Thursday, April 28, 2011

ಮಾದರಿ ಪ್ರಶ್ನೆಗಳು

1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?


- ಮಲ್ಲಬೈರೆಗೌಡ.


2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?


- ಟಿಪ್ಪು ಸುಲ್ತಾನ್.


3) ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?


- ಚಿತ್ರದುರ್ಗ.


4) "ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?


- ಕೃಷ್ಣದೇವರಾಯ.


5) ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?


- ಪಂಪಾನದಿ.


6) "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?


- ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.


7) ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?


- ಹೈದರಾಲಿ.


8) ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?


- ಶ್ರೀರಂಗ ಪಟ್ಟಣದ ಪಾಲಹಳ್ಳಿ.


9) ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?


- ಕಲಾಸಿಪಾಳ್ಯ.


10) ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?


- ಕೆಂಗಲ್ ಹನುಮಂತಯ್ಯ.


11) ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?


- 7


12) ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?


- "ಸರ್. ಮಿರ್ಜಾ ಇಸ್ಮಾಯಿಲ್"


13) ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?


- ರಾಮಕೃಷ್ಣ ಹೆಗ್ಗಡೆ.


14) "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?


- ದೇವನಹಳ್ಳಿ (ದೇವನದೊಡ್ಡಿ)


15) ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?


- ವಿಜಯನಗರ ಸಾಮ್ರಾಜ್ಯ.


16) ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?


ತಿರುಮಲಯ್ಯ.


17"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು?


- ಶ್ರೀರಂಗ ಪಟ್ಟಣದ ಕೋಟೆ.


18) ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?


- ಶಿವಮೊಗ್ಗ ಜಿಲ್ಲೆಯ ಮತ್ತೂರ್.


19) ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?


- ಶಿರಸಿಯ ಮಾರಿಕಾಂಬ ಜಾತ್ರೆ.


20) ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?


- ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)


21) ರಾಯಚೂರಿನ ಮೊದಲ ಹೆಸರೇನು?


- ಮಾನ್ಯಖೇಟ.


22) ಕನ್ನಡದ ಮೊದಲ ಕೃತಿ ಯಾವುದು?


- ಕವಿರಾಜ ಮಾರ್ಗ


23) ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.


ಹಂಪೆ.


24) ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?


- ಶ್ರಾವಣಬೆಳಗೊಳದ ಗೊಮ್ಮಟೇಶ್ವರ.


25) ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು?


- ಕರ್ನಲ್ ವಸಂತ್.
26) ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?


- ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.


27) ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?


- ಮುಳ್ಳಯ್ಯನ ಗಿರಿ.


28) ಮೈಸೂರು ಅರಮನೆಯ ಹೆಸರೇನು?


- ಅಂಬಾವಿಲಾಸ ಅರಮನೆ.


29) ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?


- ಬಾಬಾ ಬುಡನ್ ಸಾಹೇಬ.


30) "ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?


- ದಾವಣಗೆರೆ.


31) ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?


- ಆಗುಂಬೆ.


32) ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?


ಬೆಂಗಳೂರು ನಗರ ಜಿಲ್ಲೆ.


33) ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?


- ಹಲ್ಮಿಡಿ ಶಾಸನ.


34) ಕರ್ನಾಟಕದ ರಾಜ್ಯ ಪಕ್ಷಿ ಯಾವುದು?


- ನೀಲಕಂಠ ಪಕ್ಷಿ.


35) ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?


- ಕೆ.ಸಿ.ರೆಡ್ಡಿ.


36) ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?


- ಶ್ರೀ ಜಯಚಾಮರಾಜ ಒಡೆಯರು.


37) ಕರ್ನಾಟಕದ ಮೊದಲ ಕವಯತ್ರಿ ಯಾರು?


- ಅಕ್ಕಮಹಾದೇವಿ.


38) ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?


- ವಡ್ಡರಾದನೆ.


39) ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?


- ಮೈಸೂರು ವಿಶ್ವವಿಧ್ಯಾನಿಲಯ.


40) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು?


- "ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ"


41) "ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು?


- ಪುರಂದರ ದಾಸರು.


42) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?


- ರಾಯಚೂರು ಜಿಲ್ಲೆ.


43) ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?


- ರಾಮನಗರ.


44) ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?


- ಮಂಡ್ಯ ಜಿಲ್ಲೆ.


45) ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?


- ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ.
46) ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-


ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ


47) ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು?


