ಕನ್ನಡ ನಾಡಿನ ಚಿನ್ನದ ಬೀಡು
ನಮ್ಮಯ ಹೆಮ್ಮೆಯ ಕೋಲಾರ ಜಿಲ್ಲೆ
ಚಾಳುಕ್ಯ ಚೋಳರ ಯುದ್ದದ ಬೀಡು
ವಿಷ್ಣುವರ್ಧನನ ನೆಲೆಬೀಡು
ಗಂಗರ ಹೆಮ್ಮೆಯ ರಾಜದಾನಿಯಿದು
ನಮ್ಮಯ ಹೆಮ್ಮೆಯ ಕೋಲಾರ ಜಿಲ್ಲೆ
ಆಂದ್ರಕ್ಕೆ ಅಂಟಿದ ಅಂದದ ಬೀಡು,
ತಮಿಳುನಾಡಿಗಿದು ಹೆದ್ದಾರಿ
ನಂದಿ ದೇಗುಲದ ನಮ್ಮಯ ನಾಡು
ಕೋಲಾರಮ್ಮನ ಅಶೀರ್ವಾದಕೆ
ಸೋಮೇಶ್ವೇರನ ಸಹಾಯ ಹಸ್ತ
ಜಿಲ್ಲೆಯ ಜೀವಾಳ ಅಂತರಗಂಗೆ
ಪಾಪವ ತೊಳೆಯುವ ಪಾವನ ಗಂಗೆ
ಮೂಡಲ ದಿಕ್ಕಿನ ಮುಳಬಾಗಿಲು
ಸಿಹಿ ಸಿಹಿ ಮಾವಿನ ಶ್ರೀನಿವಾಸ ಪುರ
ಬಂಗಾರ ಬೆಳೆವ ಬಂಗಾರುಪೇಟೆ,
ಕರಗದ ಖ್ಯಾತಿಯ ಮಾಲೂರು
ನಮ್ಮಯ ಹೆಮ್ಮೆಯ ಕೋಲಾರ ಜಿಲ್ಲೆ
ಶಿಲ್ಪಿ ಖ್ಯಾತಿಯ ಶಿವಾರಪಟ್ಟಣ, ಶಿವ ಸಾನಿಧ್ಯದ ಕೋಟಿಲಿಂಗೇಶ್ವರ
ಕೂಗಳತೆಯಲಿಹ ಕುರುಡುಮಲೇ ಗಣಪ
ಸುಂದರ ಲಕ್ಷ್ಮಿ ವೆಂಕಟರಮಣ ಸ್ವಾಮಿ
ಜನತೆಯ ನೆಮ್ಮದಿಗೆ ಬಾರದು ಭಂಗ
ಕಾಯುವುದು ನಮ್ಮನು ಶ್ರತಶೃಂಗ
ಕನ್ನಡ ನಾಡೀನ ಕೀರ್ತಿಯ ಬೆಳಗುವ
ನಮ್ಮಯ ಹೆಮ್ಮೆಯ ಕೋಲಾರ ಜಿಲ್ಲೆ
ಕನ್ನಡದಾಸ್ತಿಯ ಮಾಸ್ತಿಯ ನಾಡು
ಕವಿ ಗುಂಡಪ್ಪನ ಕಲಿ ನಾಡು
ವಿಶ್ವ ಖ್ಯಾತಿಯ ವಿಶ್ವೇಶ್ವರಯ್ಯ ಹುಟ್ಟಿದ
ಪ್ರಥಮ ಮುಖ್ಯ ಮಂತ್ರಿಯ ರೆಡ್ಡಿಯ ಜಿಲ್ಲೆ
ಹೈದರಾಲಿಯ ಜನ್ಮಸ್ಥಳವಿದು
ಸೌಂಧರ್ಯ ತಾರೆಯ ಸುಂದರ ಜಿಲ್ಲೆ
ನಮ್ಮಯ ಹೆಮ್ಮೆಯ ಕೋಲಾರ ಜಿಲ್ಲೆ
:- ಕಾವೆಂಶ್ರೀನಿವಾಸಮೂರ್ತಿ
ಬೆಂಗಳೂರು
ದಿನಾಂಕ : 25.03.2014
