Thursday, April 17, 2014

ಮೆಚ್ಚುಗೆಯ ಮಾತುಗಳು ಮುತ್ತಿನಂತಿದ್ದರೆ
ಮತ್ತು ಬರುವದು ಗೆಳತಿ ಮೈಯ ಮರೆತು

ಮಾತು ಮಾತಿನಲಿ ಹ್ರಸ್ವಸ್ವರವಿರಲು
ಜಗದಲ್ಲಿ ಜೀವನವೇ ದೀರ್ಘಸ್ವರವು

ಅದುವೇ ಮಧುರ ಮಾಧುರ್ಯದ ಸರಿಗಮ
ಅದಕ್ಕೆ ಬೇರೆ ಸಾಟಿ ಇಲ್ಲದ ಸನಿದಪ


ತಾಯಿಯಿಲ್ಲದ ಜನ್ಮ ತಬ್ಬಲಿಯಾದಂತೆ
ದೇವರಿಲ್ಲದ ಪ್ರಪಂಚ ನರಕ ಸದೃಶ್ಯ
ದೇವನೊಬ್ಬ ನಾಮ ಹಲವಾದರು
ಪೂಜಿಸುವ ಪುಣ್ಯಕಾರ್ಯ ಪರಮ ಸದೃಶ್ಯ
ತಪ್ಪು ಮಾಡಿದವರನ್ನು ತಿದ್ದಿ ನಡೆಸುವ ದೇವರು
ತಪ್ಪು ಮಾಡದಂತೆ ಎಚ್ಚರಿಸುವ ದೇವರು
ದೇವರಿಲ್ಲದ ಪ್ರಪಂಚ ನರಕ ಸದೃಶ್ಯ
ದೇವರಿದ್ದರೆ ಅದುವೇ ಸ್ವರ್ಗ ಸದೃಶ್ಯ


ಮೌನವೇತಕೆ ಮುತ್ತು ಹೊತ್ತು ಕಳೆಯುತಿಹುದು
ತುತ್ತು ತಿನ್ನುವ ಬಯಕೆ ಮತ್ತೆ ಬರುತಿಹದು

ಮುತ್ತು ಪೋಣಿಸುವ ಮಾತು ಸಕ್ಕರೆಯ ಸಿಹಿ
ನಕ್ಕು ನಲಿದರೆ ಬಾಳು ಹಾಲು ಜೇನಂತ ಸಿಹಿ

:- ಕಾವೆಂಶ್ರೀನಿವಾಸಮೂರ್ತಿ
ಬೆಂಗಳೂರು
 ದಿನಾಂಕ : 25.03.2014


No comments:

Post a Comment