತೂರು - ತಿರಸ್ಕರಿಸು
ಗಿಳಿಓದು - ಅರ್ಥ ತಿಳಿಯದೆ ಓದು
ಗುಟ್ಟು ರಟ್ಟು ಮಾಡು - ಗುಪ್ತ ಸಂಗತಿ ಬಯಲು ಮಾಡು
ಗುಡ್ಡಕ್ಕೆ ಕಲ್ಲು ಹೊರು - ವ್ಯರ್ಥ ಪ್ರಯತ್ನ ಮಾಡು
ಟೊಪ್ಪಿ ಹಾಕು - ಮೋಸ ಮಾಡು
ಟೊಂಕ ಕಟ್ಟು - ಸಿದ್ಧವಾಗು
ತಲೆದೂಗು - ಒಪ್ಪಿಗೆ ಕೊಡು/ಮೆಚ್ಚಿಗೆ ಕೊಡು
ಹೊಟ್ಟೆಯಲ್ಲಿ ಹಾಕಿಕೋ - ಕ್ಷಮಿಸು
ತಲೆ ಜಾಡಿಸು - ಕ್ಷಮಿಸು
ಬೆನ್ನು ತಟ್ಟು - ಹುರುಪು ಕೊಡು
ಮೂಲೆ ಗುಂಪಾಗು - ಕೆಲಸಕ್ಕೆ ಬಾರದಂತೆ
ಶಿಸ್ತಿನ ಸಿಪಾಯಿ - ದಕ್ಷ/ಸಮರ್ಥ
ಬೆತ್ತದ ರುಚಿ ನೋಡು - ಶಿಕ್ಷಿಸು
ಗಂಟಲು ಬಿಗಿ - ಅತೀವ ದುಃಖ
ಮೂಗಿಗೆ ತುಪ್ಪ ಹಚ್ಚು - ಆಸೆ ತೋರಿಸು
ಮುಖದ ನೀರಿಳಿಸು - ಅವಮಾನಗೊಳಿಸು
ಹಣ್ಣಾಗು - ಅನುಭವಿಯಾಗು
ನೆಗೆದು ಬೀಳು - ಸಾಯುವುದು
ಕೈ ಕಚ್ಚು - ನಷ್ಟವಾಗು
ಕಟ್ಟಿಟ್ಟ ಬುತ್ತಿ - ಅನುಭವಿಸಲೇ ಬೇಕಾದ್ದು
ಹಿತ್ತಾಳೆ ಕಿವಿ - ಚಾಡಿಮಾತು ಕೇಳುವವ
ಅಳಿಲು ಸೇವೆ - ನಿಷ್ಟೆ ತುಂಬಿದ ಅಲ್ಪ ಸೇವೆ
ಅತ್ತಿದ ಕೈ - ಪ್ರವೀಣ
ಎರಡು ಬಗೆ - ದ್ರೋಹ ಚಿಂತನೆ
ಕಂಬಿ ಕೀಳು - ಓಡಿಹೋಗು
ಗಾಳ ಹಾಕು - ಪ್ರಲೋಭನೆ ಒಡ್ಡು
ಕೈ ಸುಡು - ನಷ್ಟವಾಗು
ತಿರುಕನ ಕನಸು - ನನಸಾಗದ ಇಚ್ಛೆ
25.03.2011
ಪ್ರಸ್ತಾರ ಹಾಕುವುದು
ಹ್ರಸ್ವಸ್ವರ ಮತ್ತು ಹ್ರಸ್ವಸ್ವರದಿಂದ ಕೂಡಿದ ಅಕ್ಷರ : ಲಘು (U) ಎಂದು
ಪರಿಗಣಿಸಬೇಕು
ದೀರ್ಘಸ್ವರ, ದೀರ್ಘಸ್ವರದಿಂದ ಕೂಡಿದ, ಒತ್ತಕ್ಷರದ ಹಿಂದಿನ, ಅನುಸ್ವಾರ ಮತ್ತು
ವಿಸರ್ಗ ಅಕ್ಷರಗಳನ್ನು ಗುರು (-) ಎಂದು ಪರಿಗಣಿಸಬೇಕು
"ಗುರು" ವಾಗಲು ಹಲವಾರು ಕಾರಣಗಳಿದ್ದರು ಅದನ್ನು ಒಂದೆ ಗುರುವೆಂದು ಪರಿಗಣಿಸಬೇಕು
ಉದಾ: ಕಾಂಗ್ರೇಸ್ ಕಾಂ(-) ಗ್ರೇ( U ) ಸ್ ( U )
ಸೂತ್ರ:
ಯಮಾತಾರಾಜಭಾನಸಲಗಂ
U
-
-

ಮಾ
ತಾ
-
-
-
ಮಾ
ತಾ
ರಾ
-
-
U
ತಾ
ರಾ

-
U
-
ರಾ

ಭಾ
U
-
U

ಭಾ

-
U
U
ಭಾ


U
U
U



U
U
-


ಗಂ
- - -
ಗುರು ಲಘು ಮೂರಿರೆ
ಮ ನ ಗಣ
U U U
- U U
ಗುರು ಲಘು ಮೊದಲಿರೆ
ಭ ಯ ಗಣ
U - -
U - U
ಗುರು ಲಘು ಮದ್ಯ ಬರಲು
ಜ ರ ಗಣ
- U -
U U -
ಗುರು ಲಘು ಕೊನೆ ಬರಲು
ಸ ತ ಗಣ
- - U
ಇದನ್ನು ಸುಲುಭವಾಗಿ ಜ್ನಾಪಕ ಇಟ್ಟುಕೊಳ್ಳಲು ಈ ಕೆಳಗಿನಂತೆ ಹೇಳಬಹುದು
ಮನ ಕ್ಕೆ ಭಯ ಬಂದು ಜರ ದಿಂದ ಸತ ಹೋದ
ಕೃದ್ಧಾಂತ ಅವ್ಯಯಗಳು : ಧಾತು ಕೆಲವು ನಾಮ ಪ್ರತ್ಯೇಯಗಳನ್ನು ಪಡೆಯುವುದರ ಮೋಲಕ
ನಾಮ ಪ್ರಕೃತಿಯಾಗಿ ರೂಪಗೊಳ್ಳುವುದನ್ನು ಕೃದ್ಧಾಂತ ಅವ್ಯಯ ಎನ್ನುತ್ತೇವೆ
" ಕೃತ್ " ಪ್ರತ್ಯೆಯವನ್ನು ಅಂತ್ಯವಾಗಿಸಿಕೊಂಡ ಪದವನ್ನು ಕೃದ್ಧಾಂತ ಪದ ಎನ್ನುತ್ತೇವೆ
ಉದಾ: ಬರೆ + ಉ ವ + ಅ = ಬರೆಯುವ
ಬರೆಯುವ + ಅವಳು = ಬರೆಯುವವಳು
ನೋಡು + ಉ ವ + ಅ = ನೋಡಿದ
ನೋಡೀದ + ಅನು = ನೋಡಿದನು
ಹೆದರು + ಇ ಕೆ = ಹೆದರಿಕೆ
ಇದರಲ್ಲಿ ಮೂರು ಪ್ರಕಾರಗಳು
1. ಕೃದ್ಧಾಂತ ನಾಮ 2. ಕೃದ್ಧಾಂತ ಭಾವ ನಾಮ 3. ಕೃದ್ಧಾಂತ ಅವ್ಯಗಳು

ಕೃದ್ಧಾಂತ ಭಾವ ನಾಮಗಳು :
ಧಾತುಗಳಿಗೆ ಕಾಲವಾಚಕ ಪ್ರತ್ಯೇಯಗ ಮತ್ತು ಕೃತ್ ಪ್ರತ್ಯೇಗಳು ಸೇರಿ ಕೃದ್ಧಾಂತವಾಗಿ ಮತ್ತು
ಪ್ರಥಮ ಪುರುಷದ ಯಾವುದಾದರೊಂದು ಸರ್ವ ನಾಮವನ್ನು ಸೇರಿಕೊಂಡು ಕೃದ್ಧಾಂತ ನಾಮವಾಗಿ ರೂಪುಗೊಳ್ಳುತ್ತದೆ
(ಧಾತು + ಕಾಲ ಸೂಶಕ + ಕೃತ್ + ಕೃದ್ಧಾಂತ + ಪ್ರಥಮ ಪುರುಷದ ಯಾವುದಾದರೊಂದು ಸರ್ವ ನಾಮ
ಉದಾ: : ತಿನ್ನು (ಧಾತು) + ವ ಕಾಲ ಸೂಚಕ) + ಅಅಳು ( ಪ್ರಥಮ ಪುರುಷದ ಸರ್ವ ನಾಮ) = ತಿನ್ನುವಳು
ತಿನ್ನು + ವ + ಅವನು =ತಿನ್ನುವನು ಭವಿಷ್ಯತ್ ಕಾಲ
ಮಾಡು + ವ + ಅವನು = ಮಾಡುವನು ಭವಿಷ್ಯತ್ ಕಾಲ
ಓದು + ಉ ವ + ಅ + ಅವಳು = ಓದುವಳು ಭವಿಷ್ಯತ್ ಕಾಲ
ನೋಡು + ಉ ವ + ಅ + ಅವಳು = ನೋಡುವಳು ಭವಿಷ್ಯತ್ ಕಾಲ
ತಿಳಿ + ದ + ಅ+ಅವನು= ತಿಳಿದವನು ಭೂತ ಕಾಲ
ಬಗೆ + ದ+ ಅ + ಅವಳು = ಬರೆದಳು ಭೂತಕಾಲ