ನಮ್ಮಯ ಹೆಮ್ಮೆಯ ಕೋಲಾರ ಜಿಲ್ಲೆ
ಚಾಳುಕ್ಯ ಚೋಳರ ಯುದ್ದದ ಬೀಡು
ವಿಷ್ಣುವರ್ಧನನ ನೆಲೆಬೀಡು
ಗಂಗರ ಹೆಮ್ಮೆಯ ರಾಜದಾನಿಯಿದು
ನಮ್ಮಯ ಹೆಮ್ಮೆಯ ಕೋಲಾರ ಜಿಲ್ಲೆ
ಆಂದ್ರಕ್ಕೆ ಅಂಟಿದ ಅಂದದ ಬೀಡು,
ತಮಿಳುನಾಡಿಗಿದು ಹೆದ್ದಾರಿ
ನಂದಿ ದೇಗುಲದ ನಮ್ಮಯ ನಾಡು
ಕೋಲಾರಮ್ಮನ ಅಶೀರ್ವಾದಕೆ
ಸೋಮೇಶ್ವೇರನ ಸಹಾಯ ಹಸ್ತ
ಜಿಲ್ಲೆಯ ಜೀವಾಳ ಅಂತರಗಂಗೆ
ಪಾಪವ ತೊಳೆಯುವ ಪಾವನ ಗಂಗೆ
ಮೂಡಲ ದಿಕ್ಕಿನ ಮುಳಬಾಗಿಲು
ಸಿಹಿ ಸಿಹಿ ಮಾವಿನ ಶ್ರೀನಿವಾಸ ಪುರ
ಬಂಗಾರ ಬೆಳೆವ ಬಂಗಾರುಪೇಟೆ,
ಕರಗದ ಖ್ಯಾತಿಯ ಮಾಲೂರು
ನಮ್ಮಯ ಹೆಮ್ಮೆಯ ಕೋಲಾರ ಜಿಲ್ಲೆ
ಶಿಲ್ಪಿ ಖ್ಯಾತಿಯ ಶಿವಾರಪಟ್ಟಣ, ಶಿವ ಸಾನಿಧ್ಯದ ಕೋಟಿಲಿಂಗೇಶ್ವರ
ಕೂಗಳತೆಯಲಿಹ ಕುರುಡುಮಲೇ ಗಣಪ
ಸುಂದರ ಲಕ್ಷ್ಮಿ ವೆಂಕಟರಮಣ ಸ್ವಾಮಿ
ಜನತೆಯ ನೆಮ್ಮದಿಗೆ ಬಾರದು ಭಂಗ
ಕಾಯುವುದು ನಮ್ಮನು ಶ್ರತಶೃಂಗ
ಕನ್ನಡ ನಾಡೀನ ಕೀರ್ತಿಯ ಬೆಳಗುವ
ನಮ್ಮಯ ಹೆಮ್ಮೆಯ ಕೋಲಾರ ಜಿಲ್ಲೆ
ಕನ್ನಡದಾಸ್ತಿಯ ಮಾಸ್ತಿಯ ನಾಡು
ಕವಿ ಗುಂಡಪ್ಪನ ಕಲಿ ನಾಡು
ವಿಶ್ವ ಖ್ಯಾತಿಯ ವಿಶ್ವೇಶ್ವರಯ್ಯ ಹುಟ್ಟಿದ
ಪ್ರಥಮ ಮುಖ್ಯ ಮಂತ್ರಿಯ ರೆಡ್ಡಿಯ ಜಿಲ್ಲೆ
ಹೈದರಾಲಿಯ ಜನ್ಮಸ್ಥಳವಿದು
ಸೌಂಧರ್ಯ ತಾರೆಯ ಸುಂದರ ಜಿಲ್ಲೆ
ನಮ್ಮಯ ಹೆಮ್ಮೆಯ ಕೋಲಾರ ಜಿಲ್ಲೆ
:- ಕಾವೆಂಶ್ರೀನಿವಾಸಮೂರ್ತಿ
ಬೆಂಗಳೂರು
ದಿನಾಂಕ : 25.03.2014
No comments:
Post a Comment