- ಗರಗ,


48) ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?


- ಕೊಡಗು.


49) ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?


- ಲಿಂಗನಮಕ್ಕಿ ಅಣೆಕಟ್ಟು.


50) ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು ಯಾರು?


- ಕುವೆಂಪು.
51) ವಿಶ್ವದ ಅತಿ ದೊಡ್ಡ ನಗರ ಯಾವುದು?


ನ್ಯೂಯಾರ್ಕ್ ನಗರ.


52) ಲಿಬರ್ಟಿ ಪ್ರತಿಮೆ ಯಾವದ ದೇಶದಲ್ಲಿದೆ?


- ಅಮೇರಿಕಾ


53) ಭಾರತದ ದಕ್ಷಿಣ ಭಾಗದ ತುತ್ತ ತುದಿ ಯಾವುದು?


- ಇಂದಿರಾ ಪಾಯಿಂಟ್.


54) ಕರ್ನಾಟಕದ ಪಶ್ಚಿಮ ಘಟ್ಟದಲ್ಲಿರುವ ಅಣು ವಿಧ್ಯುತ್ ಸ್ಥಾವರ ಯಾವುದು?


- ಕೈಗಾ ಅಣು ವಿಧ್ಯುತ್ ಸ್ಥಾವರ.


55) ಕರ್ನಾಟಕದ ಯಾವ ಜಿಲ್ಲೆಯಲ್ಲಿ ವಾಯು ವಿಧ್ಯುತ್ ಸ್ತಾವರವಿದೆ?


- ಚಿತ್ರ ದುರ್ಗಾ.


56) ಕರ್ನಾಟಕದಲ್ಲಿ ಗುಹಾಂತರ ದೇವಾಲಯಗಳನ್ನು ಯಾವ ಜಿಲ್ಲೆಯಲ್ಲಿ ಕಾಣಬಹುದು?


- ಬೆಳಗಾಂ.


57) ಮೈಸೂರು ಅರಮನೆಯ ವಿನ್ಯಾಸವನ್ನು ಹೋಲುವ ಕಟ್ಟಡ ಬೆಂಗಳೂರಿನಲ್ಲಿದೆ. ಅ ಕಟ್ಟಡ ಯಾವುದು?


ಲೀಲಾ ಪ್ಯಾಲೇಸ್.


58) "ಷೋ ಮೇಕರ್ ಲೆವಿ ೯" ಧೂಮಕೆತುವನ್ನು ಕಂಡು ಹಿಡಿದವರು ಯಾರು?


- ಷೋ ಮೇಕರ್ ಲೆವಿ ೯


.59) "ತಾಜ್ ಮಹಲ್" ಇರುವ ಸ್ಥಳದಲ್ಲಿ ಮೊದಲು ಒಂದು ದೇವಾಲಯವಿತ್ತು ಆ ದೇವಾಲಯ ಯಾವುದು?


- "ತೇಜೋ ಮಹಾಲಯ"


60) ಕರ್ನಾಟಕದ ಅತಿ ದೊಡ್ಡ ದ್ವೀಪ ಯಾವುದು?


- ಶ್ರೀ ರಂಗ ಪಟ್ಟಣ.


61) ಜಾನಪದ ಸಾಹಿತ್ಯದಲ್ಲಿ ಹೆಚ್ಚಾಗಿ ಬಳಸಿರುವ "ಮರುಗದ ಕೆರೆ" ಕರ್ನಾಟಕದ ಯಾವ ಊರಿನಲ್ಲಿದೆ.


- ಶಿಕಾರಿಪುರದ ಮರುಗದ ಗ್ರಾಮ.


62) ಕರ್ನಾಟಕದ ಹಿಂದುಳಿದ ಜಿಲ್ಲೆ ಯಾವುದು?


- ಚಾಮರಾಜ ನಗರ.


63) ವೈಧ್ಯಕೀಯ ಕ್ಷೇತ್ರದ ಪಿತಮಹಾಯ ಯಾರು?


- ಸುಶ್ರುತ.


64) ಅತಿ ವೇಗವಾಗಿ ಜನಸಂಖ್ಯಾ ಸ್ಪೋಟವಾಗುತ್ತಿರುವ ರಾಷ್ಟ್ರ ಯಾವುದು?


- ಭಾರತ.