ಕೃದ್ಧಾಂತ ಭಾವನಾಮ:
ಧಾತುವಿನಿಂದ ಹುಟ್ಟುವ ನಾಮ ಪ್ರಕೃತಿಗಳು ಭಾವಸೂಚಕವಾಗಿದ್ದರೆ ಕೃದ್ಧಾಂತ ಭಾವ ನಾಮ ಎನ್ನುತೇವೆ. ಅಥವಾ
ಒಂದು ಧಾತಿವಿಗೆ ಭಾವರ್ಥದಲ್ಲಿ ಕೃತ್ ಪ್ರತೇಯ ಸೇರಿಕೊಂಡರೆ ಅದನ್ನು ಕೃದ್ಧಾಂತ ಭಾವ ನಾಮ ಎನ್ನುತ್ತೇವೆ.
ಉದಾ: " ಇ ಕೆ " ಪ್ರತ್ಯೆಯ
ಅಂಜು+ಇಕೆ=ಅಂಜಿಕೆ
ನಂಬು + ಇಕೆ = ನಂಬಿಕೆ
ಬಾಳು + ಇಕೆ = ಬಾಳಿಕೆ
ಹೆದರು + ಇಕೆ = ಹೆದರಿಕೆ
ನಾಚು + ಇಕೆ = ನಾಚಿಕೆ
" ಇ " ಪ್ರತೇಯ
ಒಪ್ಪು + ಇಗೆ = ಒಪ್ಪಿಗೆ
ಮುತ್ತು + ಇಗೆ = ಮುತ್ತಿಗೆ
ಏಳು + ಇಗೆ = ಏಳೀಗೆ
ಏರು + ಇಗೆ = ಏರಿಗೆ
ಹಾಡು + ಇಗೆ = ಹಾಡಿಗೆ
ಅಡು + ಇಗೆ = ಅಡಿಗೆ
ನಂಬು + ಇಗೆ = ನಂಬಿಗೆ
ಹಾಸು + ಇಗೆ = ಹಾಸಿಗೆ
" ಟ " ಪ್ರತ್ಯೇಯ
ನೋಡು + ಟ = ನೋಟ
ಮಾಡು + ಟ= ಮಾಟ
ಓಡು + ಟ = ಓಟ
ಉಡ + ಟ = ಊಟ
ಕೂಡು + ಟ =ಕೂಟ
ಕಾಡು + ಟ = ಕಾಟ ಇತ್ಯ್ಯಾದಿ
ಕೃದ್ಧಾಂತ ಅವ್ಯಗಳು
ಕ್ರೀಯಾ ಪ್ರಕೃತಿ ಮೇಲೆ ಕೃತ್ ಪ್ರತ್ಯೆಯಗಳು ಸೀರಿ ಅವ್ಯವಾಗಿ ರೂಪಗೊಂಡರೆ ಅದನ್ನು ಕೃದ್ಧಾಂತ ಅವ್ಯಯ ಎನ್ನುತ್ತೇವೆ
ಉದಾ: " ಅಲು " ಪ್ರತ್ಯೇಯ
ಹೋಗು + ಅಲು = ಹೋಗಲು
ಬರೆ + ಅಲು = ಬರೆಯಲು
ತಿನ್ನ+ ಅಲು = ತಿನ್ನಲು
ನೋಡು + ಅಲು = ನೋಡಲು
" ಅಲಿಕೆ " ಪ್ರತ್ಯೇಯ
ಬರೆ+ಅಲಿಕೆ = ಬರೆಯಲಿಕ್ಕೆ
ತಿನ್ನು + ಅಲಿಕೆ = ತಿನ್ನಲಿಕ್ಕೆ
ಆಡ+ಅಲಿಕೆ = ಆಡಲಿಕ್ಕೆ
ನೋಡು + ಅಲಿಕೆ + ನೋಡಲಿಕ್ಕೆ
" ಉತ್ " ಪ್ರತ್ಯೆಯಾ
ಹಾಡ + ಉತ್ತ್ = ಹಾಡುತ್ತಾ
ನೀಡ + ಉತ್ತ್ = ನೀಡುತ್ತಾ
ಬರೆ + ಉತ್ತ್ = ನೀಡುತ್ತಾ
ತಿಳಿ + ಉತ್ = ತಿಳಿಯುತ್ತಾ
ತೆಗೆ + ಉತ್ + ತೆಗೆಯುತ್ತಾ
ನಗೆ + ಉತ್ತ್ = ತೆಗೆಯುತ್ತಾ
" ಅದೇ " ಪ್ರತ್ಯೇಯಾ
ಉಣ್ಣು + ಅದೇ + ಉಣ್ಣದೇ
ಬರೆ + ಅದೇ = ಬರೆಯದೇ
ಹಾಡು + ಅದೇ = ಹಾಡದೇ
ನೋಡು + ಅದೇ = ನೋಡದೇ
" ಇ " ಪ್ರತ್ಯೇಯ
ಮಾಡು + ಇ = ಮಾಡಿ
ನೋಡು + ಇ = ನೋಡೂ
ಬೇಡ + ಇ = ಬೇಡಿ
ಕೇಳ + ಇ = ಕೇಳೀ
" ದು " ಪ್ರತೇಯ
ತಿನ್ನ + ದು = ತಿಂದು
ಬರೆ + ದು = ಬರೆದು
ಕೊರೆ + ದು = ಕೊರೆದು
ತದ್ಧಿತಾಂತ ಅವ್ಯಯಗಳು : ತದ್ದಿತ + ಅಂತ
ಇವುಗಳು ತದ್ಧಿತ್ ಪ್ರತ್ಯೆಯಗಳನ್ನು ಅಂತ್ಯವಾಗಿಸಿಕೊಂಡ ಪದ ತದ್ಧಿತಾಂತ ನಾಮ ಪ್ರಕೃತಿ ಮೇಲೆ ಬೇಕಾದ ಅರ್ಥದಲ್ಲಿ ಸೇರಿ ಇನ್ನೊಂದು ನಾಮ ಪ್ರಕೃತಿಯನ್ನು
ರೂಪಿಸುವ ಪ್ರತ್ಯೆಯಗಳಿಗೆ ತದ್ಧಿತ ಪ್ರೆತ್ಯೇಯಗಳೆಂದು ಅಂತ್ಯವಾದಲ್ಲಿ ಹೊಂದಿದ ಪದವನ್ನು ತದ್ಧಿತಾಂತ ಎಂದು ಕರೆಯುತ್ತೇವೆ
ಇದರಲ್ಲಿ ಮೂರು 3 ಪ್ರಕಾರಗಳು
1. ತದ್ಧಿತಾಂತ ನಾಮ 2. ತದ್ಧಿತಾಂತ ಭಾವ ನಾಮ ಮತ್ತು 3. ತದ್ಧಿತಾಂತ ಅವ್ಯಗಳು
"ಗಾರ" ಪ್ರತ್ಯೇಯ
ಸಾಲಗಾರ
ಮೋಸಗಾರ
ಮಾಲೆಗಾರ
ಸೊಗಸುಗಾರ
ಬಳೆಗಾರ
ಛಲಗಾರ
ಹೂಗಾರ
ನೋಟಗಾರ

" ಕಾರ : ಪ್ರತೇಯಾ

ಕಲೆಕರ
ಕೂಲಿಕಾರ
ಓಲೆಕಾರ
ಅಂಗಡಿಕಾರ

:"ಇಗ"
ಗಾಣಿಗ
ತೊಟ್ಟಿಗ
ಅಂಬಿಗ
ಕನ್ನಡಿಗ
" ವಳ "
ಮಡಿವಾಳ
ಗೋಮಾಳ
ಹಡಪವಳ
" ವಂತ "
ಹೃಧಯವಂತ
ನೀತಿವಂತ
ಗುಣವಂತ
ಕಲಾವಂತ
ಲಿಂಗವಂತ
ಬುದ್ದಿವಂತ
" ಅಳಿ "
ಮಾತಾಳಿ
ಜೂದಾಳಿ
ಓದಾಳಿ
" ಇತ್ತಿ"
ಹೂವಾಡಗಿತ್ತಿ
ಒಕ್ಕಲಗಿತ್ತಿ
ಗೌಡಗಿತ್ತಿ
ಕಳಸಗಿತ್ತಿ
ಸೂಲಗಿತ್ತಿ
ಅಗಸಗಿತ್ತಿ
" ಇ "
ಮುದುಕಿ
ಹುಡುಗಿ
"ತ್ತಿ"
ಗೊಲ್ಲತಿ
ಗೌಡತಿ
ವಡ್ಡತಿ

ತದ್ಧಿತಾಮ್ತ ಭಾವನಾಮ
" ತನ "
ಬದತನ
ಸಿರಿತನ
ದಡ್ಡತನ
ಹಿರಿತನ
ಕಿರಿತನ
ಶೂರತನ
"ಉ"
ಕರಿ + ಉ = ಕಪ್ಪು
ಬಿಳಿ + ಉ = ಬಿಳಿಪು
ಇನಿ + ಇ + ಇಂಪು
ತಣ್ನನೆ + ಉ = ತಂಪು
ನುಣ್ಣನೆ + ಉ = ನುಣುಪು
:" ಮೇ "
ಜಾಣ್ಮೆ
ಹಿರಿಮೆ, ಹೆಮ್ಮೆ

