ಮೆಚ್ಚುಗೆಯ ಮಾತುಗಳು ಮುತ್ತಿನಂತಿದ್ದರೆ
ಮತ್ತು ಬರುವದು ಗೆಳತಿ ಮೈಯ ಮರೆತು
ಮಾತು ಮಾತಿನಲಿ ಹ್ರಸ್ವಸ್ವರವಿರಲು
ಜಗದಲ್ಲಿ ಜೀವನವೇ ದೀರ್ಘಸ್ವರವು
ಅದುವೇ ಮಧುರ ಮಾಧುರ್ಯದ ಸರಿಗಮ
ಅದಕ್ಕೆ ಬೇರೆ ಸಾಟಿ ಇಲ್ಲದ ಸನಿದಪ
ತಾಯಿಯಿಲ್ಲದ ಜನ್ಮ ತಬ್ಬಲಿಯಾದಂತೆ
ದೇವರಿಲ್ಲದ ಪ್ರಪಂಚ ನರಕ ಸದೃಶ್ಯ
ದೇವನೊಬ್ಬ ನಾಮ ಹಲವಾದರು
ಪೂಜಿಸುವ ಪುಣ್ಯಕಾರ್ಯ ಪರಮ ಸದೃಶ್ಯ
ತಪ್ಪು ಮಾಡಿದವರನ್ನು ತಿದ್ದಿ ನಡೆಸುವ ದೇವರು
ತಪ್ಪು ಮಾಡದಂತೆ ಎಚ್ಚರಿಸುವ ದೇವರು
ದೇವರಿಲ್ಲದ ಪ್ರಪಂಚ ನರಕ ಸದೃಶ್ಯ
ದೇವರಿದ್ದರೆ ಅದುವೇ ಸ್ವರ್ಗ ಸದೃಶ್ಯ
ಮೌನವೇತಕೆ ಮುತ್ತು ಹೊತ್ತು ಕಳೆಯುತಿಹುದು
ತುತ್ತು ತಿನ್ನುವ ಬಯಕೆ ಮತ್ತೆ ಬರುತಿಹದು
ಮುತ್ತು ಪೋಣಿಸುವ ಮಾತು ಸಕ್ಕರೆಯ ಸಿಹಿ
ನಕ್ಕು ನಲಿದರೆ ಬಾಳು ಹಾಲು ಜೇನಂತ ಸಿಹಿ
:- ಕಾವೆಂಶ್ರೀನಿವಾಸಮೂರ್ತಿ
ಬೆಂಗಳೂರು
ದಿನಾಂಕ : 25.03.2014
ಮತ್ತು ಬರುವದು ಗೆಳತಿ ಮೈಯ ಮರೆತು
ಮಾತು ಮಾತಿನಲಿ ಹ್ರಸ್ವಸ್ವರವಿರಲು
ಜಗದಲ್ಲಿ ಜೀವನವೇ ದೀರ್ಘಸ್ವರವು
ಅದುವೇ ಮಧುರ ಮಾಧುರ್ಯದ ಸರಿಗಮ
ಅದಕ್ಕೆ ಬೇರೆ ಸಾಟಿ ಇಲ್ಲದ ಸನಿದಪ
ತಾಯಿಯಿಲ್ಲದ ಜನ್ಮ ತಬ್ಬಲಿಯಾದಂತೆ
ದೇವರಿಲ್ಲದ ಪ್ರಪಂಚ ನರಕ ಸದೃಶ್ಯ
ದೇವನೊಬ್ಬ ನಾಮ ಹಲವಾದರು
ಪೂಜಿಸುವ ಪುಣ್ಯಕಾರ್ಯ ಪರಮ ಸದೃಶ್ಯ
ತಪ್ಪು ಮಾಡಿದವರನ್ನು ತಿದ್ದಿ ನಡೆಸುವ ದೇವರು
ತಪ್ಪು ಮಾಡದಂತೆ ಎಚ್ಚರಿಸುವ ದೇವರು
ದೇವರಿಲ್ಲದ ಪ್ರಪಂಚ ನರಕ ಸದೃಶ್ಯ
ದೇವರಿದ್ದರೆ ಅದುವೇ ಸ್ವರ್ಗ ಸದೃಶ್ಯ
ಮೌನವೇತಕೆ ಮುತ್ತು ಹೊತ್ತು ಕಳೆಯುತಿಹುದು
ತುತ್ತು ತಿನ್ನುವ ಬಯಕೆ ಮತ್ತೆ ಬರುತಿಹದು
ಮುತ್ತು ಪೋಣಿಸುವ ಮಾತು ಸಕ್ಕರೆಯ ಸಿಹಿ
ನಕ್ಕು ನಲಿದರೆ ಬಾಳು ಹಾಲು ಜೇನಂತ ಸಿಹಿ
:- ಕಾವೆಂಶ್ರೀನಿವಾಸಮೂರ್ತಿ
ಬೆಂಗಳೂರು
ದಿನಾಂಕ : 25.03.2014
No comments:
Post a Comment