65) ಭವಿಷ್ಯದ ವಿದ್ಯುತ್ತಿನ ಮೂಲ ಎಂದು ಯಾವುದನ್ನು ಕರೆಯುತ್ತಾರೆ?


- ಚಂದ್ರ.


66) ಭಾರತದಲ್ಲಿ ಮೊದಲು ಶಾಸ್ತ್ರೀಯ ಸ್ಥಾನ ಪಡೆದ ಭಾಷೆ ಯಾವುದು?


- ಸಂಸ್ಕೃತ.


67) "ಇಗೋ ಕನ್ನಡ" ಎನ್ನುವ ಕನ್ನಡದ ನಿಘಂಟನ್ನು ಬರೆದವರು ಯಾರು?


- ಪ್ರೊ. ಜಿ.ವೆಂಕಟಸುಬ್ಬಯ್ಯ.


68) ಮೈಸೂರು ದಸರಾ ಉತ್ಸವದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡುವ ಸಿಂಹಾಸನದ ಹೆಸರೇನು?


- "ಕರ್ನಾಟಕ ರತ್ನ ಸಿಂಹಾಸನ".


69) "ಗೆರಿಲ್ಲಾ" ಎನ್ನುವ ಯುದ್ದ ಕಲೆಯನ್ನು ಪರಿಚಯಿಸಿದ ವ್ಯಕ್ತಿ ಯಾರು?


- ಛತ್ರಪತಿ ಶಿವಾಜಿ.


70) ವಿಶ್ವದ ಅತಿ ಎತ್ತರವಾದ ಎರಡನೆಯ ಶಿಖರ ಯಾವುದು?


- ಕೆ೨


71) ವಿಶ್ವದ ಅತಿ ಎತ್ತರವಾದ ೩ ನೆ ಶಿಖರ ಯಾವುದು?


- ಕಾಂಚನಚುಂಗ.


72) ಭಾರತದಲ್ಲಿ ಎರಡು ರಾಜಧಾನಿಯನ್ನು ಹೊಂದಿರುವ ರಾಜ್ಯ ಯಾವುದು?


- ಜಮ್ಮು-ಕಾಶ್ಮೀರ.


73) ಅಗಾಗ ಭೂಮಿಯಲ್ಲಿ ಗೋಚರಿಸುವ ಅನ್ಯಗ್ರಹ ಜೀವಿಗಳ ವಾಸಸ್ಥಳ ಭೂಮಿಯಿಂದ ಎಷ್ಟು ದೂರದಲ್ಲಿದೆ?


- 17 ಜ್ಯೋತಿರ್ವರ್ಷ.


74) ಭಾರತದಲ್ಲಿ ಹೆಚ್ಚಾಗಿ ಹವಳಗಳು ಎಲ್ಲಿ ದೊರೆಯುತ್ತದೆ?


- ಅಂಡಮಾನ್ ಮತ್ತು ನಿಕೊಬಾರ್.


75) "ಶಾಸ್ತ್ರೀಯ ಭಾಷೆ"ಗೆ ಕನ್ನಡದಲ್ಲಿ ಏನೆಂದು ಕರೆಯುತ್ತಾರೆ?


ಚೆನ್ನುಡಿ"
76 ಅತಿ ಹೆಚ್ಚು ವೇಗವಾಗಿ ಓಡುವ ಪ್ರಾಣಿ ಯಾವುದು?


- ಚಿರತೆ.


77) ಭಾರತದ ರಾಷ್ಟ್ರೀಯ ಪಕ್ಷಿ ಯಾವುದು?


- ನವಿಲು.


78) ಭಾರತೀಯರು ಯಾವ ದೇಶಕ್ಕೆ ಪ್ರಯಾಣಿಸಲು "ಪಾಸ್ ಪೋರ್ಟ್ ಮತ್ತು ವೀಸಾ"ದ ಅಗತ್ಯವಿಲ್ಲ?


- ನೇಪಾಳ


79) ಕನ್ನಡದ ಮೊದಲ ವಾಕಿ ಚಿತ್ರ ಯಾವುದು?


- ಸತಿ ಸುಲೋಚನ.


80)ಕಂಪ್ಯೂಟರಿನ ಮೆದುಳು ಎಂದು ಯಾವುದನ್ನು ಕರೆಯುತ್ತಾರೆ?


- ಸಿಪಿಯು (ಸೆಂಟ್ರಲ್ ಪ್ರಾಸೆಸ್ಸಿಂಗ್ ಯುನಿಟ್)


81) ಭಾರತ ಷೇರು ಮಾರುಕಟ್ಟೆ ಯಾವ ರಾಜ್ಯದಲ್ಲಿದೆ.