ತಧ್ಧಿತಾಂತ ಅವ್ಯಯಗಳು
ಉದಾ: " ಅಂತೆ " ಪ್ರತ್ಯೇಯ
ರಾಮನಂತೆ
ಸೀತೆಯಂತೆ
ಕೋತಿಯಂತೆ
ಕುದುರೆಯಂತೆ
ಶಾಲೆಯಂತೆ
" ವೋಲ್" ಪ್ರತ್ಯೇಯಾ
ರಾಮನ್ವೋಲ್
ಚಂದ್ರನೋಲ್
" ಓಸ್ಕರ "
ವಿಧ್ಯಾರ್ಥಿಗೋಸ್ಕರ
ನಮಗೋಸ್ಕರ
ಊಟಕೊಸ್ಕರ
" ಓಸುಗ "
ರಾಮನೋಸಗ
ಚಂದನೋಸಗ
ಅಕ್ಕನಿಗೋಸಗ
ದ್ರೌಪದಿಗೋಸಗ
"ಆಗಿ"
ಅಕ್ಕನಿಗಾಗಿ
ನಿನಗಾಗೆ
ಪ್ರೀತಿಗಾಗಿ
ಪರೀಕ್ಷೆಗಾಗಿ
" ಇಂತ "
ಆಟಕ್ಕಿಂತ
ಇಪ್ಪಿಗಿಂತ
ತಾಯಿಗಿಂತ
ದೇವರಿಗಿಂತ
" ವರಗೆ"
ಊರವರಗೆ
ಶಾಲೆವರಗೆ
ಮನೆವರಗೆ
" ತನಕ "
ಮನೆತನಕ
ಊರತನಕ
ಶಾಲೆತನಕ
ಪರೀಕ್ಷೆ ತನಕ
" ಓತ "
ಛಂಧೋ ಗ್ರಂಥಗಳು
ಛಂದೋಂಬುದಿ : 1 ನೇ ನಾಗವರ್ಮ
ಛಂದಸ್ಸು : ಗುಣಚಂದ್ರ
ಘ್ಹಟ್ಟ ತ್ಯಾಯ : ಶಾಲ್ಯದ ಕೃಷ್ಣರಾಜ
ಛಂಧಾನುಶಾಸನ : ಜಯ ಕೀರ್ತ
ಮನಸ್ಸೋಲ್ಲಾಸ ; 3 ನೇ ಸೋಮಶೇಖರ
ಗಣ
ಗಣ ಎಂದರೆ ಗುಂಪು ಅಥವಾ ಸಮೂಹ ಎಂದು ಅರ್ಥವಾದರು ಛಂಧೋಪರಿಭಾಷೆಯಲ್ಲಿ
ಕೆಲವು ನಿಯಮಗಳಿಗನುಸಾರವಾಗಿ ವಿಂಗಡಿಸಿದ ಅಕ್ಷರಗಳ ಗುಂಪನ್ನು ಗಣ ಅನ್ನುತ್ತೇವೆ.
ಗಣದ ಪ್ರಕಾರಗಳು
1. ಅಕ್ಷರ (ವರ್ಣ) ಗಣ
2. ಮಾತ್ರ ಗಣ
3. ಅಂಶ ಗಣ
ಛಂದಸ್ಸು ಶಾಸ್ತ್ರ:
ಸಾಹಿತ್ಯವನ್ನು ಅಧ್ಯನ ಮಾಡುವಾಗ ನಾವು ಗದ್ಯ ಮತ್ತು ಪದ್ಯ ಎರಡು ನೆಲೆಯಲ್ಲಿ ವಿಂಗಡಿಸುತ್ತೇವೆ
ವ್ಯಾಕರಣ ಗದ್ಯ ಮತ್ತು ಪದ್ಯ ಎರಡಕ್ಕು ಅನ್ವಯಿಸಿದರೆ
ಛಂದಸ್ಸು ಕೇವಲ ಪದ್ಯಕ್ಕೆ ಮಾತ್ರ ಸೀಮಿತವದದ್ದು ಅಂದರೆ
ಪದ್ಯ ರಚನೆಯ ಶಾಸ್ತ್ರವನ್ನು ತಿಳಿಸುವುದೇ ಚಂದಸ್ಸು ಶಾಸ್ತ್ರ
ಕಾವ್ಯದ ಅಂತರಿಕ ಅಂಗಗಳು
ಭಾವ, ರಸ, ದ್ವನಿ, ಇವು ಕಾವ್ಯ ರಸದ ಆಂತರಿಕ ಅಂಗಗಳು
ಛಂದಸ್ಸು ಕಾವ್ಯದ ಒಂದು ಅಂಗ, ಸಂಧ್ಯಾಕಷರ ಮತ್ತು ಸಂದ್ಯಾಕ್ಷರಗಳಿಂದ ಒಳಗೂಡಿದ ಅಕ್ಷರ ಗುರುವೆಂದು ಪರಿಗಣಿತವಾಗುತ್ತದೆ
ಸಂಧ್ಯಾಕ್ಷರಗಳು : ಐ ಮತ್ತು ಔ
ಉದಾ: ಅವನು ದೈತ್ಯ UUU --
ವ್ಯಂಜನಾಕ್ಷರಕ್ಕೆ ಛಂದಸ್ಸು ಶಾಸ್ತ್ರದಲ್ಲಿ ತನ್ನದೇ ಆದ ಅಸ್ತಿತ್ವ ಇಲ್ಲ. ಅದು ಹಿಂದಿನ ಅಕ್ಷರದೊಂದಿಗೆ ಸೇರಿ ಗುರು ವಿನ ಬೆಲೆ ಪಡೆಯುತ್ತದೆ
ಉದಾ: - U -
ಬೆ ಟ್ಟ ದೊ ಳ್
U
ವಿ
-
ಧ್ಯಾ
-
ಶ್ರೀ
U

U

U

-
ಶ್ರೀ
-
ಲಂ
-
ಕಾ
U
ಹೃ
U

U

U
ಗಿ
-
ರೀ
-
ಶಂ
U

-
ರೇಂ
-
ದ್ರಂ
U
ಸ್ವ
-
ರಾ
-
ಜ್ಯ
U
ವಿ
-
ನೋ
U


1.ಅಕ್ಷರ ಗಣ : ಅಕ್ಷರಗಳ ನಿಯಮಕ್ಕೆ ಒಳಪಟ್ಟ ಗಣಗಳೇ ಅಕ್ಷರ ಗಣ. ಇಲ್ಲಿ ಗಣವನ್ನು ಅಳೆಯುವ ಮಾನದಂಡ ಅಕ್ಷರಗಳು
ಮೂರು ಅಕ್ಷರಕ್ಕೊಂದು ಗಣ ಕಡ್ಡಾಯ, ಆದರೆ ಪ್ರಸ್ತಾರ, ವಿನ್ಯಾಸ ಮತ್ತು ಕ್ರಮ ಹೀಗೆ ಇರಬೇಕೆಂಬ ನಿಯಮವಿಲ್ಲ,
ಅವು ಹೊಂದಿದ ಪ್ರಸ್ತಾರದ ಹಿನ್ನೆಲೆಯಲ್ಲಿ ಅಕ್ಷರಗಣವನ್ನು 8 ಪ್ರಕಾರವಾಗಿ ವಿಂಗಡಿಸಲಾಗಿದೆ
ಗುರು ಲಘು ಮೂರಿರೆ " ಮ ನ " ಗಣ U U U - - -
ಗುರು ಲಘು ಮೊದಲಿರೆ " ಭ ಯ " ಗಣ - U U , - U U
ಗುರು ಲಘು ಮದ್ಯೆ ಬರಲು " ಜ ರ" ಗಣ, U - U, - U -
ಗುರು ಲಘು ಕೊನೆ ಬರಲು " ಸ ತ "ಗಣ . U U -, - - U
ಇದನ್ನು ಜ್ನಾಪಕ ಇಟ್ಟುಕೊಳ್ಳಲು ಸೂತ್ರ ಮನ ಕ್ಕೆ ಭಯ ಬಂದು ಜರ ದಿಂದ ಸತ ಹೋಯಿತು.
ಅಕ್ಷರ (ವರ್ಣ) ವೃತ್ತಗಳು :
ಇವು ಸಂಸ್ಕೃತ ದಿಂದ ಕನ್ನಡಕ್ಕೆ ಬಂದಿವೆ. ಅಕ್ಷರಗಳಿಂದ ಕೂಡಿದ ಪದ್ಯ ಜಾತಿಗಳನ್ನು ಅಕ್ಷರ ವೃತ್ತಗಳೆನ್ನುತ್ತೇವೆ.
ಇಲ್ಲಿ ಪದ್ಯವನ್ನು ಅಳೆಯುವ ಮಾನದಂಡ ಅಕ್ಷರಗಳು, ಇದರಲ್ಲಿ 3 ಪ್ರಕಾರಗಳು
1. ಸಮವೃತ್ತ 2.ಅರ್ಧ ವೃತ್ತ 3.ವಿಷಯ ವೃತ್ತ
ಸಮ ವೃತ್ತ: ಬಲಕೆಗೊಳ್ಳುವ ನಾಲ್ಕು ಚರಣಗಳ ಲಕ್ಷಣಗಳು ಒಂದೇ ಆಗಿದ್ದರೆ ಅದನ್ನು ಸಮ ವೃತ್ತ ಎನ್ನುತ್ತೇವೆ.
ಇವುಗಳಲ್ಲಿ ಸುಮಾರು 150 ಬಗೆಗಳಿವೆ, ಆದರೆ ಕನ್ನಡ ಕವಿಗಳು 6 ವೃತ್ತಗಳನ್ನು ವಿಶೇಷವಾಗಿ ಬಳಿಸಿಕೊಂಡಿರುವುದರಿಂದ
ನಾಗವರ್ಮ ತನ್ನ ಛಂದೋಬುಧಿಯಲ್ಲಿ ಆವುಗಳನ್ನು "ಖ್ಯಾತ ಕರ್ನಾಟಕ ವೃತ್ತ"ಗಳು ಎಂದು ಕರೆದಿದ್ದಾನೆ
ಅಲ್ಲದೇ 6 ವೃತ್ತಗಳ ಲಕ್ಷಣವನ್ನು ಒಂದು ವೃತ್ತದಲ್ಲಿ ಸ್ಪಷ್ಟಪಡಿಸಿದ್ದಾನೆ
ಗುರುವೊಂದಾದಿಯೊಳುತ್ಪಲಂ ಗುರುಮೊದಲ್ ಮೂರಾಗೆ ಶಾರ್ದೂಲಮಾ ಗುರುನಾಲ್ಕಾಗಿರಲಂತು ಸ್ರಗ್ಧರೆ
ಲಘುದ್ವಂದ್ವಂಗುರು ದ್ವಂದ್ವಮಾಗಿರೆ ಮತ್ತೇಭ ಲಘುದ್ವಯತ್ರಿಗುರುವಿಂದಕ್ಕುಂ ಮಹಾಸ್ರಗ್ಧರಾ ಹರೀಣಾಕ್ಷಿ,
ಲಘು ನಾಲ್ಕು ಚಂಪಕ ಮಿವಾರಮ್ ಖ್ಯಾತ ಕರ್ಣಾಟಕಂ.
ಖ್ಯಾತ ಕರ್ನಾಟಕ ವ್ರುತ್ತಗಳು
1. ಉತ್ಪಲ ಮಾಲಾ ವೃತ್ತ
2. ಶಾರ್ದೂಲ ಮಾಲಾ ವೃತ್ತ
3. ಸ್ರಗ್ಧರೆ ವೃತ್ತ
4. ಮತ್ತೇಭ ವೃತ್ತ
5. ಮಹಾ ಸ್ರಗ್ಧರೆ ವೃತ್ತ
6. ಚಂಪಕ ಮಾಲ ವೃತ್ತ
1. ಚಂಪಕ ಮಾಲಾ ವೃತ್ತ: ಪ್ರತಿ ಪಧದಲ್ಲಿ 4 ಚರಣಗಳಿದ್ದು ಪ್ರತೀ ಚರಣದಲ್ಲಿ 21 ಅಕ್ಷರಗಳು
ಸೂತ್ರ: ನ ಜ ಭ ಜ ಜಂ ಜ ರ
U

