Thursday, April 17, 2014

ಸ್ನೇಹ ಬಂಧನಂ ಸೇತು ಬಂಧನಂ
ಸೇತು ಬಂಧನಂ ಸ್ನೇಹಬಂಧನಂ
ಸ್ನೇಹಂ ಶುಭಂ ಸ್ನೇಹಂ ಸಂಕಲ್ಪಂ
ಸ್ನೇಹ ಬ್ರಹ್ಮಂ ನಿರಂತರಂ ನಿಜಗುಣಂ
ಸ್ನೇಹಂ ನಿರಂತರಂ ಚಿರಂಜೀವಿಯಂ

ಕಣ್ಣುಮದ್ಯದ ಹುಣ್ಣು ಕಾಡುವುದಿಲ್ಲ ಎಂದಿಗೂ
ಕನ್ನಡಿಯೊಳಗಿನ ಗಂಟು ಸಿಗುವಿದಿಲ್ಲ ಎಂದಿಗೂ
ಅದರೂ ಬೇಕೆ ಬೇಕು ಕನ್ನಡಿ ದೆಹ ಸಿರಿಯ ನೋಡಲು
ಸತ್ಯವಾದ ಮಾತು ಇದು ಆತ್ಮತಿಳಿಯಲು ಬೇಕು ಸ್ನೇಹದ ನಂಟು


ದೇಹದ ಅಣು ಅಣುವಿನಲ್ಲೂ ತುಂಬಿದೆ ಮಣ್ಣು
ಕಾರಣ ದೇಹದ ಮೂಲವೇ ಮಣ್ಣು
ಮುಂದೆ ಸೇರುವುದು ದೇಹ ಇದೇ ಮಣ್ಣು
ಪಂಚಭೂತಗಳ ಪ್ರಥಮ ಮಣ್ಣು
ಪರಮ ಕಾರ್ಯಕ್ಕೆ ಬೇಕೆ ಬೇಕು ಮಣ್ಣು

:- ಕಾವೆಂಶ್ರೀನಿವಾಸಮೂರ್ತಿ
ಬೆಂಗಳೂರು
ದಿನಾಂಕ : 25.03.2014




No comments:

Post a Comment