Thursday, April 17, 2014


ಬರಲಾರೆ ನಾನು ಬರಲಾರೆ
ಬಂದರೂ ನಾನು ತಿರುಗಿ ನೋಡಲಾರೆ
ನೋಡೀದರೂ ಮನಸ್ಸು ಮುರಿಯಲಾರೆ
ಮುರಿದರೂ ಮೊತ್ತೆಮ್ಮೆ ಜೋಡೀಸಲಾರೆ

ಹೊತ್ತು ಕಳೆದರು ಮತ್ತೆ ಸಿಗಲು ಸಾದ್ಯವಿಲ್ಲ
ಮುತ್ತು ಕಳೆದರೆ ಸಿಗದೇ ಇರಲು ಸಾಧ್ಯವಿಲ್ಲ
ಹೊತ್ತು ಮುತ್ತುಗಳ ನಡುವೆ ತುತ್ತು ಮರೆಯದಿರು
ಕತ್ತು ಒಣಗಿ ಜೀವಕೆ ಕುತ್ತು ಬರುವುದು

ಬಾಳ ನೌಕೆಯ ಒಳಗೆ ನೀರು ಇರುವುದಿಲ್ಲ
ಬಗ್ಗಿ ನೋಡಿದರೆ ಕೆಳಗೆ ಸಾಗರ ಸಮುದ್ರವೇ ಎಲ್ಲಾ
ಎಚ್ಚರಿಕೆ ವಹಿಸಿದರೆ ಸಿಗುವುದು ದಡ
ಎಚ್ಚರ ತಪ್ಪಿದರೆ ಸೇರುವುದು ಸಾಗರ ಸಮುದ್ರದ ಬುಡ

:- ಕಾವೆಂಶ್ರೀನಿವಾಸಮೂರ್ತಿ
ಬೆಂಗಳೂರು
 ದಿನಾಂಕ : 25.03.2014



No comments:

Post a Comment