U

U

U

-
ಜಂ
U

U

U

U
ಗೆ
U
ಗೊ
-
ಳು
U
ತ್ತಿ
U
ರೆ
-
ಚಂ
U

U

-
ಮಾ
U
ಲೆ
-
ಯೆಂ
U

-
ಪರ್
ಉತ್ಪಲ ಮಾಲಾ ವೃತ್ತ: ಪದ್ಯದ ಪ್ರತೀ ಚರಣದಲ್ಲಿ 20 ಅಕ್ಷರಗಳಿದ್ದು ,
ಪ್ರತಿ ಚರಣದಲ್ಲಿ: ಭ ರ ನ ಭ ಭ ರ
ಸೂತ್ರ: ಉ ತ್ಸ ಲ ಮಾ ಲೆ ಯೆ ಪ್ಪು ದು ಭ ರ ನ ಭ ಭಂ ರ ಲ ಗಂ ನೆ ಗೆ ಳ್ದಿ ರ ಲ್

-

U
ತ್ಪ
U

-
ಮಾ
U
ಲೆ
U
ಯೆ
-
ಪ್ಪು
U
ದು
U

U

U

U

U
ಭಂ
U

U

-
ಗಂ
U
ನೆ
-
ಗೆ
U
ಳ್ದಿ
-
ರಲ್

ಶಾರ್ದೂಲ ಮಾಲಾ ವೃತ್ತ: ಪ್ರತೀ ಚರಣದಲ್ಲಿ 19 ಅಕ್ಷರಗಳು, ಮತ್ತು
ಪ್ರತೀ ಚರಣದಲ್ಲು : ಮ ಸ ಜ ಸ ತಂ ತ
ಸೂತ್ರ:
-

-
ಣ್ಣೊ
-
ಪ್ಪ
-
ಲ್
U

U

-
ಜಂ
U

-
ತಂ
U

U

U
ಮು
-
ಮಾ
-
ಶಾ
-
ರ್ದೂ
U

U
ವಿ
-
ಕ್ರೀ
U
ಡಿ
-
ತಂ

ಮತ್ತೇಭ ವಿಕ್ರೀಡಿತ : ಪ್ರತಿ ಚರಣದಲ್ಲಿ 20 ಅಕ್ಷರಗಳು
ಪ್ರತೀ ಚರಣದಲ್ಲಿ ಸ ಭ ರ ನ ಮ ಯ ಗಳು ಬರುತ್ತವೆ ಮತ್ತು ಕೊನೆಯಲು ಒಂದು ಲಘು ಮತ್ತು ಒಂದು ಗುರು ಬರುತ್ತದೆ
ಸೂತ್ರ
U

U

-
ರಂ
-
ನಂ
U

U

-
ಲಂ
U

-
ಮೂ
U

U
ಗೆ
U
ಗೊ
U

-
ಲ್
-

-
ತ್ತೇ
U

U
ವಿ
-
ಕ್ರೀ
U

-
ತಂ
:
ಸ್ರಗ್ಧರೆ : ಇವುಗಳ ಬಳಕೆ ಕನ್ನಡದಲ್ಲಿ ತೀರ ಕಡಿಮೆ
ಪ್ರತೀ ಚರಣದಲ್ಲಿ 21 ಅಕ್ಷರಗಳು ಬರುತ್ತವೆ
ಪ್ರತೀ ಚರಣದಲ್ಲಿ: ಮ ರ ಭ ನ ಯ ಯ ಯ
-
ತೋ
-