- ಮಹಾರಾಷ್ಟ್ರ.


82) ಭಾರತದ ರಾಷ್ಟ್ರಧ್ವಜದ ವಿನ್ಯಾಸಗಾರ ಯಾರು?-


Lt. ಶ್ರೀ ಪಿಂಗಲಿ ವೆಂಕಯ್ಯ.


83) ವಿಶ್ವದಲ್ಲೇ ಅತಿ ಉದ್ದವಾದ ನದಿ ಯಾವುದು?


- ನೈಲ್ ನದಿ.


84) ವಿಶ್ವದಲ್ಲೇ ಅತಿ ಉದ್ದವಾದ ಹೆದ್ದಾರಿ ಯಾವುದು?


- ಕೆನಡಾದ ಟ್ರಾನ್ಸ್ ಹೆದ್ದಾರಿ (8000 ಕಿ.ಮೀ.)


85) ಭಾರತದಲ್ಲಿರುವ ಮರುಭೂಮಿ ಯಾವುದು?


- ಥಾರ್ ಮರುಭೂಮಿ.


86) ವಿಶ್ವದ ಅತಿ ದೊಡ್ಡ ಮರುಭೂಮಿ ಯಾವುದು?


- ಸಹರ ಮರುಭೂಮಿ.


87) ಅತಿ ಹೆಚ್ಚು ಕಾಫಿ ಬೆಳೆಯುವ ದೇಶ ಯಾವುದು?


- ಬ್ರೆಜಿಲ


88) "ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನ"ವನ್ನು ಬೇರ್ಪಡಿಸುವ ಗಡಿ ಯಾವುದು?


- ಡುರಾಂಡ್ ಲೈನ್.


89) ಭೂಮಿಯಲ್ಲಿ ಅತಿಹೆಚ್ಚು ತಂಪು ವಾತಾವರಣವನ್ನು ಹೊಂದಿರುವ ಪ್ರದೇಶ ಯಾವುದು?


- ಸೈಬಿರಿಯಾದ ವೆರ್ಕೊಯನ್ಸ್ಕ್.


90) ಜಪಾನಿಯರು ತಮ್ಮ ದೇಶವನ್ನು ಏನೆಂದು ಕರೆಯುತ್ತಾರೆ?


- ನಿಪ್ಪೋನ್.


91) ಮೊಟ್ಟ ಮೊದಲು ಕೈಗಾರಿಕಾ ಕ್ರಾಂತಿಯನ್ನು ಕಂಡ ದೇಶ ಯಾವುದು?


- ಇಂಗ್ಲೆಂಡ್.


92) "ಭಾರತ ರತ್ನ" ಪ್ರಶಸ್ತಿ ಪಡೆದ ಮೊದಲ ವಿದೇಶಿ ವ್ಯಕ್ತಿ ಯಾರು?


- ನೆಲ್ಸನ್ ಮಂಡೇಲಾ.


93) ಬಿಳಿ ಆನೆಗಳ ಭೂಮಿ ಎಂದು ಗುರುತಿಸಿಕೊಂಡ ಮೊದಲ ದೇಶ ಯಾವುದು?


- ಥೈಲ್ಯಾಂಡ್.


94) ವಿಶ್ವದ ಅತಿ ಎತ್ತರವಾದ ಜಲಪಾತ ಯಾವುದು?


- ಸಲ್ತೋ ಏಂಜೆಲ್ ಜಲಪಾತ.


95) ವಿಶ್ವದ ಅತಿ ದೊಡ್ಡ ಗ್ರಂಥಾಲಯ ಯಾವುದು?


- ಯುನಟೆಡ್ ಸ್ಟೇಟ್ಸ್ ಲೈಬ್ರರಿ ಆಫ್ ಕಾಂಗ್ರೆಸ್.


96) ವಿಶ್ವದ ಅತಿ ದೊಡ್ಡ "ವಸ್ತುಸಂಗ್ರಹಾಲ"ಯ ಯಾವುದು?


