ಬರಲಾರೆ ನಾನು ಬರಲಾರೆ
ಬಂದರೂ ನಾನು ತಿರುಗಿ ನೋಡಲಾರೆ
ನೋಡೀದರೂ ಮನಸ್ಸು ಮುರಿಯಲಾರೆ
ಮುರಿದರೂ ಮೊತ್ತೆಮ್ಮೆ ಜೋಡೀಸಲಾರೆ
ಹೊತ್ತು ಕಳೆದರು ಮತ್ತೆ ಸಿಗಲು ಸಾದ್ಯವಿಲ್ಲ
ಮುತ್ತು ಕಳೆದರೆ ಸಿಗದೇ ಇರಲು ಸಾಧ್ಯವಿಲ್ಲ
ಹೊತ್ತು ಮುತ್ತುಗಳ ನಡುವೆ ತುತ್ತು ಮರೆಯದಿರು
ಕತ್ತು ಒಣಗಿ ಜೀವಕೆ ಕುತ್ತು ಬರುವುದು
ಬಾಳ ನೌಕೆಯ ಒಳಗೆ ನೀರು ಇರುವುದಿಲ್ಲ
ಬಗ್ಗಿ ನೋಡಿದರೆ ಕೆಳಗೆ ಸಾಗರ ಸಮುದ್ರವೇ ಎಲ್ಲಾ
ಎಚ್ಚರಿಕೆ ವಹಿಸಿದರೆ ಸಿಗುವುದು ದಡ
ಎಚ್ಚರ ತಪ್ಪಿದರೆ ಸೇರುವುದು ಸಾಗರ ಸಮುದ್ರದ ಬುಡ
:- ಕಾವೆಂಶ್ರೀನಿವಾಸಮೂರ್ತಿ
ಬೆಂಗಳೂರು
ದಿನಾಂಕ : 25.03.2014
No comments:
Post a Comment