ಲ್
-
ಮಂ
-
ರಂ
U

-
ನಂ
-
ಮೂ
U

U

U

U
ಮು
U

-
ದೆಂ
-
ತಾ
-
ಸ್ರ
U
ಗ್ಧ
-
ರಾ
-
ವೃ
U
ತ್ತ
U

-
ಕ್ಕುಂ

ಮಹಾ ಸ್ರಗ್ಧರಾ: ಪ್ರತೀ ಚರಣದಲ್ಲಿ 22 ಅಕ್ಷರಗಳು
ಪ್ರತೀ ಚರಣದಲ್ಲಿ ಸ ತ ತ ನ ಭ ರ ರ

ಸೂತ್ರ:
U

U

-
ತಂ
-
ನಂ
-
ಸಂ
U

-
ರಂ
-
ಗಂ
U
ಸೆ
U
ರೆ
U
ದೆ
U
ಸೆ
U

U

-
ಹಾ
-
ಸ್ರ
U
ಗ್ಧ
-
ರಾ
-
ವೃ
U
ತ್ತ
U

-
ಕ್ಕುಂ
ಕ್ರ ಸಂಖ್ಯ
ವೃತ್ತ
ಚರಣಗಳ ಸಂಖ್ಯ
ಅಕ್ಷರಗಳು
ಗಣಗಳು
1
ಚಂಪಕ ಮಾಲಾ
4
21
ನ ಜ ಭ ಝ ಜಂ ಜಂ ರ
2
ಉತ್ಸಲ ಮಾಲಾ
4
20
ಭ ರ ನ ಭ ಭ ರ
3
ಶಾರ್ದೂಲ ಮಾಲಾ
4
19
ಮ ಸ ಜ ಸ ತ ತಂ
4
ಮತೇಭ ವಿಕ್ರೀಡಿತ
4
20
ಸ ಭ ರ ನ ಮ ಯ
5
ಸ್ರಗ್ಧರೆ
4
21
ಮ ರ ಭ ನ ಯ ಯ ಯ
6
ಮಹಾ ಸ್ರಗ್ಧರೆ
4
22
ಸ ತ ತ ನ ಭ ರ ರ
ಮಾತ್ರ ಗಣ:
ಮಾತ್ರೆಗಳಿಂದ ಕೂಡ್ದ ಗಣಗಳು ಮತ್ತು ನಿಯಮಕ್ಕೊಳಪಟ್ಟ ಗಣಗಳನ್ನು ಮಾತ್ರೆ ಗಣಗಳೆನ್ನುತ್ತೇವೆ.
ಇಲ್ಲಿ ಗಣವನ್ನು ಅಳೆಯುವ ಮಾನ ದಂಡ ಮಾತ್ರೆಗಳು
ಉದಾ:
U U U - U
ಬ ಸ ವ ರಾ ಜ
ಒಂದು ಹ್ರಸ್ವಸ್ವರವನ್ನು ಉಚ್ಚರಿಸಲು ತೆಗೆದುಕೊಳ್ಳುವ ಕಾಲವನ್ನು ಮಾತ್ರೆ ಎನ್ನುತ್ತೇವೆ,
ಈ ಮಾತ್ರ ಮೌಲ್ಯವನ್ನು ಲಘು (U) ಮತ್ತು ಗುರು (-) ಚಿಹ್ನೆಯಿಂದ ಗುರುತಿಸುತ್ತೇವೆ
ಮಾತ್ರಗಣಗಳಲ್ಲಿ 3 ಪ್ರಕಾರಗಳು
1. ಮೂರು ಮಾತ್ರೆ ಗಣ 2. ನಾಲ್ಕು ಮಾತ್ರೆ ಗಣ 3. ಐದು ಮಾತ್ರೆ ಗಣ
1. ಮೂರು ಮಾತ್ರೆ ಗಣ: ಪ್ರತಿ ಮಾತ್ರಗಣದ ಮದ್ಯೆ ಪ್ರತ್ಯೇಕತೆ ಇರಬೇಕು ಅಂದರೆ ಒಂದು
ಗುರುವಿನ ಎರಡು ಮಾತ್ರೆಗಳು ಹಾಚೆ ಈಚೆ ಗಣಕ್ಕೆ ಹಂಚುವಂತಿಲ್ಲ
ಮಾತ್ರ ವೃತ್ತಗಳು : ಇದು ಪ್ರಾಕೃತದಿಂದ ಕನ್ನಡಕ್ಕೆ ಬಂದಿವೆ ಮಾತ್ರ ಗಣಗಳಿಂದ ಕೂಡಿದ ಪದ್ಯ ಜಾತಿಗಳಿಗೆ ಮಾತ್ರೆ ವೃತ್ತಗಳೆನ್ನುತ್ತಾರೆ
ಮಾತ್ರೆ ವೃತ್ತಗಳಲ್ಲಿ ಪ್ರಧಾನವಾದುವೆಂದರೆ ಕಂದಪದ್ಯ, ಷಟ್ಪದಿ ಮತ್ತು ರಗಳೆ
ಕಂದ ಪದ್ಯ:
ಲಕ್ಷಣಗಳು : ಪ್ರತೀ ಪದ್ಯದಲ್ಲಿ 4 ಚರಣಗಳು
1 ಮತ್ತು 3 ನೇ ಚರಣಗಳು ಕಿರಿ ಚರಣಗಳು ಇವು 4 ಮಾತ್ರೆಯ 3 ಗಣಗಳನ್ನು ಹೊಂದಿರುತ್ತವೆ
2 ಮತ್ತು 4 ನೇ ಚರಣಗಳು ಹ್ರಿ ಚರಣಗಳು ಇವು 4 ಮಾತ್ರೆಯ 5 ಗಣಗಳನ್ನು ಹೊಂದಿರುತ್ತವೆ.
ಇವು ಅರ್ದ ಸಮವೃತ್ತ
ಪೂರ್ವ ಮತ್ತು ಉತ್ತರಾರ್ದಗಳ ವಿಷಯ ಸ್ಥಾನದಲ್ಲಿ ಮದ್ಯ ಗುರು ವುಳ್ಳ ಗಣ ಅಥವಾ ಜಗಣ ಬರಬಾರದು
ಪೂರ್ವಾರ್ದ ಮತ್ತು ಉತ್ತರಾರ್ದಗಳಿಗೆ 6ನೇ ಸ್ಥಾನದಲ್ಲಿ ಮದ್ಯೆ ಗುರುವುಳ್ಳ ಗಣ ಅಥವಾ 4 ಲಘುವುಳ್ಳ ಗಣ ಬರಬೇಕು
ಉದಾ
U U U U
ಪ ಡೆ ಯ ಡೆ
U U U U
ಯೆ ಕ ಡೆ ಯ
U U -
ಬ ಡ ವರ್
4 ಮಾತ್ರೆಯ 3 ಗಣಗಳು
U U U U
ಕ ಡೆ ಪ ಡೆ
U U -
ದ ನು ಚ
U U -
ಕ್ರ ವ ರ್ತಿ
- -
ಯೊ ಳ್ ತೈ
U U -
ಲ ಪ ನೊ ಳ್
4 ಮಾತ್ರೆಯ 5 ಗಣಗಳು
U U -
ಪ ಡೆ ದಂ
U U -
ಮ ಹಿ ಮೆ
U U -
ನ್ನ ತಿ ಯಂ
4 ಮಾತ್ರೆಯ 3 ಗಣಗಳು
U U -
ಪ ಡೆ ದಂ
U U -
ಕ ವಿ ಚ
U U -
ಕ್ರ ವ ರ್ತಿ
U U -
ವೆ ಸ ರಂ
- -
ರ ನ್ನಂ
4 ಮಾತ್ರೆಯ 5 ಗಣಗಳು
ಷಟ್ಪದಿ : ಇದರ ಹೆಸರೇ ಸೂಚುಸುವಂತೆ 6 ಪಾದಗಳು (ಸಾಲುಗಳಿಂದ) ಜಾತಿ
ಲಕ್ಷಣಗಳು: 1. ಪ್ರತೀ ಪದ್ಯದಲ್ಲಿ 6 ಸಾಲುಗಳಿರುತ್ತವೆ.
2. 1,2,4,5 ಚರಣಗಳು ಕಿರಿ ಚರಣಗಳು.
2. 3ನೇಯ 6 ನೇಯ ಚರಣಗಳು ಹಿರಿ ಚರಣಗಳಾಗಿದ್ದು . ಕಿರಿ ಚರಣದ ಒಂದೂವರೆ ಪಟ್ಟು ದೊಡ್ಡದಾಗಿದ್ದು
ಮೇಲೊಂದು ಗುರುವನ್ನು ಪಡೆದಿರುತ್ತದೆ.
ಷಟ್ಪದಿಗಳಲ್ಲಿ 6 ಪ್ರಕಾರಗಳು
1. ಶರ ಷಟ್ಪದಿ 2. ಕುಸುಮ ಷಟ್ಪದಿ 3. ಭೋಗ ಷಟ್ಪದಿ 4. ಭಾಮಿನಿ ಷಟ್ಪದಿ 5. ಪರಿವರ್ದಿನಿ ಷಟ್ಪದಿ ಮತ್ತು 6. ವಾರ್ದಕ ಷಟ್ಪದಿ
ಶರ ಷಟ್ಪದಿ : ಪ್ರತಿ ಕಿರಿ ಚರಣದಲ್ಲಿ 4 ಮಾತ್ರೆಯ 2 ಗಣಗಳು
ಪ್ರತಿ ಹಿರಿ ಚರಣದಲ್ಲಿ 4 ಮಾತ್ರೆಯ 3 ಗಣಗಳು ಮತ್ತು ಮೇಲೊಂದು ಗುರುವಿರುತ್ತದೆ
ಉದಾ:


- U U
ಈ ಶ ನ
U U U U
ಕ ರು ಣೆ ಯ
4 ಮಾತ್ರೆಯ 2 ಗಣಗಳು
- U U
ನಾ ಶಿ ಸು
U U U U
ವಿ ನ ಯ ದಿ
4 ಮಾತ್ರೆಯ 2 ಗಣಗಳು
- U U
ದಾ ಸ ನ
- U U
ಹಾ ಗೆ ಯ
- U U
ನೀ ಮ ನ
-
ವೇ
4 ಮಾತ್ರೆಯ 3 ಗಣಗಳು ಮತ್ತು ಮೇಲೊಂದು ಗುರು
- U U
ಕ್ಲೇ ಶ ದ
U U U U
ವಿ ಧ ವಿ ಧ

4 ಮಾತ್ರೆಯ 2 ಗಣಗಳು
- U U
ಪಾ ಶ ವ
U U U U
ಹ ರಿ ದು ವಿ

4 ಮಾತ್ರೆಯ 2 ಗಣಗಳು
- U U
ಲಾ ಸ ದಿ
- U U
ಸ ತ್ಯ ವ
u u u u
ತಿ ಳಿ ಮ ನ
-
ವೇ
4 ಮಾತ್ರೆಯ 3 ಗಣಗಳು ಮತ್ತು ಮೇಲೊಂದು ಗುರು


ಕುಸುಮ ಷಟ್ಪದಿ : ಪ್ರತಿ ಕಿರಿ ಚರಣದಲ್ಲು 5 ಮಾತ್ರೆಯ 2 ಗಣಗಳು
ಪ್ರತಿ ಹಿರಿ ಚರಣದಲ್ಲಿ 5 ಮಾತ್ರೆಯ 3 ಗಣಗಳು ಮತ್ತು ಮೇಲೊಂದು ಗುರು
U U U -
ಬಿ ಸಿ ಲಿ ಗಂ
- U -
ಗಾ ಳಿ ಗಂ
5 ಮಾತ್ರೆಯ 2 ಗಣಗಳು
U U - U
ನ ಸು ಬಾ ಡೆ
UU U U U
ತ ನು ಲ ತಿ ಕೆ
5 ಮಾತ್ರೆಯ 2 ಗಣಗಳು
U U U -
ಕು ಸು ಮ ಕೋ
U U U U
ಮ ಳೆ ಹೊ ಸೆ
U
ದು
- U -
ಹೂ ವಿ ನಂ
-
ತೆ
5 ಮಾತ್ರೆಯ 3 ಗಣಗಳು ಮೇಲೊಂದು ಗುರು


ಬೋಗ ಷಟ್ಪದಿ : ಪ್ರತಿ ಕಿರಿ ಚರಣದಲ್ಲಿ 3ಮಾತ್ರೆಯ 4 ಗಣಗಳು
ಪ್ರತಿ ಹಿರಿ ಚರಣದಲ್ಲು 3ಮಾತ್ರೆಯ 6 ಗಣಗಳು
U U U
ತಿ ರು ಕ
- U
ನೋ ರ್ವ
- U
ನೂ ರ
- U
ಮುಂ ದೆ
U U U
ಮು ರು ಕು
- U
ಧ ರ್ಮ
- U
ಶಾ ಲೆ
- U
ಯ ಲ್ಲಿ
U U U
ವೊ ರ ಗಿ
- U
ರು ತ್ತ
- U
ಲೊಂ ದು
U U U
ಕ ನ ಸ
- U
ಕಂ ಡ
- U
ನಂ ತ
-
ನೇ

ಭಾಮಿನಿ ಷಟ್ಪದಿ : ಪ್ರತಿ ಕಿರಿ ಮತ್ತು ಹಿರಿ ಚರಣದಲ್ಲಿ 3ಮಾತ್ರೆಯ ಗಣದ ಮುಂದೆ 4 ಮಾತ್ರೆಯ ಗಣ 2 ಸಲ
ಮತ್ತು ಹಿರಿ ಚರಣದಲ್ಲಿ ಮೇಲೊಂದು ಗುರು ಬರಬೇಕು
- U
ಸ ತ್ತ
U U U U
ವ ರ ಕ ಥೆ
- U
ಯ ಲ್ಲ
U U U U
ಜ ನ ಪ ದ
- U
ಕು ತ್ತ
U U U U
ರ ಲಿ ಕು ದು
- U U
ಕ ರ್ಮ ರ