- ಅಮೇರಿಕನ್ ಮ್ಯೂಸಿಯಮ್ ಆಫ್ ನ್ಯಾಷನಲ್ ಹಿಸ್ಟರಿ (ಅಮೆರಿಕಾದ ರಾಷ್ಟ್ರೀಯ ಐತಿಹಾಸಿಕ ವಸ್ತು ಸಂಗ್ರಹಾಲಯ)


97) ವಿಶ್ವದ ಅತಿ ದೊಡ್ಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಯಾವುದು?


- ಕಿಂಗ್ ಕಾಲಿದ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ (ಸೌದಿ ಅರೇಬಿಯಾ)


98) ವಿಶ್ವದ ಅತಿ ದೊಡ್ಡ ಚರ್ಚ್ ಯಾವುದು?


- ರೋಮ್ ನ ಬ್ಯಾಸಿಲಿಕಾ ಆಫ್ ಸೆಂಟ್ ಪೀಟರ್.


99) ವಿಶ್ವದ ಅತಿ ಉದ್ದವಾದ ರೈಲ್ವೆ ಮಾರ್ಗ ಯಾವುದು?


- ಒಶಿಂಜು ಟುನೆಲ್.


100) ವಿಶ್ವದ ಹಳೆಯ ರೈಲ್ವೆ ಸುರಂಗ ಮಾರ್ಗ ಇಂಗ್ಲೆಂಡಿನ ಯಾವ ಪ್ರದೇಶದಲ್ಲಿದೆ?


- ಲಂಡನ್.
101) ಭಾರತದ ರಾಜಧಾನಿ ಯಾವುದು?


- ದೆಹಲಿ


102) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅತಿಹೆಚ್ಚು ತರಕಾರಿಗಳನ್ನು ಬೆಳೆಯುತ್ತಾರೆ?


- ಹಾಸನ.


103) ಕರ್ನಾಟಕದ ಕವಿಗಳ ನಾಡು ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ?


- ದಾರವಾಡ.


104) ವಿಶ್ವ ಪ್ರಸಿದ್ದ ಕಲ್ಲಿನ ರಥ ಯಾವ ಜಿಲ್ಲೆಯಲ್ಲಿದೆ?


- ಬಳ್ಳಾರಿ.


105) "ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ"ನವರ ಜನ್ಮ ಸ್ಥಳ ಯಾವುದು?


-ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೆನಹಲ್ಲಿ.


106) ಕರ್ನಾಟಕ ಸರ್ಕಾರದ ಸುಪ್ರಸಿದ್ದ ಹೋಟೆಲ್ ಯಾವುದು?


- ದಿ ಗ್ರಾಂಡ್ ಅಶೋಕ.


107) ಮಂಡ್ಯ ಜಿಲ್ಲೆಯಲ್ಲಿರುವ ಪಕ್ಷಿಧಾಮ ಯಾವುದು?


- ರಂಗನತಿಟ್ಟು.


108) ಕರ್ನಾಟಕ ಆರಕ್ಷಕರ ಗಸ್ತು ವಾಹನಕ್ಕೆ ಏನೆಂದು ಕರೆಯುತ್ತಾರೆ?


- ಹೊಯ್ಸಳ.


107) ಕೆಂಪೇಗೌಡರು ನಿರ್ಮಿಸಿದ ಅವಳಿನಗರಗಳು ಯಾವುದು?


- ಬೆಂಗಳೂರು ಮತ್ತು ಯಲಹಂಕ.


108) ಭಾರತ ದೇಶದ ಯಾವ ರಾಜ್ಯದಲ್ಲಿ ಅತಿ ಹೆಚ್ಚು "ಶಿಲಾ ಶಾಸನ ಮತ್ತು ವೀರಗಲ್ಲು"ಗಳನ್ನೂ ಕಾಣಬಹುದು?


- ಕರ್ನಾಟಕ.


109) "ಗೋಪಾಲರಾಯನ ಹೆಬ್ಬಾಗಿಲು" ಎಂದು ಪ್ರಸಿದ್ದವಾದ ಕಲ್ಲಿನ ಸ್ಮಾರಕ ಕರ್ನಾಟಕದ ಯಾವ ಊರಿನಲ್ಲಿದೆ?


- ಮೇಲುಕೋಟೆ.


110) ಮಂಡ್ಯ ಜಿಲ್ಲೆಯಲ್ಲಿರುವ ಜಲಾಶಯ ಯಾವುದು?


- ಕೃಷ್ಣರಾಜ ಸಾಗರ


111) ಪ್ರೆಂಚ್ ಮಾದರಿಯ ರಕ್ಷಣೆಯನ್ನು ಹೊಂದಿದ್ದ ಕೋಟೆ ಯಾವುದು?


- ಶ್ರೀ ರಂಗಪಟ್ಟಣದ ಕೋಟೆ.


112) ಏಷ್ಯ ಖಂಡದಲ್ಲೇ ಅತಿ ಎತ್ತರವಾದ ಏಕಶಿಲಾ ಬೆಟ್ಟ ಯಾವ ಊರಿನಲ್ಲಿದೆ?


- ಮಧುಗಿರಿ.


113) ಕನ್ನಡಿಗರ ಬಲಿಷ್ಟ ಸಾಮ್ರಾಜ್ಯ ಯಾವುದು?


- ರಾಷ್ಟ್ರಕೂಟರ ಸಾಮ್ರಾಜ್ಯ.


114) ಯಾರ ಒಂದು ಆಳ್ವಿಕೆಯಲ್ಲಿ ಕರ್ನಾಟಕವ ವೈಭವದ ತುತ್ತ ತುದಿಯನ್ನು ಮುಟ್ಟಿತ್ತು?


- ಶ್ರೀ ಕೃಷ್ಣ ದೇವಾರಾಯ.


115) ವಿಜಯನಗರ ಸಾಮ್ರಾಜ್ಯದ ಮೊದಲ ಚಕ್ರವರ್ತಿ ಯಾರು?


- ಒಂದನೇ ಹರಿಹರ (ಹಕ್ಕ ಮಹಾಶಯ)


116) ಕೆ.ಅರ್.ಎಸ್ ಜಲಾಶಯದಲ್ಲಿ ಮುಳುಗಿಹೋಗಿರುವ ದೇವಾಲಯ ಯಾವುದು? ಇದು ಯಾರ ಕಾಲದ್ದು?


- ವೇಣುಗೋಪಾಲ ಸ್ವಾಮಿ ದೇವಾಲಯ. ಇದು ಚೋಳರ ಕಾಲದ್ದು?


117) "ಕನ್ನಡ ಚಿತ್ರರಂಗದ ಬೀಷ್ಮ" ಎಂದು ಯಾರನ್ನು ಕರೆಯುತ್ತಾರೆ?


- ಹೊನ್ನಪ್ಪ ಭಾಗವತರ್.


118) ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಯಾರು?


- ಪ್ರತಿಭಾದೇವಿ ಸಿಂಗ್ ಪಾಟಿಲ್.


119) ಕರ್ನಾಟಕ ರಾಜ್ಯದಲ್ಲಿ ಎಷ್ಟು "ವಿಧಾನಸಭೆ" ಕ್ಷೇತ್ರಗಳಿವೆ


- ೨೨೪


120) ಕರ್ನಾಟಕ ರಾಜ್ಯದ ಅತಿದೊಡ್ಡ ಆನೆಗಳ ಬಿಡಾರ ಎಲ್ಲಿದೆ?


- ಸಕ್ರೆ ಬೈಲು.


121) ಮೈಸೂರು ಅರಮನೆಯ ವಿನ್ಯಾಸಕ ಯಾರು?


- ಹೆನ್ರಿ ಇರ್ವಿನ್.


122) ಭಾರತದಲ್ಲಿ ಮೊದಲು ಸಿಮೆಂಟ್ ಕಾರ್ಖಾನೆ ಎಲ್ಲಿ ಸ್ಥಾಪನೆ ಆಯಿತು?


- ಚೆನ್ನೈ.


123) "ಟಿಪ್ಪು ಸುಲ್ತಾನ"ನ ಅರಮನೆಯನ್ನು ಏನೆಂದು ಕರೆಯುತ್ತಾರೆ?


- ಕೆಂಪು ಭವನ, (ಲಾಲ್ ಮಹಲ್)
124) ವಿಮಾನವನ್ನು ಕಂಡುಹಿಡಿದವರು ಯಾರು?


- ರೈಟಾ ಸಹೋದರರು.


125) ಭಾರತೀಯ ಅಂಚೆ ಕಛೇರಿ ಮತ್ತು ಸ್ಟಾಂಪುಗಳು ಅಧಿಕೃತವಾಗಿ ಯಾವಾಗ ಜಾರಿಗೆ ಬಂತು?