- u
ಕ ತ್ತ
U U U U
ಲೆ ಗೆ ಸಿ ಲು
U U U
ಕು ವ ರ
- U U
ಸೀ ಮೆ ಯ
- U
ಹೋ ಲು
U -
ಬು ತಾ
-
ನು
ಪರಿವರ್ಧಿನಿ ಷಟ್ಪದಿ: ಪ್ರತಿ ಕಿರಿ ಚರಣದಲಿ 4ಮಾತ್ರೆಯ 4 ಗಣಗಳು
ಪ್ರತಿ ಹಿರಿ ಚರಣದಲ್ಲಿ 4ಮಾತ್ರೆಯ 6 ಗಣಗಳು ಮೇಲೊಂದು ಗುರು ಬರಬೇಕು
U U U U
ದು ರಿ ತ ವ
- U U
ನಂ ಬೆ ಳೆ
U U U U
ವು ದ ಕೆ ಪೊ
- U U
ಲಂ ಕೊ ಲೆ
U U U U
ಪ ರಿ ಕ ಲಿ
U U U U
ಸಿ ದ ನ ವ
- U U
ದೋ ಹ ಳ
U U -
ಮ ನೃ ತಂ
U U -
ಪ ರಿ ಕಾ
U U U U
ಲು ದ ಕ ಮ
U U U U
ದ ತೆ ಕ ಳ
- -
ವ ನ್ನ
- -
ಸ್ತ್ರೀ ಸಂ
U U -
ಗ ವ ಗೆ
-
ಯೇ

ವಾರ್ದಕ ಷಟ್ಪದಿ : ಪ್ರತಿ ಕಿರಿ ಚರಣದಲ್ಲಿ 5 ಮಾತ್ರೆಯ 4 ಗಣಗಳು
ಪ್ರತಿ ಹಿರಿ ಚರಣದಲ್ಲಿ 5ಮಾತ್ರೆಯ 6 ಗಣಗಳು
- U U U
ನ ಟ್ಟಿ ರು ಳು
U U - U
ಸು ಡು ಗಾ ಡೊ
- U -
ಳೊ ಬ್ಬ ನೋ
- U -
ನಂ ತೆ ಬಾ
- U U U
ಯಿ ಟ್ಟು ಹು ಲು
U U - U
ಬು ವ ವೀ ರ
- U -
ನಾ ರಿ ಯಾ
U U - U
ವ ಳೊ ಮೀ ರೆ
- U -
ಸು ಟ್ಟೆ ಯಾ
U U U U U
ದ ಡೆ ನಿ ನ ಗೆ
- U -
ವೀ ರ ಬಾ
U U - U
ಹು ಕ ನಾ ಣೆ
- U U U
ಕ ದ್ದು ಸು ಡ
- U -
ಬಂ ದೆ ನಿ
-
ನ್ನ


ಕ್ರಮ ಸಂಖ್ಯ
ಷಟ್ಪದಿ
ಕಿರಿ ಚರಣ
ಹಿರಿ ಚರಣ
ಒಟ್ಟು ಮಾತ್ರೆಗಳು
1
ಶರ ಷಟ್ಪದಿ
4/4 = 8
4/4/4+2=14
2
ಕುಸುಮ ಷಟ್ಪದಿ
5/5 = 10
5/5/5+2=17
3
ಭೋಗ ಷಟ್ಪದಿ
3/3/3/3/ = 12
3/3/3/3/3/3+2 =20
4
ಭಾಮಿನಿ ಷಟ್ಪದಿ
3/4 3/4 = 14
3/4 3/4 3/4 +2 =23
5
ಪರಿವರ್ಧಿನಿ ಷಟ್ಪದಿ
4/4/4/4 = 16
4/4/4/4/4/4/+2 = 26
6
ವಾರ್ಧಕ ಷಟ್ಪದಿ
5/5/5/5/5= 20
5/5/5/5/5/5+2=32

ರಗಳೆ
ಇದು ಪ್ರಾಕೃತ(ಸಂಸ್ಕೃತ) ದ ರಘಟಾ ಎಂಬ ಪದದಿಂದ ರೂಪಗೊಂಡಿದೆ. ಪ್ರಾಚೀನ ಶಾಸನಗಳಲ್ಲಿ ಅಗಲಿ
ಕವಿರಾಜಮಾರ್ಗದಲ್ಲಾಗಲಿ ಬಳಕೆಗೊಂಡ್ಡಿಲ್ಲಾ.
ಇದರ ಮೊದಲ ಪ್ರಯೋಗ ಕಾಣುವುದು ಪಂಪನ ಅಧಿಪುರಾಣ ದಲ್ಲಿ
ಬಹುಶ: ಈ ರಗಳೆಗಳು ಕವಿರಾಜಮಾರ್ಗ ಮತ್ತು ಪಂಪನ ಮದ್ಯೆ ಯಾವುದಾದರೊಂದು ಕಾಲದಲ್ಲಿ
ರೂಪಗೊಂಡಿರಬಹುದು
ಲಕ್ಷಣಗಳು
1.ರಗಳೆಗಳಿಗೆ ಚರಣಗಲ ನಿರ್ಭಂದವಿಲ್ಲದಿದ್ದರು ಪ್ರಾಸಾಕ್ಷರದ ದೃಷ್ಥಿಯಿಂದ ಎರಡು ಸಾಲುಗಳಿರುತವೆ.
2. ಗಣ ನಿಯಮ ವಿಪರ್ಯಾಸವಾಗಿರುತ್ತದೆ, ಇದು ತಾಳಕ್ಕೆ ಹೊಂದಿಕೊಳ್ಳುವುದರಿಂದ ಇದನ್ನು ಹಾಡುಗಬ್ಬಾ ಎನ್ನುತ್ತಾರೆ
3. ಅಂತ್ಯ ಪ್ರಾಸ ಖಡ್ಡಾಯವಾಗಿ ಬಲಕೆಯಾಗಿತ್ತದೆ.
1 ನೇ ನಾಗವರ್ಮ ತನ್ನ ಛಂಧೋಬುದಿಯಲ್ಲಿ 3 ಪ್ರಕಾರದ ರಗಳೆಗಳನ್ನು ಹೇಳುತ್ತಾನೆ.
1. ಉತ್ಸಾಹ ರಗಳೆ 2. ಮಂದಾನಿಲ ರಗಳೆ 3. ಲಲಿತಾ ರಗಳೆ
1. ಉತ್ಸಾಹ ರಗಳೆ : ಇದರಲ್ಲಿ 3 ಪ್ರಕಾರದ ಗಣವಿನ್ಯಾಸವನ್ನು ಕಾಣುತ್ತೇವೆ. ಪ್ರತಿ ಚರಣದಲ್ಲಿ 3 ಮಾತ್ರೆಯ 4 ಗಣಗಳು ಆಧಿ ಪ್ರಾಸ ಖಡ್ಡಾಯವಲ್ಲದಿದ್ದರು ಅಂತ್ಯ ಪ್ರಾಸ ಖಡ್ಡಾಯ
ಉದಾ:1
- U
ತುಂ ಬಿ
- U
ವಿಂ ಡಿ
- U
ಯಾ ತೆ
- U
ಪಾ ಡಿ
3ಮಾತ್ರೆಯ 4 ಗಣಗಳು
- U
ಜ ಕ್ಕ
- U
ವ ಕ್ಕ
- U
ಯಂ ತೆ
- U
ಕೂ ಡಿ
3ಮಾತ್ರೆಯ 4 ಗಣಗಳು
ಉದಾ:2.
- U
ಮಾ ವಿ
U U -
ನ ಡಿ ಯಾ
- U
ಳಾ ಡು
-
ತಂ
3ಮಾತ್ರೆಯ 4 ಗಣಗಳು
- U
ಪಾ ಡ
- U
ವೆ ಯ್ದ
- U
ಕೇ ಳು
-
ತಂ
3ಮಾತ್ರೆಯ 4 ಗಣಗಳು

2.ಮಂದಾನಿಲ ರಗಳೆ : ಪ್ರತಿ ಚರಣದಲ್ಲಿ 4 ಮಾತ್ರೆಯ 4 ಗಣಗಳು,
ಆದಿ ಪ್ರಾಸ ನಿಯತವಲದಿದ್ದರು ಅಂತ್ಯ ಪ್ರಾಸ ಖಡ್ಡಾಯ
- U U
ಸ ತ್ಯ ದ
- -
ಸಾ ಕಾ
- -
ರಂ ಪಂ
- U U
ಚಾ ಕ್ಷ ರಿ

- U U
ನಿ ತ್ಯ ದ
U U -
ನಿ ಳ ಯಂ
- -
ಶ್ರೀ ಪಂ
- U U
ಚಾ ಕ್ಷ ರಿ

- U
ಅ ಲ್ಲಿ
U U U U U
ಸೊ ಗ ಯಿ ಸು ವ
U U U
ಕೃ ತ ಕ
U U U -
ಗಿ ರಿ ಗ ಳಿಂ

- U
ಕ ಲ್ಪ
U U U U U
ತ ರು ಗ ಳ ನೆ
- U
ಪೊ ಲ್ಪ
U U U -
ಮ ರ ಗ ಳಿಂ


3.ಲಲಿತಾ ರಗಳೆ : ಪ್ರತಿ ಚರಣದಲ್ಲಿ 5ಮಾತ್ರೆಯ 4 ಗಣಗಳು
ಆದಿ ಪ್ರಾಸ ನಿಯತವಲದಿದ್ದರು ಅಂತ್ಯ ಪ್ರಾಸ ಖಡ್ಡಾಯ
ಉದಾ:
- U U U
ಇಂ ತು ಕೊ ಡ

U U - U
ಲೆ ರೆ ವಿ ಕ್ಕು
- - U
ದಂ ತೊಂ ದ
- U -
ಕೋ ಲ್ನೆ ಲಂ
- U -
ಸಂ ತ ತಂ
U U - U
ಶಿ ವ ಭ ಕ್ತೆ
- U -
ಬೀ ಜ ವಿ
U U U -
ಕ್ಕು ವ ನೆ ಲಂ