- ಅಕ್ಟೋಬರ್ ೧ನೇಯಾ 1854


126) ವೈದ್ಯಕೀಯ ಇತಿಹಾಸದಲ್ಲಿ ಸಿಜ್ಹಲ್ ಅಪರೇಷನ್ ಮೂಲಕ ಜನಿಸಿದ ಮೊದಲ ವ್ಯಕ್ತಿ ಯಾರು?


- ಜೂಲಿಯಸ್ ಸಿಜ್ಹಲ್.


127) ಮೊದಲ ಜೆಟ್ ವಿಮಾನವನ್ನು ಯಾರು? ಎಲ್ಲಿ? ಯಾವಾಗ? ಕಂಡುಹಿಡಿದರು?


- ಫ್ರಾಂಕ್ ವೈಟಿಲಫ್, ಇಂಗ್ಲೆಂಡ್, ೧೯೩೦


128) ಪ್ರಪಂಚದಲ್ಲಿ ಜನಸಂಖ್ಯಾನುಸಾರ ಹೆಚ್ಚು ಮಾತನಾಡುವ ಭಾಷೆಯಲ್ಲಿ ಕನ್ನಡವು ಎಷ್ಟನೆಯದಾಗಿದೆ?


- ೩೦


129) ಕನ್ನಡದ ಮೊದಲ ಸಾಹಿತಿ ಯಾರು?


- ಗಂಗರ ಕಾಲದ "ಧ್ರುವನೀತ ಚಾವುಂಡರಾಯ".


1೩೦) ಕನ್ನಡದ (ಕನ್ನಡಿಗರ) ಮೊದಲ ಸಾಮ್ರಾಜ್ಯ ಯಾವುದು?


- ಕದಂಬ ಸಾಮ್ರಾಜ್ಯ.


131) ಬನವಾಸಿ ಎಂದು ಈಗಿನ ಯಾವ ಜಿಲ್ಲೆಯನ್ನು ಕರೆಯುತ್ತಿದ್ದರು.


- ಉತ್ತರ ಕನ್ನಡ ಜಿಲ್ಲೆ.
132) ಹೊಯ್ಸಳರ ಸಮ್ರಾಜ್ಯದ ರಾಜಧಾನಿ ಯಾವುದು?


- ಹಳೇಬೀಡು.


133) ಕನ್ನಡವನ್ನು "ವಿಶ್ವ ಲಿಪಿಗಳ ರಾಣಿ" ಎಂದು ಯಾರು ವರ್ಣಿಸಿದ್ದಾರೆ?


- "ಭೂದಾನ ಚಳುವಳಿ ನೇತಾರ - ಶ್ರೀ ವಿನೋಭಾ ಭಾವೆ"


134) "ಕರ್ನಾಟಕ ಕುಲ ಪುರೋಹಿತ" ಎಂದು ಯಾರನ್ನು ಕರೆಯುತ್ತಾರೆ?


- ಆಲೂರು ವೆಂಕಟರಾಯರು.


135) "ಹಬಶಿಕೋಟೆ" ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?


- ಬೀದರ್.


136) ಚಂದ್ರನ್ನನ್ನು ಸ್ಪರ್ಶಿಸಿದ ಮೊದಲ ಮಾನವ ಯಾರು?


- ನೀಲ್ ಆರ್ಮ್ ಸ್ಟ್ರಾಂಗ್.


137) ದೂರವಾಣಿಯನ್ನು ಕಂಡುಹಿಡಿದವರು ಯಾರು?


- ಗ್ರಾಂಬೆಲ್


138) ವಿಧ್ಯುತ್ ಅನ್ನು ಕಂಡು ಹಿಡಿದವರು ಯಾರು?


- ಥಾಮಸ್ ಅಲ್ವ ಎಡಿಸನ್


139) ಬಾನುಲಿ (ರೇಡಿಯೋ) ಅನ್ನು ಕಂಡುಹಿಡಿದವರು ಯಾರು?


- ಮಾರ್ಕೋನಿ.


140) "ನಿತ್ಯೋತ್ಸವ"ವನ್ನು ಕರೆದವರು ಯಾರು?


- ಕೆ. ಎಸ್ ನಿಸಾರ್ ಅಹಮದ್.


141) ಹುಲಿ ಯಾವ ರಾಷ್ಟ್ರೀಯ ಪ್ರಾಣಿ?


- ಭಾರತ.


142) ಕನ್ನಡದ ಕೀಲೀ ಮಣೆಯನ್ನು ಕಂಡು ಹಿಡಿದವರು ಯಾರು?


- ಕೌಶಿಕ ಅನಂತಸುಬ್ಬರಾಯರು.


143) ಕ್ರಿ.ಶ.800 ರಲ್ಲಿ ಗಂಗ ಅರಸರ ಕಾಲದ ಸೈಗೊಟ್ಟ ಶಿವರಾಮ ಆನೆಗಳನ್ನು ಪಳಗಿಸಿ-ಉಪಯೋಗಿಸಿಕೊಳ್ಳುವ ತಾಂತ್ರಿಕ ಕಲೆಯನ್ನು ಪರಿಚಯಿಸುವ ಪುಸ್ತಕ ಬರೆದಿದ್ದರೆ. ಅದು ಯಾವುದು?


- ಗಜಶಾಸ್ತ್ರ.


144) ಕ್ರಿ.ಶ.942-1025 ರಲ್ಲಿ 2ನೇ ಚಾವುಂಡರಾಯ ಬಂಡೆಕಲ್ಲು ಒಡೆಯುವ ಕ್ರಮ, ಹಣ್ಣುಗಳಲ್ಲಿ ಬೀಜವಿಲ್ಲದಂತೆ ಮಾಡುವ ಕಲೆ, ಕ್ಷಯ ನಿವಾರಣೆ, ವಿಷವನ್ನು ಶಮನ ಮಾಡುವ ಬಗೆ, ಬುದ್ದಿವರ್ಧನೆಗೆ ಔಷಧೋಪಚಾರ ಹೇಗೆ ಎಂಬುದರ ಬಗ್ಗೆ ಯಾವ ಪುಸ್ತಕದಲ್ಲಿ ದಾಖಲಿಸಿದ್ದಾರೆ?


- ಲೋಕೋಪಕಾರ.


145) ಕನ್ನಡದಲ್ಲಿ ಮೊದಲ ಜ್ಯೋತಿಷ್ಯ ಶಾಸ್ತ್ರ ಎಂದು ಪರಿಗಣಿಸಲ್ಪಡುವ ಜಾತಕ ತಿಲಕ ಎಂಬ ಕೃತಿಯನ್ನು ಯಾರು ರಚಿಸಿದ್ದರು?


- ಕ್ರಿ.ಶ. 1049 ರಲ್ಲಿ ಶ್ರೀಧರಾಚಾರ್ಯ.


146) ಮೊದಲ ವೈದ್ಯ ಶಾಸ್ತ್ರ ಗ್ರಂಥ ಯಾವುದು? ಯಾವಾಗ? ಯಾರು ಬರೆದರು?


- ಕ್ರಿ.ಶ. 1150ರಲ್ಲಿ ಜಗದ್ಧಳ ಸೋಮನಾಥರ ಕಲ್ಯಾಣಕಾರವೆಂಬ.


147) ಕ್ರಿ.ಶ.1300 ರಲ್ಲಿ ಮಳೆ, ಬೆಳೆ ,ನೀರು ,ಹವಾಮಾನ, ವಾಯುಗುಣ, ಬಿತ್ತನೆ ಮತ್ತು ಅಂತರ್ಜಲ ಇರುವ ಸ್ಥಳವನ್ನು ಕರಾರುವಕ್ಕಾಗಿ ಕಂಡು ಹಿಡಿಯುವ ಬಗೆ ಇತ್ಯಾದಿಗಳನ್ನು ಕುರಿತ ವಿಷಯಗಳನ್ನು ರಟ್ಟಶಾಸ್ತ್ರ ಎಂಬ ಪುಸ್ತಕವನ್ನು ಬರೆದವರು ಯಾರು?


- ರಟ್ಟಕವಿ ಎಂಬ ಕೃಷಿ ವಿಜ್ಞಾನಿ.


148) ಮಹಾರಾಷ್ಟ್ರದಲ್ಲಿ ಜಕಣಾಚಾರ್ಯರು ಕಟ್ಟಿದ ಕಟ್ಟಡಗಳನ್ನೂ ಏನೆಂದು ಕರೆಯುತಾರೆ?


- "ಹೇಮಾಡಪಂತೀ" ಗುಡಿಗಳು.
149. ಶ್ರೀ ಕೃಷ್ಣದೇವರಾಯ ಯಾವ ವಂಶಕ್ಕೆ ಸೇರಿದವನು ?


- ತುಳು



150. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಯಾವಾಗ ಜರುಗಿತು?



-1857