ಅಂಶ ಗಣ
ಅಂಶಗಳಿಂದ ಕೂಡೀದ ಗಣವೇ ಅಂಶ ಗಣ, ಇಲ್ಲಿ ಪದ್ಯವನ್ನು ಅಳೆಯುವ ಮಾನದಂಡ ಅಂಶಗಳು, ಪ್ರತಿ ಗಣದ ಆರಂಭದ ಅಂಶ
2 ಲಘು ಅಥವಾ ಒಂದು ಗುರುವಿನಿಂದ ಕೂಡಿರಬೇಕು
ಇದರಲ್ಲಿ 3 ಪ್ರಕಾರಗಳು
ನಾವರ್ಮ ಜಯಕೀರ್ತಿ ಗುಣಚಂದ
ಬ್ರಹ್ಮಗಣ ರತಿ ಸೂರ್ಯ
ವಿಷ್ಭುಗಣ ಮದನ ಇಂದ್ರ
ರುದ್ರಗಣ ಶರ ಚಂದ್ರ

ತ್ರಿಪದಿ:
ನಾಗವರ್ಮನ ಛಂದೋಬುದಿಯಲ್ಲಿ ತ್ರಿಪದಿಯ ಲಕ್ಷಣವನ್ನು ಗುರಿತಿಸುತ್ತಾನೆ
ಲಕ್ಶಣಗಳು
1. ತ್ರಿಪದಿಯಲ್ಲಿ 3 ಸಾಲುಗಳ ಒಟ್ಟು 11 ಗಣಗಳಿರುತ್ತವೆ
2. 6 ಮತ್ತು 10 ಗಣಗಳು ಬ್ರಹ್ಮ ಗಣಗಳು
3. ಉಳಿದೆಲ್ಲ ಗಣಗಳು ವಿಷ್ಣುಗಣಗಳಾಗಿರುತ್ತವೆ
ಇದು ವಿಷ್ಣು ಪ್ರಧಾನ ಗಣ
ಉದಾ:
- U U U U U - U - U U U U U - U
ತಾ ವ ರೆ ಯ ಗಿ ಡ ಹು ಟ್ಟಿ ದೇ ವ ರಿ ಗೆ ನೆ ರ ಳಾ ದಿ
- - U U U U U U - U U U - U
ನಾ ಹು ಟ್ಟು ಮ ನಿ ಗೆ ಹೆ ರ ವಾ ದೆ ಹ ಡೆ ದ ವ್ವ
- - U U U U U U - U
ನೀ ಹು ಟ್ಟಿ ಮ ನಿ ಗೆ ಹೆ ಸ ರಾ ದೆ

ತ್ರಿಪದಿಯ ಇತಿಹಾಸ
ಮೊದಲು ದೊರೆತದ್ದು ಬಾದಾಮಿ ಅಥವಾ ಕಪ್ಪೆ ಅರಭಟ್ಟನ ಶಾಸನದಲ್ಲಿ
ಇದನು ಇಡಿಯಾಗಿ ಕಾವ್ಯಕ್ಕೆ ಬಳಿಸಿದವರು ಅಕ್ಕ ಮಹಾದೇವಿ
ಅಕ್ಕ ಮಹಾದೇವಿಯ ಕೃತಿ ಯೋಗಾಂಗ ತ್ರಿವಿದಿ
ಇದರೆ ಶ್ರೇಷ್ಠತ್ರೆಯನ್ನು ಸಂದಿಸಿದ್ದು ಸರ್ವಜ್ನನ ನಾಲಿಗೆ ಮೇಲೆ
ಸರ್ವಜ್ನ ತ್ರಿಪದಿಯ ಸಾರ್ವಭೌಮ
20 ನೇ ಶತಮಾನದಲ್ಲಿ ತ್ರಿಪಧಿಯನ್ನು ಇಡಿಯಾಗಿ ತನ್ನ ಕಾವ್ಯದಲ್ಲಿ ಬಳಿಸಿದವರು
ಜಯದೇವಿ ತಾಯಿ ಲಿಗಾಡೆ

ಅಲಂಕಾರಗಳು
ಆರಂಭದಲ್ಲಿ ಭರತನು ಗುರಿತಿಸಿದ ಅಲಂಕಾರಗಳು ನಾಲ್ಕು (4)
1. ಉಪಮಾ ಅಲಂಕಾರ 2. ರೂಪಕ ಅಲಂಕಾರ 3. ದೀಪಕ ಅಲಂಕಾರ ಮತ್ತು 4. ಯಮಕ ಅಲಂಕಾರ
ನಂತರ ಇವುಗಳ ಸಂಖ್ಯ ಬೆಳೆದರೂ ಸಹ ಮುಖ್ಯವಾಗಿ ಗುರಿತಿಸಿಕ್ಕೊಂಡಿದ್ದು ಮಾತ್ರ ಎರಡೆ
ಮುಖ್ಯವಾಗಿ ಅಲಂಕಾರಗಳು 2 ವಿಧಗಳು
1. ಶಬ್ದಾಲಂಕಾರಗಳು : ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರಗಳೆ ಅಲಂಕಾರಗಳು.
2 ಅರ್ಥಾಲಂಕಾರಗಳು : ಕಾವ್ಯದ ಆಂತರಿಕ ಸೌಂದರ್ಯವನ್ನು ಹೆಚ್ಚಿಸುವುದು

1. ಶಬ್ದಾಲಂಕಾರಗಳು : ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರಗಳೆ ಅಲಂಕಾರಗಳು / ಶಬ್ದ ಅಥವಾ ವರ್ಣಗಳ ಚಮತ್ಕಾರಗಳಿಂದ ಕಾವ್ಯದ
ಸೌಂದರ್ಯವನ್ನು ಉಂಟುಮಾಡುವುದು
ಉದಾ: 1. ಎಲ್ಲೋ ಹೂವಿನ ಸಿರಿ ಬೆಳ್ಳಿ ಕಾಲುಂಗರ
ಹಳ್ಳದ ನೀರು ತರುತಾಳ ನನ್ನ ಗೆಳತಿ
ಹಳ್ಳಿ ಗೌಡರ ಕಿರಿಮಗಳು
2. ಮಾರಯರು ಬೈದಾರು ಬಾರವೋ ಕಣ್ಣೀರು
ಮಾರಯರ ತಮ್ಮ ಮೈದುನ ಬೈದಾರ
ಮಾಡಿಲ್ಲದ ಮಳೆ ಸುರಿದಾಂಗ
ಶಬ್ದಾಲಂಕಾರಗಳಲ್ಲಿ ಮುಖ್ಯವಾಗಿ 3 ವಿಧ
1. ಅನುಪ್ರಾಸ 2.ಯಮಕ 3 ಚಿತ್ರಕವಿತ್ವ
1. ಅನುಪ್ರಾಸ: ಶಬ್ದ ಅಥವಾ ವರ್ಣ ಚಮತ್ಕಾರಗಳ ಮೂಲಕ ಕಾವ್ಯಕ್ಕೆ ಸೊಬಗನ್ನು ತಂದು ಕೊಡುವ ಅಲಂಕಾರ
ಉದಾ: ಕಾಡಿಗೆ ಹಚ್ಚಿದ ಕಣ್ಣು ತೀಡಿ ಮಾಡಿದ ಹುಬ್ಬು
ಅನುಪ್ರಾಸದಲ್ಲಿ 2 ವಿಧ 1. ವೃತ್ತಾನುಪ್ರಾಸ ಮತ್ತು 2. ಛೇಕಾನುಪ್ರಾಸ
ವೃತ್ತಾನುಪ್ರಾಸ : ಒಂದು ವ್ಯಂಜನ ಪದ್ಯದ ಒಂದು ಚರಣದಲ್ಲಿ ಅಥವಾ ಸಂಪೂರ್ಣ ಪದ್ಯದಲ್ಲಿ ಪುನರಾವರ್ತನೆಯಾಗುವುದು
ಉದಾ: ಕರಮಿಶದತ್ತ ಕಾಮುದಿಯ ಚಿತ್ತ
ಚಕೋರಿಯ ತುತ್ತ ನೀರತೋತದ ವಿಪತ್ತು ತಾರೆಗಳ ತುತ್ತು
ಛೇಕಾನುಪ್ರಾಸ: ಎರಡು ವ್ಯಂಜನ ಪದ್ಯದ ಒಂದು ಚರಣದಲ್ಲಿ ಅಥವಾ ಸಂಪೂರ್ಣ ಪದ್ಯದಲ್ಲಿ ಪುನರಾವರ್ತನೆಯಾಗುವುದು
ಉದಾ: ನೀಡಿ ನೀಡಿ ಕೆಟ್ಟರು ನಿಜವಿಲ್ಲದೇ
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
2.ಯಮಕಾಲಂಕಾರ: ಮೂರು ಅಥವಾ ಅದಕಿಂತ ಹೆಚ್ಚು ವ್ಯಂಜನ ಪದ್ಯದ ಒಂದು ಚರಣದಲ್ಲು ಅಥವಾ ಸಂಪೂರ್ಣ ಪದ್ಯದಲ್ಲು ಪುನರಾವರ್ತನೆ ಯಾಗುವುದು
ಉದಾ: ಬರಹೇಳ್ ನಿಕುಂಭನಂ ಶುಂಭನಂ ಜಂಭನಂ
ಬರಹೇಳ್ ಸಬಲನಂ ಪ್ರಬಲನಂ ಸುಬಲನಂ
ಬರಹೇಳ್ ಮಾಹ ನಂಭನಂ
3. ಚಿತ್ರಕವಿತ್ವ : ಅಕ್ಷರಗಳನ್ನು ಕುಶಲತೆಯಿಂದ ಆರಿಸಿ ಜೋಡಿಸಿ ಕವಿಗಳು ಉಂಟುಮಾಡುವ ವೈಚಿತ್ರ್ಯ
ಉದಾ: ನನ್ದನ ನನ್ದನ ನುನ್ನೊನ್ದನ
ಮೈ ಮುನ್ದೆ ನಿನ್ದೆದೆನ್ದೆನೆ ಮುದದಿ
2 ಅರ್ಥಾಲಂಕಾರಗಳು: ಕಾವ್ಯದ ಆಂತರಿಕ ಸೌಂದರ್ಯವನ್ನು ಹೆಚ್ಚಿಸುವುದು / ಅರ್ಥ ಚಮತ್ಕಾರದ ಮೂಲಕ ಕಾವ್ಯದ ಸೊಬಗನ್ನು ಹೆಚ್ಚಿಸುವುದು
ಇದರಲ್ಲಿ ಸುಮಾರು 120 ಬಗೆಗಳಿದ್ದರು ಮುಖ್ಯವಾಗಿ ಗುರುತಿಸಿಕೊಳ್ಳುವುದು 6 ಮಾತ್ರ
1. ಉಪಮಾ ಅಲಂಕಾರ 2. ರೂಪಕ ಅಲಂಕಾರ 3. ದೃಷ್ಠಾಂತ ಅಲಂಕಾರ 4.ಶ್ಲೇಷಾಲಂಕಾರ 5. ದೀಪಕ ಅಲಂಕಾರ ಮತ್ತು 6.ಉತ್ಪ್ರೇಕ್ಷಾಲಂಕಾರ
1. ಉಪಮಾ ಅಲಂಕಾರ : ಎರಡು ವಸ್ತು/ವ್ಯಕ್ತಿಗಳ ಮದ್ಯೆ ಇರುವ ಸದೃಶ ಹೋಲಿಕೆ ಸಂಪತ್ತನು ವರ್ಣಿಸುವುದು
ಇದು ನಾಲ್ಕು(4) ಅಂಶಗಳಾದ ಉಪಮಾನ, ಉಪಮೇಯ, ಉಪಮವಾಚಕ ಮತ್ತು ಸಮಾನಧರ್ಮ/ಉಭಯವಾಚಕ
ಗಳನ್ನೊಳಗೊಂಡಿರುತ್ತದೆ.
ಉದಾ: 1. ಪೀತಾಂಬರವನ್ನುಟ್ಟ ಶ್ರೀ ಕೃಷ್ಣ ಕುಂದಣದಲ್ಲಿಟ್ಟ ರತ್ನದಂತೆ ಹೊಳೆಯುತಿದ್ದ
ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ರತ್ನ
ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಶ್ರೀ ಕೃಷ್ಣ
ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ
ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಹೊಳೆಯುವುದು

ಉದಾ:2. ದಸರಾ ಕಾಲದ ಮೈಸೂರು ಇಂದ್ರನ ಅಮರಾವತಿಯಂತೆ ಝಗ ಝಗಸುತ್ತದೆ
ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ಅಮರಾವತಿ
ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಮೈಸೂರು
ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ :
ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಝಗ ಝಗಸುತ್ತದೆ
ಉಪಮಾಲಂಕಾರಗಳಲ್ಲಿ ಪ್ರಮುಖವಾಗಿ ಎರಡು ವಿಧ
1. ಪೂರ್ಣೋಪಮೇ ಅಲಂಕಾರ ಮತ್ತು 2. ಲುಪ್ತೋಪಮೇ ಅಲಂಕಾರ
1. ಪೂರ್ಣೋಪಮೇ ಅಲಂಕಾರ : ಇದು ನಾಲ್ಕು(4) ಅಂಶಗಳಾದ ಉಪಮಾನ, ಉಪಮೇಯ, ಉಪಮವಾಚಕ ಮತ್ತು ಸಮಾನಧರ್ಮ/ಉಭಯವಾಚಕ
ಗಳನ್ನೊಳಗೊಂಡಿರುತ್ತದೆ
ಉದಾ: ದಸರಾ ಕಾಲದ ಮೈಸೂರು ಇಂದ್ರನ ಅಮರಾವತಿಯಂತೆ ಝಗ ಝಗಸುತ್ತದೆ
ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ಅಮರಾವತಿ
ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಮೈಸೂರು
ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ :
ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಝಗ ಝಗಸುತ್ತದೆ

2.ಲುಪ್ತೋಪಮೇ ಅಲಂಕಾರ : ಇದರಲ್ಲಿ ನಾಲ್ಕು(4) ಅಂಶಗಳಲ್ಲಿ ಯಾವುದಾದರೊಂದು ಅಂಶ ಇಲ್ಲವಾಗಿರುತ್ತದೆ
ಉದಾ: ಅವಳ ಮುಖವು ಚಂದ್ರನಂತಿದೆ
ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ಚಂದ್ರ
ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಮುಖ
ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ :
ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಇಲ್ಲ
2. ರೂಪಕ ಅಲಂಕಾರ: ಉಪಮಾನ(ಹೋಲಿಸಿಕೊಳ್ಳುವುದು) ಉಪಮಾನ(ಹೋಲಿಸಲ್ಪಡುವುದು) ಒಂದೆ ಎಂದು ವರ್ಣಿತವಾಗುವುದು
ಉದಾ: ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವೈಯ್ಯಾ

3. ದೃಷ್ಠಾಂತ ಅಲಂಕಾರ: ಬಳಕೆಗೊಳ್ಳುವ ಎರಡು ವಾಕ್ಯಗಳು ಪ್ರತಿಬಿಂಬದಂತೆ ವರ್ಣಿತವಾಗುವುದು
ಸಾಮಾನ್ಯವಾಗಿ ಇದರಲ್ಲಿ ಬರುವುದು ಗಾದೆ ಮಾತುಗಳು
ಉದಾ: ಊರ ಉಪಕಾರ ಅರಿಯದು ಹೆಣ ಶೃಂಗಾರ ಅರಿಯದು
ಮಾತು ಬಲ್ಲವನಿಗೆ ಜಗಳವಿಲ್ಲ, ಊಟಬಲ್ಲವನಿಗೆ ರೋಗವಿಲ್ಲ
4.ಶ್ಲೇಷಾಲಂಕಾರ: ಒಂದೇ ಶಬ್ದದಲ್ಲಿ ನಾನ ಅರ್ಥಗಳು ಬರುವಂತೆ ವರ್ಣಿಸುವುದು.
ಉದಾ: ಶ್ರೀಯುವತಿ ಪ್ರಿಯಂ ಬಲವಿತಂ ಬಲಿದರ್ಪ ಹರಂ.
ಇಲ್ಲಿ: ಶ್ರೀಯುವತಿ ಪ್ರಿಯಂ ಎಂದರೆ ಒಂದೇ ಅರ್ಥ ವಿಷ್ಣು ಇನ್ನೊಂದು ಅರ್ಥದಲ್ಲಿ ಸಂಪತ್ತಿನ ಒಡೆಯ ರಾಜ
5. ದೀಪಕ ಅಲಂಕಾರ: ಪ್ರಸ್ತುತ ಮತ್ತು ಅಪ್ರಸ್ತುತ ವಸ್ತುಗಳ ವ್ಯಕ್ತಿಗಳಿಗೆ ಒಂದೆ ಧರ್ಮವಿದೆ ಎಂದು ವರ್ಣಿಸುವುದು
ಉದಾ: ಗಿಳಿಮರಿ ನೆರೆಯದ ನಂದನ ವಳಿಸಿಸು ವಿಹರಿಸು ಪೂಗಳ ಕಳವರದಿಂ
ದೆಳೆಯಂಚೆಡಿಯಿಡದ ತಣ್ಬುಳ್ಳಿ ಬರ್ಬರ ನಾಡದ ದಂಗಳಂ ಮಂಜುಳ ಮಲ್ಲಿ
ಮೇಲಿನ ಉದಾಹರಣೆಯಲ್ಲಿ ::ಗಿರಿಮರಿಯಿಲ್ಲದ ತೋಟ, ಮರಿದುಂಬಿಯಿಲ್ಲದ ತೋಟ, ಹಂಸಗಳಿಲ್ಲದ ಸರೋವರ
ಇವೆಲ್ಲವೂ ಅಪ್ರಸ್ತುತ
ಮಕ್ಕಳಾಡದ ಅಂಗಳ ಅಂಗಳವಲ್ಲ ಎನ್ನುವುದು ಪ್ರಸ್ತುತ
6.ಉತ್ಪ್ರೇಕ್ಷಾಲಂಕಾರ: ಉಪಮಾನ ಅಥವಾ ಉಪಮೇಯ ಕವಿ ಕಲ್ಪಿತವಾಗಿರುವುದು
ಉದಾ;ನೀ ಉಟ್ಟ ರೇಷ್ಮೆಗಿಂತ ನಿನ್ನ ಮೈ ನುಣುಪ
ಬೆಟ್ಟದ ಅರಿಗಿಳಿಗಿಂತ ನಿನ್ನ ನುಡಿ ಇಂಪು
ರಸಗಳು
ಅಭಿನವ ಗುಪ್ತನ ಪ್ರಕಾರ ರಸಗಳು 9 ಪ್ರಕಾರಗಳು
ಕ್ರ. ಸಂ
ರಸ
ಸ್ಥಾಯಿ ಭಾವ
ಬಣ್ಣ
ಅಧಿ ದೇವತೆ
1
ಶೃಂಗಾರ
ರತಿ
ನೀಲಿ
ವಿಷ್ಣು
2
ಹಾಸ್ಯ
ಹಾಸ
ಬಿಳಿ
ಗಣಪತಿ
3
ಕರುಣೆ
ಶೋಕ
ಕಪೋತ
ಯಮ
4
ರೌದ್ರ
ಕ್ರೋದ
ರಕ್ತ
ಈಶ್ವರ
5
ವೀರ
ಉತ್ಸಾಹ
ಹೇಮ
ಇಲ್ಲ
6
ಭಯಾನಕ
ಭಯ
ಕಪ್ಪು
ಕಾಲದೇವತೆ
7
ಭೀಬತ್ಸ
ಜುಗುಪ್ಸೆ
ನೀಲಿ
ಮಹಾಕಾಲ
8
ಅದ್ಭುತ
ವಿಸ್ಮಯ
ಹಳದಿ
ಇಲ್ಲ
9
ಶಾಂತ ರಸ
ಕ್ಷಮೆ
ಇಲ್ಲ
ಇಲ್ಲ